ಶಿವಾನಂದ ಗೊಂಬಿ
ಗೋವು ಸಂರಕ್ಷಣೆ, ಗೋವಿಗೆ ರಾಷ್ಟ್ರಮಾತೆಯ ಗೌರವ ಸೇರಿದಂತೆ ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಸಾಧು-ಸಂತರ ನೇತೃತ್ವದಲ್ಲಿ ನಡೆಯುತ್ತಿರುವ ‘ಗೋ ಸಮ್ಮಾನ ಆಹ್ವಾನ ಅಭಿಮಾನ’ಕ್ಕೆ ಭಾರಿ ಬೆಂಬಲ ವ್ಯಕ್ತವಾಗುತ್ತಿದೆ.
ಗೋವನ್ನು ರಾಷ್ಟ್ರಮಾತೆಯನ್ನಾಗಿ ಘೋಷಿಸುವವರೆಗೂ ಅಭಿಯಾನ ನಿಲ್ಲದು ಎಂಬ ಎಚ್ಚರಿಕೆ ಸಂದೇಶ ಸಾರುತ್ತಿದ್ದು, ಈವರೆಗೆ 20 ಕೋಟಿ ಜನರು ಸಹಿ ಮಾಡುವ ಮೂಲಕ ಅಭಿಯಾನದಲ್ಲಿ ಪಾಲ್ಗೊಂಡಿದ್ದಾರೆ.ಏನಿದು ಅಭಿಯಾನ?:
ಇದಾದ ಬಳಿಕ ಜು.27ರಂದು 15 ಕೋಟಿ ಜನರಿಂದ ಸಹಿ ಸಂಗ್ರಹಿಸಿ ದೇಶದ ಎಲ್ಲ ಜಿಲ್ಲಾಧಿಕಾರಿ ಮೂಲಕ ಮನವಿ ಸಲ್ಲಿಸಲಾಯಿತು. ಇದೀಗ 3ನೇ ಹಂತದಲ್ಲಿ 31 ಕೋಟಿ ಜನರಿಂದ ಸಹಿ ಸಂಗ್ರಹಿಸಿ ಡಿ.17ಕ್ಕೆ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳ ಮೂಲಕ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲು ನಿರ್ಧರಿಸಲಾಗಿದೆ.
ಕರ್ನಾಟಕದಲ್ಲಿ ಈವರೆಗೆ 15 ಲಕ್ಷ ಜನ ಸಹಿ ಸಂಗ್ರಹದಲ್ಲಿ ಪಾಲ್ಗೊಂಡಿದ್ದು, ಡಿ.17ರೊಳಗೆ 3 ಕೋಟಿ ಜನರಿಂದ ಸಹಿ ಸಂಗ್ರಹಿಸಲಾಗುವುದು. ಬೆಂಗಳೂರಲ್ಲಿ 3 ಲಕ್ಷ ಜನ ಸೇರಿ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಗುತ್ತಿದೆ ಎಂದು ಕರ್ನಾಟಕದಲ್ಲಿ ಇದರ ಹೊಣೆ ಹೊತ್ತಿರುವ ಆರೂಢ ಭಾರತೀ ಶ್ರೀಗಳು ತಿಳಿಸಿದ್ದಾರೆ.
ಒಟ್ಟಿನಲ್ಲಿ ಗೋ ಸಮ್ಮಾನ ಆಹ್ವಾನ ಅಭಿಯಾನಕ್ಕೆ ಭಾರೀ ಬೆಂಬಲವಂತೂ ವ್ಯಕ್ತವಾಗುತ್ತಿದೆ. ಕೇಂದ್ರ ಸರ್ಕಾರ ಯಾವ ರೀತಿ ಸ್ಪಂದಿಸುತ್ತದೆ ಎಂಬುದನ್ನು ಕಾಯ್ದು ನೋಡಬೇಕಷ್ಟೇ!ಬೇಡಿಕೆಗಳು:
- ಗೋವನ್ನು ರಾಷ್ಟ್ರಮಾತೆಯೆಂದು ಘೋಷಿಸಬೇಕು
- ಸಾವಯವ ಕೃಷಿ, ಗೋಬರ್ ಗ್ಯಾಸ್ಗೆ ಹೆಚ್ಚಿನ ಒತ್ತು ನೀಡುವ ಮೂಲಕ ಗೋ ಸಂರಕ್ಷಣೆಗೆ ಒತ್ತು ನೀಡಬೇಕು.
ಬೃಂದಾವನದಲ್ಲಿ 2025ರ ನವೆಂಬರ್ನಲ್ಲಿ ನಡೆದ ಸಾಧು-ಸಂತರ ಸಭೆಯಲ್ಲಿ ಗೋ ರಕ್ಷಣೆಗಾಗಿ ಅಭಿಯಾನ ನಡೆಸಲು ತೀರ್ಮಾನಿಸಲಾಗಿತ್ತು. 2 ಹಂತದಲ್ಲಿ 20 ಕೋಟಿ ಜನರಿಂದ ಸಹಿ ಸಂಗ್ರಹಿಸಿ ಮನವಿ ಸಲ್ಲಿಸಲಾಗಿದೆ. 3ನೇ ಹಂತದಲ್ಲಿ ಮುಖ್ಯಮಂತ್ರಿಗಳಿಂದ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು. ಕರ್ನಾಟಕದಲ್ಲಿ 3 ಕೋಟಿ ಜನ ಸಹಿ ಸಂಗ್ರಹದಲ್ಲಿ ಪಾಲ್ಗೊಳ್ಳುವಂತೆ ಮಾಡುವ ಗುರಿ ಇದೆ.
- ಆರೂಢ ಭಾರತೀ ಶ್ರೀಗಳು, ಅಭಿಯಾನ ಕರ್ನಾಟಕ ಉಸ್ತುವಾರಿ, ಗೋ ಸಮ್ಮಾನ್ ಅಭಿಯಾನ.