ಕೊಟ್ಟೂರಲ್ಲಿ ಒಂದೇ ರಾತ್ರಿ 3 ಮನೆ ಕಳವು

KannadaprabhaNewsNetwork |  
Published : Oct 05, 2025, 01:01 AM IST
ಕೊಟ್ಟೂರಿನಲ್ಲಿನ ರೇಣುಕಬಡಾವಣೆಯ ಶೀಲವಂತರ ಮಂಜುನಾಥ ಮನೆಯಲ್ಲಿ ಕಳ್ಳ ತನ ಮಾಡಿರುವ ಕಳ್ಳ ಮನೆಯಲ್ಲಿನ ಸಮಾನುಗಳನ್ನು ಚಲ್ಲಾಪಿಲ್ಲಿಯಾಗಿ ಬಿಸಾಕಿರುವುದು | Kannada Prabha

ಸಾರಾಂಶ

ಇದೇ ರಾತ್ರಿ ರಾಜು ಎಂಬುವರ ಮನೆಯಲ್ಲಿನ ₹40 ಸಾವಿರ ಮತ್ತಿತರ ಸಾಮಗ್ರಿಗಳನ್ನು ಅಪಹರಿಸಲಾಗಿದೆ.

ಕೊಟ್ಟೂರು: ಪಟ್ಟಣದ ಮುದುಕನಕಟ್ಟೆ, ರೇಣುಕಾ ಬಡಾವಣೆಯಲ್ಲಿನ ಮೂರು ಮನೆಗಳಿಗೆ ಶುಕ್ರವಾರ ಮಧ್ಯರಾತ್ರಿ ಕಳ್ಳರು ಕಳ್ಳತನ ಮಾಡಿ ಪರಾರಿಯಾದರೆ, ಇನ್ನು ಪ್ರತ್ಯೇಕ ಮೂರು ಕಡೆ ಕಳವು ಯತ್ನ ನಡೆದಿದೆ.

ಇಲ್ಲಿನ ಮುದುಕನಕಟ್ಟೆ ಪ್ರದೇಶದಲ್ಲಿನ ಅಂಗಡಿ ವಿರೂಪಾಕ್ಷಪ್ಪ ಎಂಬುವರ ಮನೆಯ ಬೀಗ ಮುರಿದು ಮನೆಯೊಳಗೆ ಇದ್ದ ಗಾಡ್ರೇಜ್‌ಗಳನ್ನು ಕಿತ್ತು ಅದರಲ್ಲಿನ 40 ಗ್ರಾಂ ಬಂಗಾರದ ನೆಕ್ಲೇಸ್‌, 5 ಗ್ರಾಂ ಬಂಗಾರದ ಜುಮುಕಿ, ₹24 ಸಾವಿರ ಮೌಲ್ಯದ 6 ಗ್ರಾಂ ತೂಕದ 2 ಉಂಗುರ, 2 ತಟ್ಟೆ ಸೇರಿದಂತೆ ₹97 ಸಾವಿರ ಮೌಲ್ಯದ ಬೆಲೆಬಾಳುವ ಬಂಗಾರ ಮತ್ತು ಬೆಳ್ಳಿ ಆಭರಣಗಳನ್ನು ದೋಚಿಕೊಂಡು ಪರಾರಿಯಾಗಿದ್ದಾನೆ ಎಂದು ಹೇಳಲಾಗಿದೆ.

ಇದೇ ರಾತ್ರಿ ರಾಜು ಎಂಬುವರ ಮನೆಯಲ್ಲಿನ ₹40 ಸಾವಿರ ಮತ್ತಿತರ ಸಾಮಗ್ರಿಗಳನ್ನು ಅಪಹರಿಸಲಾಗಿದೆ. ಪಟ್ಟಣದ ರೇಣುಕಾ ಬಡಾವಣೆಯಲ್ಲಿನ ಶೀಲವಂತರ ಮಂಜುನಾಥ ಎಂಬವರು ಕುಟುಂಬ ಸಮೇತರಾಗಿ ಬೆಂಗಳೂರಿಗೆ ತೆರಳಿದ್ದ ಅವಧಿಯಲ್ಲಿ ಅವರ ಮನೆಯ ಬೀಗವನ್ನು ಹೊಡೆದು ಮನೆಯಲ್ಲಿನ ಅಲ್ಮಾರದಲ್ಲಿನ 1 ತೊಲೆ ಬಂಗಾರ, ಬೆಳ್ಳಿ ಸಾಮಗ್ರಿ ಮತ್ತು ₹30 ಸಾವಿರ ನಗದನ್ನು ಅಪಹರಿಸಿ ತೆರಳಿದ್ದಾನೆ ಎಂದು ಹೇಳಲಾಗಿದೆ. ಪಟ್ಟಣದ ಈ ಎರಡು ಪ್ರದೇಶದಲ್ಲಿನ ಮತ್ತೆ ಮೂರು ಮನೆಗಳ ಕಳ್ಳತನಕ್ಕೆ ಯತ್ನ ನಡೆದಿದೆ. ಕಳ್ಳತನ ನಡೆದಿರುವ ಮನೆಗಳಲ್ಲಿನ ನಿವಾಸಿಗಳು ಮನೆಗೆ ಬೀಗ ಜಡಿದು ಹೊರ ಹೋದದ್ದನ್ನು ಅರಿತು ಈ ಕೃತ್ಯ ಎಸಗಲಾಗಿದೆ ಎಂದು ತಿಳಿದುಬಂದಿದೆ.

ಕೊಟ್ಟೂರು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಡಿವೈಎಸ್‌ಪಿ ಮಲ್ಲೇಶ್‌ ದೊಡ್ಡನಾಯ್ಕ, ಸಿಪಿಐ ದುರ್ಗಪ್ಪ, ಪಿಎಸ್‌ಐ ಗೀತಾಂಜಲಿ ಸಿಂಧೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಸಿದರು. ಜಿಲ್ಲಾ ಕೇಂದ್ರದಿಂದ ಶ್ವಾನದಳ, ಬೆರಳಚ್ಚು ತಜ್ಞರು ಆಗಮಿಸಿದ್ದಾರೆ.

ಅನುಮಾನಾಸ್ಪದವಾಗಿ ಕಂಡರೆ ದೂರು ನೀಡಿ:

ಪಟ್ಟಣದ ನಾಗರಿಕರು ಅಪರಿಚಿತರು ತಮ್ಮ ಪ್ರದೇಶಗಳಲ್ಲಿ ಅನುಮಾನಾಸ್ಪದವಾಗಿ ಕಂಡು ಬಂದರೆ ಮತ್ತು ಕಳ್ಳತನದ ಮಾಹಿತಿ ದೊರೆತರೆ ಕೂಡಲೇ ಪೊಲೀಸ್‌ ಸಹಾಯವಾಣಿ 112 ಮತ್ತು 9480805700ಗೆ ಸಂಪರ್ಕಿಸಿ ಮಾಹಿತಿ ನೀಡಬೇಕೆಂದು ಡಿವೈಎಸ್ಪಿ ಮಲ್ಲೇಶ್‌ ದೊಡ್ಡನಾಯ್ಕ ಕರೆ ನೀಡಿದ್ದಾರೆ. ಪ್ರಕರಣದಿಂದ ನಾಗರಿಕರು ಭೀತಿಗೊಂಡಿದ್ದಾರೆ.

PREV

Recommended Stories

ಚಲನಚಿತ್ರ ಪ್ರಶಸ್ತಿ ಪಡೆದ ನಟ, ನಟಿ, ನಿರ್ದೇಶಕರ ಅಭಿಮತ
‘ಅಗತ್ಯ ಬಂದಾಗ ಸೂಕ್ತ ನಿರ್ಧಾರ ಕೈಗೊಳ್ಳೋ ಸಾಮರ್ಥ್ಯ ಪಕ್ಷಕ್ಕಿದೆ’