ಶ್ರೀ ಶಿವಬೋಧರಂಗ ಸೊಸೈಟಿಗೆ ₹5.70 ಕೋಟಿ ಲಾಭ: ಬಸವರಾಜ ಗುಲಗಾಜಂಬಗಿ

KannadaprabhaNewsNetwork |  
Published : Sep 11, 2024, 01:08 AM IST
ಮೂಡಲಗಿ ಪಟ್ಟಣದಲ್ಲಿ  ಶ್ರೀ ಶಿವಬೋಧರಂಗ ಅರ್ಬನ್ ಕೋ-ಆಫ್ ಕ್ರೆಡಿಟ್ ಸೊಸೈಟಿಯ 29ನೇ ವಾರ್ಷಿಕ ಸರ್ವಸಾಧಾರಣ ಸಭೆಯನ್ನು ಅಧ್ಯಕ್ಷ ಬಿ.ವಿ. ಗುಲಗಾಜಂಬಗಿ ಮತ್ತು ನಿರ್ದೇಶಕರು ಉದ್ಘಾಟಿಸಿದರು. | Kannada Prabha

ಸಾರಾಂಶ

ಮೂಡಲಗಿಯ ಶ್ರೀ ಶಿವಬೋಧರಂಗ ಅರ್ಬನ್ ಸೊಸೈಟಿಯು 18 ಶಾಖೆಗಳನ್ನು ಹೊಂದಿದ್ದು, 5.70 ಕೋಟಿ ಲಾಭ ಗಳಿಸಿದೆ. ಷೇರುದಾರರಿಗೆ ಶೇ.16ರಷ್ಟು ಲಾಭಾಂಶ ವಿತರಿಸಿದೆ ಎಂದು ಎಂದು ಸೊಸೈಟಿ ಅಧ್ಯಕ್ಷ ಬಸವರಾಜ ಗುಲಗಾಜಂಬಗಿ ಹೇಳಿದರು.

ಕನ್ನಡಪ್ರಭ ವಾರ್ತೆ ಮೂಡಲಗಿ

ಶ್ರೀ ಶಿವಬೋಧರಂಗ ಅರ್ಬನ್ ಸೊಸೈಟಿಯು 18 ಶಾಖೆಗಳನ್ನು ಹೊಂದಿದ್ದು, ₹5.70 ಕೋಟಿ ಲಾಭ ಗಳಿಸಿದೆ. ಷೇರುದಾರರಿಗೆ ಶೇ.16ರಷ್ಟು ಲಾಭಾಂಶ ವಿತರಿಸಿದೆ ಎಂದು ಎಂದು ಸೊಸೈಟಿ ಅಧ್ಯಕ್ಷ ಬಸವರಾಜ ಗುಲಗಾಜಂಬಗಿ ಹೇಳಿದರು.

ಪಟ್ಟಣದ ಗುಡ್ಲಮಡ್ಡಿ ವೀರಭದ್ರೇಶ್ವರ ದೇವಸ್ಥಾನದ ಕೆ.ಎಚ್. ಸೋನವಾಲಕರ ಕಲ್ಯಾಣ ಮಂಟಪದಲ್ಲಿ ಜರುಗಿದ ಶ್ರೀ ಶಿವಬೋಧರಂಗ ಅರ್ಬನ್ ಕೋ ಆಫ್ ಕ್ರೆಡಿಟ್ ಸೊಸೈಟಿಯ 29ನೇ ವಾರ್ಷಿಕ ಸರ್ವ ಸಾಧಾರಣ ಸಭೆಯ ಅಧ್ಯಕ್ಷತೆ ವಹಿಸಿ, ಉದ್ಘಾಟಿಸಿ ಮಾತನಾಡಿದ ಅವರು, ಸೊಸೈಟಿಯು ಕಳೆದ ಮಾರ್ಚ್‌ ಅಂತ್ಯಕ್ಕೆ 15814 ಸದಸ್ಯರನ್ನು ಹೊಂದಿದೆ. ₹341 ಕೋಟಿ ಠೇವು ಸಂಗ್ರಹಿಸಿ, ₹393 ಕೋಟಿ ದುಡಿಯುವ ಬಂಡವಾಳ ಹೊಂದಿದೆ. ₹191 ಕೋಟಿ ಸಾಲ ನೀಡಿದೆ. ಒಟ್ಟು ₹1335 ಕೋಟಿ ವಾರ್ಷಿಕ ವಹಿವಾಟು ನಡೆಸಿದೆ ಎಂದ ಅವರು ಸೊಸೈಟಿಯು ಪ್ರಗತಿ ಪಥದಲ್ಲಿ ಸಾಗುವಲ್ಲಿ ಆಡಳಿತ ಮಂಡಳಿಯ ನಿಸ್ವಾರ್ಥ ಸೇವೆ, ಸಿಬ್ಬಂದಿ ಪರಿಶ್ರಮ ಹಾಗೂ ಸಕಾಲಕ್ಕೆ ಗ್ರಾಹಕರು ಸಾಲ ಪಾವತಿ ಮಾಡುತ್ತಿರುವುದೇ ಕಾರಣ ಎಂದರು.

ಮಮದಾಪುರ ಶಾಖೆಯ ಅಧ್ಯಕ್ಷ ಮಹಾದೇವ ಗಾಣಗಿ, ಸಾಲಗಾರರು ಪಡೆದುಕೊಂಡ ಸಾಲವನ್ನು ಸರಿಯಾದ ವೇಳೆಗೆ ಮರುಪಾವತಿಸಿದರೆ ಮಾತ್ರ ಸೊಸೈಟಿ ಇಷ್ಟೊಂದು ಪ್ರಗತಿ ಸಾಧಿಸಲು ಸಾಧ್ಯವಾಗಿದೆ ಎಂದರು.

ರಬಕವಿ ಶಾಖೆಯ ಸಲಹಾ ಸಮಿತಿ ಸದಸ್ಯ ಶಿವಾನಂದ ದಾಶಾಳ ಮಾತನಾಡಿ, ಸೊಸೈಟಿಯು ಬೆಳಗಾವಿ ಮತ್ತು ಬಾಗಲಕೋಟೆ ಜಿಲ್ಲೆಗಳಲ್ಲಿ ಮಾತ್ರ ಹೆಸರು ಗಳಿಸದೇ ರಾಜ್ಯದಲ್ಲಿಯೂ ತನ್ನ ಹೆಸರು ಪಸರಿಸಲು ಪ್ರಾಮಾಣಿಕ ಪ್ರಯತ್ನ ಮಾಡಬೇಕೆಂದರು.

ಸಭೆಯಲ್ಲಿ ಸೊಸೈಟಿ ಉಪಾಧ್ಯಕ್ಷ ಸುಭಾಸ ಆರ್. ಸೋನವಾಲಕರ, ನಿರ್ದೇಶಕರಾದ ರವೀಂದ್ರ ಪಿ.ಸೋನವಾಲಕರ, ಪುಲಿಕೇಶ ಆರ್. ಸೋನವಾಲಕರ, ಅಶೋಕ ಎಂ. ಹೊಸೂರ, ಡಾ.ಶಂಕರ ಎಸ್. ದಂಡಪ್ಪನವರ, ರೇವಪ್ಪ ಕುರಬಗಟ್ಟಿ, ವಿದ್ಯಾವತಿ ರ. ಸೋನವಾಲಕರ, ಶಾರದಾ ಬ. ಗುಲಗಾಜಂಬಗಿ, ಮಂಜುಳಾ ಶಿ. ಬಳಿಗಾರ, ಗಂಗವ್ವ ಕೆ.ಸಣ್ಣಪ್ಪನ್ನವರ, ಹಣಮಂತ ಎಸ್.ಸಣ್ಣಕ್ಕಿ ಹಾಗೂ 18 ಶಾಖೆಗಳ ಸಲಹಾ ಸಮಿತಿ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ಇದ್ದರು.

ಪ್ರಧಾನ ವ್ಯವಸ್ಥಾಪಕ ಸುರೇಶ ನಾಶಿ ಕ್ರೋಡೀಕೃತ ಅಢಾವೆ ಪತ್ರಿಕೆ, ಗುರ್ಲಾಪುರ ಶಾಖೆಯ ವ್ಯಸ್ಥಾಪಕ ವೆಂಕಟೇಶ ಬಾಲರಡ್ಡಿ ವರದಿ ವಾಚನ, ಜಮಖಂಡಿ ಶಾಖಾ ವ್ಯವಸ್ಥಾಪಕ ಅಶೋಕ ಹೊಸಟ್ಟಿ ಸಹಕಾರಿಯ ಲಾಭ-ಹಾನಿ, ಸಾವಳಗಿ ಶಾಖಾ ವ್ಯವಸ್ಥಾಪಕ ಆಸೀಫ್‌ ದೇಸಾಯಿ ಲಾಭ ವಿಂಗಡಣೆ ಮತ್ತು ಹಣಮಂತ ಕುಂಬಾರ ಅಂದಾಜು ಪತ್ರಿಕೆ ಮಂಡಿಸಿದರು. ಗುರ್ಲಾಪುರ ಶಾಖಾ ವ್ಯವಸ್ಥಾಪಕ ವಿ.ಎಚ್. ಬಾಲರಡ್ಡಿ ಸ್ವಾಗತಿಸಿ, ನಿರೂಪಿಸಿ, ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬೋಧನೆಯಲ್ಲಿ ತಂತ್ರಜ್ಞಾನ ಸಮರ್ಪಕವಾಗಿ ಬಳಸಿಕೊಳ್ಳಲಿ: ಪ್ರೊ. ಎ.ಎಂ. ಖಾನ್
ಮಾನಸಿಕ, ಶಾರೀರಿಕ ಸದೃಢತೆಗೆ ಕ್ರೀಡಾ ಉತ್ಸವಗಳು ಸಹಕಾರಿ: ಸಭಾಪತಿ ಹೊರಟ್ಟಿ