ಮಾರಕ ಕ್ಯಾನ್ಸರ್‌ ಜಾಗೃತಿಗೆ 950 ಕಿ.ಮೀ. ಮ್ಯಾರಥಾನ್‌ ಓಟ

KannadaprabhaNewsNetwork |  
Published : Mar 07, 2025, 11:47 PM IST
32 | Kannada Prabha

ಸಾರಾಂಶ

ಏಳಿಂಜೆಯ ಕೋಲೆಟ್ಟು ದಂಪತಿಗಳಾದ ಗಿರೀಶ್ ಶೆಟ್ಟಿ, ರೇಷ್ಮಾ ಗಿರೀಶ್ ಶೆಟ್ಟಿ, ಹಾಗೂ ಕೋಚ್ ಹರಿದಾಸ್ ನಾಯಕ್‌, ಸಪೋರ್ಟರ್ ಕುಮಾರ ಅಜ್ಞಾನಿ ಜೊತೆಗೆ ಮಾರಕ ಕ್ಯಾನ್ಸರ್ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಮುಂಬೈನಿಂದ ಮಂಗಳೂರಿಗೆ ಸುಮಾರು 23 ದಿನಗಳ 950 ಕಿಲೋ ಮೀಟರ್ ಮ್ಯಾರಥಾನ್ ಓಟದಲ್ಲಿ ಭಾಗವಹಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಮೂಲ್ಕಿ

ಕಿನ್ನಿಗೋಳಿ ಸಮೀಪದ ಏಳಿಂಜೆಯ ಕೋಲೆಟ್ಟು ದಂಪತಿಗಳಾದ ಗಿರೀಶ್ ಶೆಟ್ಟಿ, ರೇಷ್ಮಾ ಗಿರೀಶ್ ಶೆಟ್ಟಿ, ಹಾಗೂ ಕೋಚ್ ಹರಿದಾಸ್ ನಾಯಕ್‌, ಸಪೋರ್ಟರ್ ಕುಮಾರ ಅಜ್ಞಾನಿ ಜೊತೆಗೆ ಮಾರಕ ಕ್ಯಾನ್ಸರ್ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಮುಂಬೈನಿಂದ ಮಂಗಳೂರಿಗೆ ಸುಮಾರು 23 ದಿನಗಳ 950 ಕಿಲೋ ಮೀಟರ್ ಮ್ಯಾರಥಾನ್ ಓಟದಲ್ಲಿ ಭಾಗವಹಿಸಿದ್ದಾರೆ.ಈ ಮೂಲಕ ವಿಶ್ವ ಹಾಗೂ ಲಿಮ್ಮಾ ದಾಖಲೆಯತ್ತ ಕ್ಷಣಗಣನೆಯಲ್ಲಿರುವ ಅವರನ್ನು ಶುಕ್ರವಾರ ಮೂಲ್ಕಿ ರಾಷ್ಟ್ರೀಯ ಹೆದ್ದಾರಿ ಬಪ್ಪನಾಡು ಬಳಿ ಮುಲ್ಕಿ ಬಂಟರ ಸಂಘ ಹಾಗೂ ನಾಗರಿಕರ ವತಿಯಿಂದ ಭವ್ಯವಾಗಿ ಸ್ವಾಗತಿಸಲಾಯಿತು.

ಮೂಲ್ಕಿ ಬಂಟರ ಸಂಘದ ಅಧ್ಯಕ್ಷ ಅಶೋಕ್ ಕುಮಾರ್ ಶೆಟ್ಟಿ ಅವರನ್ನು ಮೂಲ್ಕಿ ನಾಗರಿಕರ ವತಿಯಿಂದ ಗೌರವಿಸಿದರು. ಈ ಸಂದರ್ಭ ಕಿನ್ನಿಗೋಳಿ ವಿಜಯ ಕಲಾವಿದರು ತಂಡದ ಗೌರವಾಧ್ಯಕ್ಷ ಭುವನಾಭಿರಾಮ ಉಡುಪ, ಸಾಯಿನಾಥ ಶೆಟ್ಟಿ, ಅಧ್ಯಕ್ಷ ಶರತ್ ಶೆಟ್ಟಿ, ಏಳಿಂಜೆ ನವಚೇತನ ಯುವಕ ಮಂಡಲದ ಅಧ್ಯಕ್ಷ ಪ್ರಭಾಕರ ಆಚಾರ್ಯ, ಕಾರ್ಯದರ್ಶಿ ಹರೀಶ್ ಶೆಟ್ಟಿ, ಲಕ್ಷ್ಮಣ್ ಬಿಬಿ, ಮತ್ತಿತರರು ಉಪಸ್ಥಿತರಿದ್ದರು.

ಈ ಸಂದರ್ಭ ಮಾಹಿತಿ ನೀಡಿದ ರೇಷ್ಮಾ ಗಿರೀಶ್ ಶೆಟ್ಟಿ ಅವರು ಮುಂಬೈನಿಂದ ಮಂಗಳೂರಿಗೆ ಫೆಬ್ರವರಿ 14ರಂದು ಮಾರಥಾನ್ ಓಟ ಆರಂಭಗೊಂಡಿದ್ದು ಮಾರ್ಚ್ 8ರಂದು ಪೂರ್ಣಗೊಳ್ಳಲಿದೆ. ಮ್ಯಾರಥಾನ್ ಓಟದಲ್ಲಿ ಕ್ಯಾನ್ಸರ್ ಬಗ್ಗೆ ಜಾಗೃತಿ ಮೂಡಿಸುವ ಹಾಗೂ 16 ವರ್ಷದ ಒಳಗಿನ ಎಳೆ ಮಕ್ಕಳಿಗೆ ತಪಸ್ವಿ ಫೌಂಡೇಶನ್ ಮೂಲಕ ಉಚಿತ ಚಿಕಿತ್ಸೆಯಿಂದ ಕ್ಯಾನ್ಸರ್ ಗುಣಪಡಿಸುವ ಯೋಜನೆ ಹಮ್ಮಿಕೊಳ್ಳಲಾಗಿದ್ದು ಬೆಂಬಲಿಸುವಂತೆ ತಿಳಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪತ್ರಕರ್ತ ತಗಡೂರಿಗೆ ಲೋಹಿಯಾ ಪ್ರಶಸ್ತಿ ಪ್ರದಾನ
ಕನ್ನಡದಲ್ಲಿ ರೈಲ್ವೆ ಪರೀಕ್ಷೆಗೆ ಇಲಾಖೆ : ಕರವೇ