- ಸಾಲೂರು ಬೃಹನ್ ಮಠದ ಶ್ರೀಗಳ ದಿವ್ಯಸಾನಿಧ್ಯದಲ್ಲಿ ಬೇಡಗಂಪಣ ಅರ್ಚಕರಿಂದ ಧಾರ್ಮಿಕ ವಿಧಿವಿಧಾನ
ಕನ್ನಡಪ್ರಭ ವಾರ್ತೆ ಹನೂರು
ಕೊಂಡೋತ್ಸವ ವಿಶೇಷ:ಬೇಡಗಂಪಣ ಸಮುದಾಯದ ಅರ್ಚಕರು ಸಂಪ್ರದಾಯದಂತೆ ಮಡಿವಂತಿಕೆಯಿಂದ ಬೆಳಿಗ್ಗೆಯಿಂದ ಉಪವಾಸವಿದ್ದು ರಾಜಗೋಪುರದ ಮುಂಭಾಗ 5 ಟನ್ ಸೌದೆ ಕೊಂಡೋತ್ಸವದಲ್ಲಿ ಹಾಕಿ ವಿಧಿವಿಧಾನಗಳೊಂದಿಗೆ ಪೂಜೆ ಸಲ್ಲಿಸಿದರು. ಸಂಜೆ 4ರಿಂದ 6 ಗಂಟೆವರೆಗೆ ಉರಿದ ಸೌದೆ ಕೆಂಡವಾದ ನಂತರ ಮಲೆ ಮಹದೇಶ್ವರ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ವತಿಯಿಂದ ನಡೆಯುವ ಪೂಜಾ ಕಾರ್ಯಕ್ರಮವು ಮಹಾಶಿವರಾತ್ರಿಯ ಹಬ್ಬದ ಅಂಗವಾಗಿ ಬುಧವಾರ ರಾತ್ರಿ 9ರ ಬಳಿಕ ಭಕ್ತರ ಸಮ್ಮುಖದಲ್ಲಿ ನಡೆದ ವಿಜೃಂಭಣೆಯಿಂದ ಕೊಂಡೋತ್ಸವ ನಡೆಯಿತು.ನೋಡಲು ಮುಗಿಬಿದ್ದ ಭಕ್ತರು:
ಇದೇ ಸಂದರ್ಭದಲ್ಲಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಎಇ ರಘು, ಉಪ ಕಾರ್ಯದರ್ಶಿ ಚಂದ್ರಶೇಖರ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಶಶಿಧರ್, ಉಪ ವಿಭಾಗ ಡಿವೈಎಸ್ಪಿ ಧರ್ಮೇಂದರ್, ಜನಪದ ಪರಿಷತ್ತು ಸದಸ್ಯ ರಾಜ್ಯಾಧ್ಯಕ್ಷ ಮಹೇಶ್ ಚಿಕ್ಕಲೂರು, ಇನ್ಸ್ಪೆಕ್ಟರ್ ಜಗದೀಶ್, ಹಿರಿಯ ಅರ್ಚಕ ಕೆ.ವಿ. ಮಾದೇಶ್, ಮುಖಂಡ ಮುರುಗ, ಪಾರು ಪತ್ತೆದಾರರಾದ ಮಹದೇವಸ್ವಾಮಿ, ದ್ವಿತೀಯ ದರ್ಜೆ ಸಹಾಯಕ ಸರಗೂರು ಮಹಾದೇವಸ್ವಾಮಿ, ಅರ್ಚಕರು, ಸಿಬ್ಬಂದಿ ವರ್ಗ ಪೊಲೀಸ್ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
19ಸಿಎಚ್ಎನ್17
---
ಹನೂರು ತಾಲೂಕಿನ ಮಹದೇಶ್ವರ ಬೆಟ್ಟದಲ್ಲಿ ಮಹಾಶಿವರಾತ್ರಿ ಹಬ್ಬದ ನಡೆದ ಕೊಂಡೋತ್ಸವದಲ್ಲಿ ಬೇಡಗಂಪಣ ಅರ್ಚಕರ ತಂಡದವರು ಭಾಗವಹಿಸಿದ್ದರು.