-ಎನ್ವಿ ಶಿಕ್ಷಣ ಸಂಸ್ಥೆಯ ಮಕ್ಕಳಿಂದ ವಂದೆ ಮಾತರಂ । ಜನಗಣ ಮನ, ಝಂಡಾ ಉಂಚಾ ರಹೇ ಹಮಾರಾ ಗೀತೆಗಳ ಗಾಯನ
ಕನ್ನಡಪ್ರಭ ವಾರ್ತೆ ಕಲಬುರಗಿ
ಕೋಟಿಕೋಟಿ ಕಂಠ ಕಲರವ ನಿನಾದ-ಕರವಾಲೇ, ಕೋಟಿ ಕೋಟಿ ಭುಜೈರ್ಧೃತ-ಖರ-ಕರವಾಲೇಅಬಲಾ ಕೇಯನೋ ಮಾ ಏತೋ ಬಲೇ, ಬಹುಬಲ ಧಾರಿಣೀಂ ನಮಾಮಿ ತಾರಿಣೀಂ, ರಿಪುದಲ-ವಾರಿಣೀಂ ಮಾತರಾಮ್.
ಜನಗಣ ಮನ ಅಧಿ ನಾಯಕ ಜಯ ಹೇ... ರಾಷ್ಟ್ರಗೀತೆ ಹೇಳುವಾಗ, ಝಂಢಾ ಉಂಚಾ ರಹ ಹಮಾರಾ, ವಿಜಯಿ ವಿಶ್ವ ತಿರಂಗಾ ಪ್ಯಾರಾ. ಹಾಡುವಾಗ ಸೇರಿದ್ದವರೆಲ್ಲರು ಗೌರವಭಾವದಿಂದ ಭಾರತ ಮಾತೆಯನ್ನು ನಮಿಸಿದರು.
ನೂತನ ವಿದ್ಯಾಲಯ ಶಿಕ್ಷಣಗೆ ಇದೀಗ 122 ವರ್ಷ. ಈ ಸಂಸ್ಥೆಯಡಿ ವಿವಿಧ ಶಾಲೆ, ಕಾಲೇಜುಗಳ 307 ಮಕ್ಕಳು ಈ ಬಾರಿಯ ಸ್ವಾತಂತ್ರ್ಯೋತ್ಸವಕ್ಕೆ ವಂದೇ ಮಾತರಂ, ಜನ ಗಣ ಮನ ಹಾಗೂ ಝಂಡಾ ಉಂಚಾ ರಹೇ ಹಮಾರಾ ರಾಷ್ಟ್ರೀಯ ಗೀತೆಗಳನ್ನು ಮೈದಾನದಲ್ಲಿ ನಾಳೆ ಬೆ. 7 ಗಂಟೆಗೆ ಹಾಡುವ ಮೂಲಕ ಸರ್ವರ ಗಮನ ಸೆಳೆಯಲಿದ್ದಾರೆ.
ಗ್ರ್ಯಾಂಡ್ ರಿಹರ್ಸಲ್: ಎನ್ವಿ ಕಾಲೇಜಿನ ಸಂಗೀತ ವಿಭಾಗದಿಂದ ಎಲ್ಲಾ ಮಕ್ಕಳಿಗೆ ಕಳೆದ 1 ವಾರದಿಂದ ಗೀತೆಗಳ ಗಾನದ ತರಬೇತಿ ನೀಡಲಾಗಿದೆ. ಸಂಗೀತ ವಿಭಾಗದ ಮುಖ್ಯಸ್ಥ ಮಹೇಶ ಬಡಿಗೇರ ಹಾಗೂ ತಂಡದವರು ಈ ತರೇತಿಯಲ್ಲಿ ಪಾಲ್ಗೊಂಡು ಮಕ್ಕಳು ಹೇಗೆ ಉಚ್ಛಾರಣೆ ಮಾಡಬೇಕು, ಹೇಗೆ ಒಕ್ಕೊರಲಿನಿಂದ ಗೀತೆಗಳಿಗೆ ಧ್ವನಿಯಾಗಬೇಕು ಎಂಬುದನ್ನೆಲ್ಲಾ ವಿವರಿಸಿದ್ದಾರೆ.
1ನೇ ತರಗತಿಯಿಂದ ಹಿಡಿದು ಬಿಎಡ್ ಕಾಲೇಜುವರೆಗಿನ ಆಯ್ದೆ 307 ಬಾಲಕ, ಬಾಲಕಿಯರು, ಯುವಕ, ಯುವತಿಯರು ಒಂದರ ಮೇಲೊಂದರಂತೆ ನಿರಂತರ ಗೀತೆಗಳನ್ನು ಪ್ರಸ್ತುತಪಡಿಸಿ ಚಪ್ಪಾಳೆ ಗಿಟ್ಟಿಸಿಕೊಂಡರು.
..ಬಾಕ್ಸ್..
ಗೀತ ಗಾಯನದಲ್ಲಿ ಪತ್ರಕರ್ತ ಶೇಷಮೂರ್ತಿ ಅವಧಾನಿ, ಲೋಕಮಾನ್ಯ ಬಾಲ ಗಂಗಾಧರ ತಿಲಕರ ದೇಶಭಕ್ತಿಯ ಪ್ರಭಾವ, ಸ್ಫೂತಿಯೊಂದಿಗೆ ವಿಠ್ಠಲರಾವ್ ದೇವುಳಗಾಂವ್ಕರ್ ಅನೇಕ ಹಿರಿಯರು ಕೂಡಿಕೊಂಡು ಈ ಶಾಲೆಯನ್ನು 122 ವರ್ಷಗಳ ಹಿಂದೆ ಸ್ಥಾಪಿಸಿದ್ದು ಗಾಂಧೀಜಿ ಭೇಟಿ ನೀಡಿರುವುದು ಹೆಗ್ಗಳಿಕೆ ಎನ್ವಿ ಶಾಲೆಗಿದೆ. ಅಕ್ಷರದ ಜೊತೆ ಮಕ್ಕಳಲ್ಲಿ ದೇಶಭಕ್ತಿ, ದೇಶಪ್ರೇಮ ತುಂಬುವ ಕೆಲಸ ನಿರಂತರ ಸಾಗಲೆಂದು ಹಾರೈಸಿದರು.
ಪತ್ರಕರ್ತ ರಾಮಕೃಷ್ಣ ಬಡಶೇಷಿ, ಜಯತೀರ್ಥ ಪಾಟೀಲ್, ಸಂಗಮನಾಥ ರೇವತಗಾಂವ್, ಕಾಲೇಜಿನ ಪ್ರಮುಖರಾದ ಡಾ. ಗೋವಿಂದ ಪೂಜಾರ್, ಜಾಹ್ನವಿ ಸೇರಿದಂತೆ ಹಲವರಿದ್ದರು.ಫೋಟೋ:
ತಿರಂಗಾ 1, ತಿರಂಗಾ 2 ಮತ್ತು ತಿರಂಗಾ 3ಕಲಬುರಗಿಯಲ್ಲಿರುವ ಎನ್ವಿ ಶಿಕ್ಷಣ ಸಂಸ್ಥೆಯ 307 ಮಕ್ಕಳು ವಂದೇ ಮಾತರಂ, ಜನಗಣ ಮನ ಸೇರಿದಂತೆ 3 ದೇಶಭಕ್ತಿ ಗೀತೆಗಳನ್ನು ಒಕ್ಕೊರಲಿನಿಂದ ಪ್ರಸ್ತುತ ಪಡಿಸಿ ಸಮೂಹ ಗಾಯನಕ್ಕೆ ಸಿದ್ಧರೆಂದು ಸಾರಿದರು.