ಕನ್ನಡಪ್ರಭ ವಾರ್ತೆ ಯಳಂದೂರು
ಎಲ್ಲರೂ ಸಾಹಿತ್ಯ ಜಾತ್ರೆಗೆ ಬನ್ನಿ:
ತಾಲೂಕು ಕಸಾಪ ಅಧ್ಯಕ್ಷ ಯರಿಯೂರು ನಾಗೇಂದ್ರ ಮಾತನಾಡಿ, ಡಿ.೨೦,೨೧,೨೨ ರಂದು ಮೂರು ದಿನಗಳ ಕಾಲ ಮಂಡ್ಯದಲ್ಲಿ ೮೭ ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಹಮ್ಮಿಕೊಳ್ಳಲಾಗಿದೆ. ಅವಿಭಜಿತ ಮೈಸೂರಿನಲ್ಲಿ ಕಾರ್ಯಕ್ರಮ ನಡೆಯುತ್ತಿದ್ದು ಇಲ್ಲಿಗೆ ನಮ್ಮ ಜಿಲ್ಲೆ ಹಾಗೂ ತಾಲೂಕಿನಿಂದ ಹೆಚ್ಚು ಜನರು ಭಾಗವಹಿಸಬೇಕು. ಈ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಕನ್ನಡ ರಥವು ಎಲ್ಲೆಡೆ ಸಾಗುತ್ತಿದೆ. ಈ ಸಮ್ಮೇಳನದಲ್ಲಿ ಅನೇಕ ವಿಚಾರ ಗೋಷ್ಠಿಗಳು, ಕವಿಗೋಷ್ಠಿಗಳು ಸೇರಿದಂತೆ ಅನೇಕ ವಿಚಾರ ಮಂಥನಗಳು ನಡೆಯಲಿದೆ. ಈ ಸಮ್ಮೇಳನದಲ್ಲಿ ಪುಸ್ತಕ ಮಾರಾಟ ಮಳಿಗೆಗಳು, ಖಾದಿ ಮಾರಾಟ ಮಳಿಗೆಗಳು ಸೇರಿದಂತೆ ಭಾಷೆ, ನಾಡು, ನುಡಿ ಪ್ರತಿಬಿಂಬಿಸುವ ಅನೇಕ ಮಳಿಗೆಗಳು, ವಿಭಿನ್ನ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.ಮೂರು ದಿನಗಳ ಕಾಲ ಇಂತಹ ಒಂದು ದೊಡ್ಡ ಕನ್ನಡ ಸಾಹಿತ್ಯ ಕಾರ್ಯಕ್ರಮ ನಡೆಯಲಿದ್ದು ಇದಕ್ಕೆ ಪ್ರತಿ ಗ್ರಾಮಗಳಿಂದಲೂ ಸಾಹಿತ್ಯಾಸಕ್ತರು, ಕನ್ನಡಾಭಿಮಾನಿಗಳು ತಪ್ಪದೆ ಹಾಜರಾಗಿ ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿಕೊಡಬೇಕು ಎಂದು ಮನವಿ ಮಾಡಿದರು. ಕನ್ನಡ ರಥಕ್ಕೆ ಅಗರ, ಮದ್ದೂರು, ಯರಿಯೂರು, ಅಂಬಳೆ, ದುಗ್ಗಹಟ್ಟಿ ಗ್ರಾಪಂ ಹಾಗೂ ಯಳಂದೂರು ಪಪಂಗಳಿಂದ ಸ್ವಾಗತ ಕೋರಲಾಯಿತು. ನಂತರ ಮೆಳ್ಳಹಳ್ಳಿ ಗೇಟ್ ಬಳಿ ಇದಕ್ಕೆ ಬೀಳ್ಕೂಡುಗೆ ನೀಡಲಾಯಿತು. ಗ್ರೇಡ್ ೨ ತಹಸೀಲ್ದಾರ್ ಶಿವರಾಜು, ಪಿಡಿಒ ಉಷಾರಾಣಿ ಗ್ರಾಪಂ ಸದಸ್ಯೆ ಲಕ್ಷ್ಮಿರಾಮು, ಲಿಂಗರಾಜು, ಪಪಂ ನಾಮ ನಿರ್ದೇಶಿತ ಸದಸ್ಯ ಲಿಂಗರಾಜಮೂರ್ತಿ ಕಸಾಪ ಕಾರ್ಯದರ್ಶಿ ಡಿ.ಪಿ.ಮಹೇಶ್ ಕೋಶಾಧ್ಯಕ್ಷ ಫೈರೋಜ್ ಖಾನ್ ಸೇರಿದಂತೆ ಅನೇಕರು ಹಾಜರಿದ್ದರು.