ಹೊಸಕೋಟೆ: ಹೊಸಕೋಟೆ ದಿ ಟೌನ್ ಕೋ ಆಪರೇಟೀವ್ ಬ್ಯಾಂಕ್ 2023-24ನೇ ಸಾಲಿನ ಆರ್ಥಿಕ ವರ್ಷದಲ್ಲಿ 5.05 ಕೋಟಿ ಲಾಭದಲ್ಲಿ ಮುನ್ನಡೆಯುತ್ತಿದ್ದು, ಇದಕ್ಕೆ ಕಾರಣರಾದ ಎಲ್ಲರಿಗೂ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ ಎಂದು ಹೊಸಕೋಟೆ ದಿ ಟೌನ್ ಕೋ-ಆಪರೇಟೀವ್ ಬ್ಯಾಂಕಿನ ಅಧ್ಯಕ್ಷ ಅಪ್ಸರ್ ತಿಳಿಸಿದರು.
ಟೌನ್ ಬ್ಯಾಂಕ್ ಉಪಾಧ್ಯಕ್ಷ ನಾಗರಾಜ್ ಮಾತನಾಡಿ, ಜಿಲ್ಲೆಯಲ್ಲಿರುವ ಸಹಕಾರ ಬ್ಯಾಂಕ್ಗಳಲ್ಲಿ ನಮ್ಮ ಬ್ಯಾಂಕ್ ನಂ.1ಸ್ಥಾನದಲ್ಲಿದೆ. ಇದಕ್ಕೆ ಕಾರಣರಾದ ಈ ಹಿಂದೆ ಬ್ಯಾಂಕಿನ ಎಲ್ಲಾ ಅಧ್ಯಕ್ಷ, ಉಪಾಧ್ಯಕ್ಷ, ನಿರ್ದೇಶಕರ ಶ್ರಮವನ್ನು ನಾವಿಂದು ಸ್ಮರಿಸಲೇಬೇಕಿದೆ. ಅಲ್ಲದೆ ಬ್ಯಾಂಕಿನ ಈ ಸಾಧನೆಗೆ ಸಹಕರಿಸಿದ ಬ್ಯಾಂಕಿನ ಅಧಿಕಾರಿ ಮತ್ತು ಸಿಬ್ಬಂದಿ ವರ್ಗಕ್ಕೆ ಅಭಿನಂದನೆಗಳನ್ನು ಸಲ್ಲಿಸುತ್ತೇವೆ ಎಂದರು.
ಬ್ಯಾಂಕಿನ ಉಪಾಧ್ಯಕ್ಷ ಬಿ.ನಾಗರಾಜ್, ನಿರ್ದೇಶಕರಾದ ಬಾಲಚಂದ್ರ, ನವೀನ್, ವೆಂಕಟಲಕ್ಷ್ಮಿ, ಜೀನತ್ ಉನ್ನೀಸಾ, ಅಮರೇಶ್, ನಾಗರಾಜ್, ರಾಜಶೇಖರ್, ಕಿರಣ್ಕುಮಾರ್, ಚಂದ್ರಶೇಖರ್ ಇತರರಿದ್ದರು.ಬಾಕ್ಸ್........ಸಂಕಷ್ಟದಲ್ಲಿದ್ದ ಬ್ಯಾಂಕ್ಗೆ ಎಂಟಿಬಿ ಸಹಕಾರಕಳೆದ ಎಂಟು ವರ್ಷಗಳ ಹಿಂದೆ ಶಶಿಧರ್ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಬ್ಯಾಂಕ್ ವ್ಯವಹಾರದಲ್ಲಿ ಸಂಕಷ್ಟದಲ್ಲಿದ್ದ ಬ್ಯಾಂಕ್ನಲ್ಲಿ ಎಂಟಿಬಿ ನಾಗರಾಜ್ ಅವರು ಠೇವಣಿ ಇಡುವ ಮೂಲಕ ಬ್ಯಾಂಕಿನ ಆರ್ಥಿಕ ವಹಿವಾಟಿಗೆ ಚೈತನ್ಯ ತುಂಬಿದರು. ಅವರನ್ನು ಇಂದು ಸ್ಮರಿಸಬೇಕಿದೆ. ಅದರ ಪರಿಣಾಮ ಬ್ಯಾಂಕ್ ವಹಿವಾಟು ಮಾಡಿ ಲಾಭಾಂಶದತ್ತ ಸಾಗಲು ಸಾಧ್ಯವಾಗಿದೆ ಎಂದು ಬ್ಯಾಂಕಿನ ಅಧ್ಯಕ್ಷ ಎ.ಅಪ್ಸರ್ ತಿಳಿಸಿದರು.
ಪೋಟೋ 02 ಹೆಚ್ ಎಸ್ ಕೆ 01ಹೊಸಕೋಟೆಯಲ್ಲಿ ಬ್ಯಾಂಕ್ ಅಧ್ಯಕ್ಷ ಅಪ್ಸರ್, ಉಪಾಧ್ಯಕ್ಷ ನಾಗರಾಜ್ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.