ಕನ್ನಡಪ್ರಭ ವಾರ್ತೆ, ಭದ್ರಾವತಿ
ನಗರದ ಬಸವೇಶ್ವರ ವೃತ್ತ, ಮಾಚಿದೇವ ಕಲ್ಯಾಣ ಮಂಟಪದಲ್ಲಿ ರಾಜ್ಯ ಅಂಬೇಡ್ಕರ್ ಸೇನೆ ವತಿಯಿಂದ ಭಾನುವಾರ ಜಿಲ್ಲಾ ಘಟಕ ಉದ್ಘಾಟನೆ ಸಮಾರಂಭದಲ್ಲಿ ಅವರು ಮಾತನಾಡಿದರು. ದಲಿತ ಸಂಘಟನೆಗಳ ಸ್ಥಾಪನೆ ಉತ್ತಮ ಬೆಳವಣಿಗೆ. ದಲಿತ ಸಂಘಟನೆಗಳಿಗೆ ಎಲ್ಲ ಜನಾಂಗದ ಪ್ರೋತ್ಸಾಹ ಸಿಗಬೇಕು. ಅಂಬೇಡ್ಕರ್ ಸೇನೆಗೆ ಸದಾ ಸ್ಪಂದಿಸಲು ಸಿದ್ಧ ಎಂದರು.
ಪ್ರಸ್ತುತ ಸಂದರ್ಭದಲ್ಲಿ ಬಸವಣ್ಣ, ಛತ್ರಪತಿ ಶಿವಾಜಿ, ಅಂಬೇಡ್ಕರ್ ಹೀಗೆ ಒಬ್ಬೊಬ್ಬ ಮಹಾನೀಯರು, ದಾರ್ಶನಿಕರನ್ನು ಒಂದೊಂದು ಸಮಾಜಕ್ಕೆ ಸೀಮಿತಗೊಳಿಸುವಂತಹ ಪರಿಸ್ಥಿತಿ ಎದುರಾಗಿದೆ. ಆದರೆ, ಯಾವುದೇ ಮಹಾನೀಯರನ್ನು ಕೇವಲ ಜಾತಿಗೆ ಸೀಮಿತಗೊಳಿಸಬಾರದು. ಬದಲಿಗೆ ಎಲ್ಲ ವರ್ಗದವರು ನಮ್ಮವರೆಂದು ಭಾವಿಸುವುದು ಮುಖ್ಯ ಎಂದು ತಿಳಿಸಿದರು.ದಲಿತ ಸಂಘಟನೆಗಳಿಗೆ ಎಲ್ಲ ಸಮಾಜದವರ ನೈತಿಕ ಬೆಂಬಲ ಅಗತ್ಯ. ನೈತಿಕ ಬೆಂಬಲ ದೊರೆತಾಗ ಮಾತ್ರ ದಲಿತಪರ ಹೋರಾಟಗಳು ಯಶಸ್ವಿಯಾಗುತ್ತವೆ. ದಲಿತರ ಏಳಿಗಾಗಿ ಸರ್ಕಾರ ಮಾತ್ರವಲ್ಲದೇ, ಸಮಾಜದ ಇತರ ವರ್ಗಗಳು ಸಹ ಕೈಜೋಡಿಸಬೇಕು. ಇಂದಿನ ಸಮಾನತೆಗೆ ಅಂಬೇಡ್ಕರ್ ಕಾರಣ ಎಂಬುದನ್ನು ಪ್ರತಿಯೊಬ್ಬರೂ ಸ್ಮರಿಸಬೇಕು ಎಂದು ಕರೆ ನೀಡಿದರು.
- - - -ಡಿ25-ಬಿಡಿವಿಟಿ2:
ಭದ್ರಾವತಿಯ ಮಾಚಿದೇವ ಕಲ್ಯಾಣ ಮಂಟಪದಲ್ಲಿ ಅಂಬೇಡ್ಕರ್ ಸೇನೆ ಜಿಲ್ಲಾ ಘಟಕವನ್ನು ನಗರಸಭೆ ಮಾಜಿ ಅಧ್ಯಕ್ಷ ಬಿ.ಕೆ.ಮೋಹನ್ ಉದ್ಘಾಟಿಸಿದರು.