ಹಾರೋಹಳ್ಳಿಯ ಮರಳವಾಡಿ ಸಮೀಪದ ಬುಡಗಯ್ಯನದೊಡ್ಡಿ ಗ್ರಾಮದ ಮಾರಕ್ಕ ಎಂಬುವರಿಗೆ ಸೇರಿದ ರಾಗಿ ಮೆದೆಯನ್ನು ತಿಂದಿವೆ. ಮಾರಕ್ಕ ಅವರು 5 ಎಕರೆಯಲ್ಲಿ ರಾಗಿ ಬೆಳೆದಿದ್ದರು. ವರ್ಷ ಪೂರ್ತಿ ಕಷ್ಟಪಟ್ಟು ಬೆಳೆದಿದ್ದ ರಾಗಿ ಬೆಳೆಯನ್ನು ಒಂದೆಡೆ ಮೆದೆ ಮಾಡಿದ್ದರು. ಮಾರಕ್ಕ ಬೆಳಿಗ್ಗೆ ಬಂದು ನೋಡಿದಾಗ ಆನೆಗಳು ತಿಂದು ಬಿಟ್ಟ ಅರ್ಧಂಬರ್ಧ ಹುಲ್ಲು ಮಾತ್ರ ಉಳಿದಿತ್ತು. ಘಟನೆಯಿಂದ ಗಾಬರಿಗೊಳಗಾದ ಮಾರಕ್ಕ ಕಣ್ಣೀರು ಹಾಕುತ್ತಾ ಸೂಕ್ತ ಪರಿಹಾರಕ್ಕಾಗಿ ಒತ್ತಾಯಿಸಿದ್ದಾರೆ. ವಿಷಯ ತಿಳಿದ ಕೂಡಲೇ ಸ್ಥಳಕ್ಕೆ ಆಗಮಿಸಿದ ಅರಣ್ಯಾಧಿಕಾರಿಗಳು ಆನೆಗಳ ಹಿಂಡುಗಳನ್ನು ಕಾಡಿಗೆ ಹಿಮ್ಮಟ್ಟಿಸಿದ್ದಾರೆ. ಅಲ್ಲದೇ ಸೂಕ್ತ ಪರಿಹಾರ ಒದಗಿಸುವ ಕೆಲಸವನ್ನೂ ಮಾಡಿದ್ದಾರೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.