ಕೈಗಾರಿಕಾ ವೆಬ್‌ನಿಂದ 5 ಲಕ್ಷ ಉದ್ಯೋಗ ಸೃಷ್ಟಿ ಸಾಧ್ಯತೆ

KannadaprabhaNewsNetwork |  
Published : Sep 22, 2024, 01:56 AM IST
5 ಲಕ್ಷ ಉದ್ಯೋಗ ಸೃಷ್ಟಿ ಗುರಿ ಹೊಂದಲಾಗಿದೆ, ಗೃಹ ಸಚಿವ ಡಾ. ಜಿ ಪರಮೇಶ್ವರ್ ಅಭಿಮತ | Kannada Prabha

ಸಾರಾಂಶ

ತುಮಕೂರು: ನಗರದ ಹೊರವಲಯದ ಅಂತರಸನಹಳ್ಳಿಯಲ್ಲಿ ಚೆನ್ನೈ, ಮುಂಬೈ ಇಂಡಸ್ಟ್ರಿಯಲ್ ಕಾರಿಡಾರ್ ಮಾದರಿಯಲ್ಲಿ ಕೈಗಾರಿಕಾ ಪ್ರದೇಶದಲ್ಲಿ ಕೈಗಾರಿಕಾ ವೆಬ್ ತಲೆ ಎತ್ತಲಿದೆ. ಇದರಿಂದ 5 ಲಕ್ಷ ಉದ್ಯೋಗ ಸೃಷ್ಠಿಯಾಗುವ ಗುರಿಯಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ಹೇಳಿದರು.

ತುಮಕೂರು: ನಗರದ ಹೊರವಲಯದ ಅಂತರಸನಹಳ್ಳಿಯಲ್ಲಿ ಚೆನ್ನೈ, ಮುಂಬೈ ಇಂಡಸ್ಟ್ರಿಯಲ್ ಕಾರಿಡಾರ್ ಮಾದರಿಯಲ್ಲಿ ಕೈಗಾರಿಕಾ ಪ್ರದೇಶದಲ್ಲಿ ಕೈಗಾರಿಕಾ ವೆಬ್ ತಲೆ ಎತ್ತಲಿದೆ. ಇದರಿಂದ 5 ಲಕ್ಷ ಉದ್ಯೋಗ ಸೃಷ್ಠಿಯಾಗುವ ಗುರಿಯಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ಹೇಳಿದರು.ನಗರದ ಶ್ರೀ ಸಿದ್ಧಾರ್ಥ ತಾಂತ್ರಿಕ ಮಹಾವಿದ್ಯಾಲಯದಿಂದ 46ನೇ ಬ್ಯಾಚ್‌ನ ಪ್ರಥಮ ವರ್ಷದ ಎಂಜಿನಿಯರ್‌ನಿಂಗ್ ವಿದ್ಯಾರ್ಥಿಗಳಿಗೆ ಸ್ವಾಗತ ಸಮಾರಂಭ ಉದ್ಘಾಟಿಸಿ ಮಾತನಾಡಿದರು.ರಾಜ್ಯದಲ್ಲಿ ತುಮಕೂರು ಅತೀ ವೇಗವಾಗಿ ಬೆಳೆಯುತ್ತಿರುವ ನಗರವಾಗಿದೆ. ಏಷ್ಯಾ ಖಂಡದಲ್ಲಿಯೇ ದೊಡ್ಡದಾದ ಕೈಗಾರಿಕಾ ಕೇಂದ್ರ ಎಂದು ಹೇಳಲು ಹೆಮ್ಮೆಯಾಗುತ್ತದೆ. ಹತ್ತು ವರ್ಷದಲ್ಲಿ ಕೈಗಾರಿಕೆಗಳು ಹೊಂದಿರುವ ತುಮಕೂರು ನೋಡಲು ಸಾಧ್ಯವಾಗುತ್ತದೆ. ಕೈಗಾರಿಕಾ ವೆಬ್ ತಲೆ ಎತ್ತುವುದರಿಂದ 5 ಲಕ್ಷ ಪದವೀಧರರಿಗೆ ಉದ್ಯೋಗದ ಅವಕಾಶ ಸಿಗುತ್ತದೆ ಎಂದು ಹೇಳಿದರು. ನಗರದ ಹೊರವಲಯದ ಅಂತರಸನಹಳ್ಳಿಯಲ್ಲಿ ಈಗಾಗಲೇ 150 ವಿವಿಧ ಕಂಪನಿಗಳಿದ್ದು, ಇನ್ನು 15 ರಿಂದ 20 ಎಕರೆ ವಿಸ್ತರಣೆಯಾಗಲಿದೆ. ಸದ್ಯದಲ್ಲಿಯೆ ಜಪಾನಿಸ್ ಟೈನ್‌ಷಿಪ್ ನಿರ್ಮಾಣವಾಗಲಿದೆ. ಟಯೋಟಾ ಕಂಪನಿ ಕೂಡ ತಲೆಎತ್ತಲಿದೆ. ಎಚ್‌ಎಎಲ್ ಕಂಪನಿ ಕೆಲಸ ನಡೆಯುತ್ತಿದೆ ಎಂದು ಹೇಳಿದರು.ಇಂದಿನ ತಂತ್ರಜ್ಞಾನದ ದೃಷ್ಟಿಕೋನದಲ್ಲಿ ತಂತ್ರಜ್ಞಾನವು ಅಗತ್ಯವಿರುವ ಆರ್ಟಿಫಿಶಿಯಲ್ ಇಂಟಲಿಜೆನ್ಸಿ ಮತ್ತು ಡಾಟಾ ಸೈನ್ಸ್ ಕೋರ್ಸ್‌ಗಳನ್ನು ಅಳವಡಿಸಿಕೊಳ್ಲಲಾಗಿದೆ. ಉತ್ತಮ ಪದವೀಧರರನ್ನು ಕಾಲೇಜಿಗೆ ಮಾತ್ರ ಸೀಮಿತವಲ್ಲದೆ ರಾಷ್ಟ್ರಕ್ಕೆ ಕೊಡುಗೆಯಾಗಿ ನೀಡುತ್ತಿದ್ದೇವೆ. ಸಂಸ್ಥೆಯ ಪದವೀಧರರು ವಿವಿಧ ಸ್ಟ್ರೀಮ್‌ಗಳಲ್ಲಿ ಪರಿಣಿತರಾಗಿದ್ದಾರೆ ಎಂದು ಹೇಳಿದರು.ಬೆಂಗಳೂರಿನ ಲಕ್ಷ್ಮೀ ವ್ಯಾಕ್ಯೂಂ ಟೆಕ್ನಾಲಜೀಸ್ ವ್ಯವಸ್ಥಾಪಕ ನಿರ್ದೇಶಕ ಎಲ್. ಎನ್. ಪ್ರಸಾದ್ ಮಾತನಾಡಿ, ಕಲಿಕೆ ಎಂಬುದು ತುಂಬಾ ಮುಖ್ಯ, ಕಲಿಯುವುದರ ಜೊತೆಗೆ ಆತ್ಮಜ್ಞಾನ, ವ್ಯವಹಾರಿಕ ಜ್ಞಾನ, ಲೋಕಜ್ಞಾನ ಬೆಳಸಿಕೊಳ್ಳಬೇಕು.

ಶಿಕ್ಷಣ ಎಂಬುದು ವ್ಯಕ್ತಿತ್ವವನ್ನು ರೂಪಿಸುತ್ತದೆ ಹಾಗೆಯೇ ಯಾವ ವಿದ್ಯಾರ್ಥಿ ಕಲಿಕೆಗೆ ಹೆಚ್ಚು ಒತ್ತು ನೀಡುತ್ತಾರೋ ಅವರು ಎಂದೂ ಪರೀಕ್ಷೆಗೆ ಭಯಪಡುವುದಿಲ್ಲ ಎಂದು ನುಡಿದರು.ಸಾಹೇ ವಿವಿಯ ಉಪಕುಲಪತಿ ಡಾ.ಕೆ.ಬಿ. ಲಿಂಗೇಗೌಡ ಮಾತನಾಡಿ, ಮಕ್ಕಳ ಬಗ್ಗೆ ಅತಿಹೆಚ್ಚು ಕಾಳಜಿಯನ್ನು ಪೋಷಕರು ಇಟ್ಟುಕೊಳ್ಳಬೇಕು. ಅವರ ಶೈಕ್ಷಣಿಕ ಚಟುವಟಿಕೆಗಳ ಬಗ್ಗೆ ಕಾಲೇಜು ಪ್ರಾಧ್ಯಾಪಕರೊಂದಿಗೆ ಸಂಪರ್ಕದಲ್ಲಿದ್ದು ನಿಗಾ ವಹಿಸುವುದನ್ನು ಮರೆಯಬೇಡಿ ಎಂದರು.ಶ್ರೀ ಸಿದ್ಧಾರ್ಥ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ.ಎಂ.ಎಸ್. ರವಿಪ್ರಕಾಶ, ರಿಜಿಸ್ಟ್ರಾರ್ ಡಾ.ಎಂ.ಝೆಡ್ ಕುರಿಯನ್, ಡಾ. ಜಿ. ಗುರುಶಂಕರ್, ಡಾ.ವಿವೇಕ್ ವೀರಯ್ಯ, ಡಾ.ರೇಣುಕಾ ಲತಾ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸುಪ್ರಿಮ್‌ ಶಾಲೆಯಲ್ಲಿ ಮಕ್ಕಳು ವಿವಿಧ ಸಾಂಸ್ಕೃತಿಕ ಸಂಭ್ರಮೋತ್ಸವ
ಶಾಮನೂರು ಶಿವಶಂಕರಪ್ಪ ನಿಧನಕ್ಕೆ ಸುತ್ತೂರು ಶಿವರಾತ್ರಿ ದೇಶಿಕೇಂದ್ರ ಶ್ರೀಗಳ ಸಂತಾಪ