ಪುತ್ತೂರಿನಲ್ಲಿ ವೈಭವದ ಶ್ರೀನಿವಾಸ ಕಲ್ಯಾಣೋತ್ಸವ

KannadaprabhaNewsNetwork |  
Published : Dec 03, 2025, 03:00 AM IST
ಫೋಟೋ: ೧ಪಿಟಿಆರ್-ಶ್ರೀನಿವಾಸಪುತ್ತೂರಿನಲ್ಲಿ ವೈಭವದ ಶ್ರೀನಿವಾಸ ಕಲ್ಯಾಣೋತ್ಸವ ನಡೆಯಿತು. | Kannada Prabha

ಸಾರಾಂಶ

ತಿರುಪತಿ ಶ್ರೀನಿವಾಸ ದೇವರ ಕಲ್ಯಾಣ ಮಹೋತ್ಸವವು ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವರ ಎದುರಿನ ದೇವರಮಾರು ಗದ್ದೆಯಲ್ಲಿ ನಿರ್ಮಿಸಲಾದ ಮಂಟಪದಲ್ಲಿ ಭಾನುವಾರ ಸಂಜೆಯ ಸುಮುಹೂರ್ತದಲ್ಲಿ ಅದ್ದೂರಿಯಿಂದ ನಡೆಯಿತು.

ಪುತ್ತೂರು: ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ಮತ್ತು ಶ್ರೀನಿವಾಸ ಕಲ್ಯಾಣೋತ್ಸವ ಸಮಿತಿ ನೇತೃತ್ವದಲ್ಲಿ ತಿರುಪತಿ ಶ್ರೀನಿವಾಸ ದೇವರ ಕಲ್ಯಾಣ ಮಹೋತ್ಸವವು ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವರ ಎದುರಿನ ದೇವರಮಾರು ಗದ್ದೆಯಲ್ಲಿ ನಿರ್ಮಿಸಲಾದ ಮಂಟಪದಲ್ಲಿ ಭಾನುವಾರ ಸಂಜೆಯ ಸುಮುಹೂರ್ತದಲ್ಲಿ ಅದ್ದೂರಿಯಿಂದ ನಡೆಯಿತು. ಶ್ರೀನಿವಾಸ-ಪದ್ಮಾವತಿಯರ ಕಲ್ಯಾಣ ಮಹೋತ್ಸವದ ಮರುಸೃಷ್ಟಿಯು ಸಹಸ್ರಾರು ಭಕ್ತರನ್ನು ಸಾಕ್ಷೀಕರಿಸಿಕೊಂಡು ನಡೆಸಲಾಯಿತು. ಶನಿವಾರ ಸಂಜೆ ಪುರಪ್ರವೇಶ ಮಾಡಿದ್ದ ಶ್ರೀನಿವಾಸ ದೇವರು, ೨೪ ಗಂಟೆಗಳ ಕಾಲ ವಿವಿಧ ಪೂಜಾರ್ಚನೆ ಸ್ವೀಕರಿಸಿದ ಬಳಿಕ ಭಾನುವಾರ ಸಂಜೆ ಕಲ್ಯಾಣೋತ್ಸವದ ಅಮೃತ ಘಳಿಗೆಯಲ್ಲಿ ಜತೆಯಾದರು.ಶ್ರೀನಿವಾಸ - ಪದ್ಮಾವತಿ ಕಡೆಯವರ ದಿಬ್ಬಣ, ಕಾಶೀ ಯಾತ್ರೆ ವಿಧಿ, ವಧೂ ವರರ ಎದುರುಗೊಳ್ಳುವಿಕೆ, ಮಂಗಳ ವಾದ್ಯಗಳ ಸಮ್ಮಿಲನ, ಗಣಪತಿ ಪ್ರಾರ್ಥನೆ, ಲಕ್ಷ್ಮೀ - ಪದ್ಮಾವತಿ ಪೂಜೆ, ಶ್ರಿ ವೆಂಕಟರಮಣ ಪೂಜೆ, ಸಂಕೀರ್ತನೆ ಸೇವೆ, ರಾಜೋಪಚಾರ ಪೂಜೆ, ಕಲ್ಯಾಣ ಕಥಾ ಶ್ರವಣ, ಪನ್ನೀರ ಸಿಂಚನ, ಸುಮಂಗಲಿಯರ ಕಲಶ ನಿವೇದನ, ಹೋಮಾದಿ ಪವಿತ್ರ ಕಾರ್ಯಗಳ ಮೂಲಕ ಮಂಟಪದಲ್ಲಿ ಧಾರ್ಮಿಕ ಕಾರ್ಯಗಳು ವಿಧಿವತ್ತಾಗಿ ನಡೆಯಿತು.

ಹಾರಾರ್ಪಣೆ, ಮಾಂಗಲ್ಯ ಧಾರಣೆ, ವೇದ ಮಂತ್ರ ಪಠಣ, ವಧೂ ವರರಿಗೆ ಬಂಧು ಮಿತ್ರರಿಂದ ಆರತಕ್ಷಣೆಯ ಸಮರ್ಪಣೆ, ಹಿರಿಯರ ಆಶೀರ್ವಾದ, ಕಿರಿಯ ಶುಭ ಹಾರೈಕೆ... ಹೀಗೆ ಒಂದು ವಿವಾಹದಲ್ಲಿ ನಡೆಯುವ ಎಲ್ಲ ವಿಧಿಗಳನ್ನೂ ಪುರೋಹಿತರು ಮುಂದೆ ನಿಂತು ಮಾಡಿದರು. ಶ್ರೀನಿವಾಸ- ಪದ್ಮಾವತಿಯರ ಪ್ರತಿಮೆಗಳಿಗೆ ಮಾಡಲಾದ ವಧೂ ವರರ ಶೃಂಗಾರ ವಿಶೇಷ ಆಕರ್ಷಣೆಯಾಗಿತ್ತು.ಮದುವೆಯ ಕೊನೆಯಲ್ಲಿ ಶ್ರೀನಿವಾಸ- ಪದ್ಮಾವತಿಯರಿಗೆ ಮಹಾ ಪೂಜೆ, ಮಹಾಮಂಗಳಾರತಿ ನಡೆಯುವ ಮೂಲಕ ಧಾರ್ಮಿಕ ಸೇವೆಯ ಉತ್ತುಂಗ ದಾಖಲಾಯಿತು. ನೆರೆದ ಭಕ್ತರು ಕಲ್ಯಾಣ ಮಹೋತ್ಸವದ ಭೋಜನದ ಜತೆಯಲ್ಲಿ ಏಳು ಬೆಟ್ಟದೊಡೆಯನ ಪೂಜೆಯ ಪ್ರಸಾದ ಸವಿದು ಕೃತಾರ್ಥರಾದರು.

ವಿಶೇಷ ವಿಧಿ ವಿಧಾನಗಳು: ರಾಜಾ ಹೋಮ, ಕಾಶಿಯಾತ್ರೆ ವಿಧಿ, ದಿಬ್ಬಣ ಆಗಮನ, ದಿಬ್ಬಣ ಸ್ವಾಗತ, ಗಣಪತಿ ಪೂಜೆ, ಲಕ್ಷ್ಮೀ ಪದ್ಮಾವತಿ ಪೂಜೆ, ಶ್ರೀ ವೆಂಕಟರಮಣ ಪೂಜೆ, ಕಲ್ಯಾಣ ಶ್ರವಣ, ಸಂಕೀರ್ತನ ಸೇವೆ, ವಧು ನಿರೀಕ್ಷಣ, ಕನ್ಯಾದಾನ, ಕಂಕಣ ಧಾರಣೆ, ಹಾರಾರ್ಪಣೆ, ಮಾಂಗಲ್ಯ ಪೂಜೆ, ಮಾಂಗಲ್ಯ ಧಾರಣೆ, ಅಕ್ಷತಾರೋಣ ಸೇವೆ, ನಾದೋಪಾಸನಾ ಸೇವೆ, ಮಾಲಾಧಾರಣ ಸೇವೆ ಉಡುಗೊರೆ ಸೇವೆ, ಅಷ್ಟಾವಧಾನ ಸೇವೆ, ಲೀಲಾ ವಿನೋದ ಸೇವೆ ನಡೆಯಿತು.

.................

ಶ್ರೀನಿವಾಸ ಕಲ್ಯಾಣೋತ್ಸವದ ಸಂದರ್ಭದಲ್ಲಿ ಮಾಂಗಲ್ಯ ಧಾರಣರ ಬಳಿಕ ಪುರೋಹಿತರು ಸಂಕೀರ್ತನೆಯ ಜೊತೆಗೆ ಮೂರು ವರ್ಷ ಶ್ರೀನಿವಾಸ ಕಲ್ಯಾಣೋತ್ಸವ ಪೂರ್ಣಗೊಂಡಿದೆ. ಮುಂದಿನ ವರ್ಷ ಶಿವನ ಕ್ಷೇತ್ರದಲ್ಲಿ ಗಿರಿಜಾ ಕಲ್ಯಾಣ ಮಾಡುವ ಸಂಕಲ್ಪಕ್ಕೆ ಭಿನ್ನವಿಸಿಕೊಂಡರು. ಎಲ್ಲವೂ ಮಹಾಲಿಂಗೇಶ್ವರನ ಇಚ್ಚೆಯಾಗಿದ್ದು. ಈ ಕುರಿತು ಮಹಾಲಿಂಗೇಶ್ವರ ದೇವರಲ್ಲಿ ಪ್ರಾರ್ಥನೆ ಯೊಂದಿಗೆ ಕೇಳಿಕೊಳ್ಳಲಾಗುವುದು. ಅವರ ಒಪ್ಪಿಗೆ ಇದ್ದರೆ ದೇವರ ಇಚ್ಛೆಯಂತೆ ಗಿರಿಜಾ ಕಲ್ಯಾಣವೂ ಆಗಲಿದೆ.

-ಅರುಣ್ ಕುಮಾರ್ ಪುತ್ತಿಲ, ಅಧ್ಯಕ್ಷರು ಶ್ರೀನಿವಾಸ ಕಲ್ಯಾಣೋತ್ಸವ ಸಮಿತಿ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶಿಕ್ಷಣಕ್ಕೆ ಸಿದ್ಧಗಂಗಾ ಮಠದ ಕೊಡುಗೆ ಅನನ್ಯ
ಪಟ್ಟಣದ ಬೀದಿ ಬದಿ ವ್ಯಾಪಾರಸ್ಥರ ಹಿತ ಕಾಪಾಡಿ