- ಸರ್ಕಾರಿ ನೌಕರರ ಸಂಘದಿಂದ ನಿವೃತ್ತರಿಗೆ ಸನ್ಮಾನ, ಬೀಳ್ಕೊಡುಗೆ
ಕನ್ನಡಪ್ರಭ ವಾರ್ತೆ ಹೊನ್ನಾಳಿ
ಪ್ರಸಕ್ತ ದಿನಗಳಲ್ಲಿ ಸರ್ಕಾರಿ ಇಲಾಖೆಗಳಲ್ಲಿ ನೌಕರಿ ಲಭಿಸಿ ಕೆಲಸ ಮಾಡುವುದೇ ಪುಣ್ಯದ ಫಲ ಎನ್ನುವಂತಾಗಿದೆ. ಆದರೆ ಸರ್ಕಾರ ಜಾರಿಗೆ ತಂದಿರುವ ಎನ್.ಪಿ.ಎಸ್. ಹೊಸ ಪೆನ್ಷನ್ ಯೋಜನೆಯಿಂದಾಗಿ ನಿಜಕ್ಕೂ ನಿವೃತ್ತ ನೌಕರರ ಸಂಧ್ಯಾಕಾಲದ ಜೀವನಕ್ಕೆ ಆರ್ಥಿಕ ಭದ್ರತೆ ಇಲ್ಲದಂತಾಗಿದೆ ಎಂದು ಸರ್ಕಾರ ನೌಕರರ ಸಂಘದ ತಾಲೂಕು ಅಧ್ಯಕ್ಷ ಕೆ.ಅರುಣ್ ವಿಷಾದಿಸಿದರು.ಸರ್ಕಾರಿ ನೌಕರರ ಸಂಘದ ವತಿಯಿಂದ ಶನಿವಾರ ರಾತ್ರಿ ಸಂಘದ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ವಿವಿಧ ಇಲಾಖೆಗಳಲ್ಲಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದವರಿಗೆ ಸನ್ಮಾನ ಮತ್ತು ಬೀಳ್ಕೋಡುಗೆ ಸಮಾರಂಭದ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು.
ಇವರ ಜೊತೆಯಲ್ಲಿಯೇ ನೌಕರಿ ಮಾಡಿದ ಒಪಿಎಸ್ ಯೋಜನೆಯಡಿಯ ನೌಕರರಿಗೆ ₹30 ಸಾವಿರಕ್ಕಿಂತ ಹೆಚ್ಚಿನ ಮೊತ್ತದ ನಿವೃತ್ತಿ ವೇತನ ಪಡೆಯುವ ನೌಕರರೂ ಇದ್ದಾರೆ. ಆದರೆ, ಎನ್.ಪಿ.ಎಸ್. ಯೋಜನೆಯಡಿ ನಿವೃತ್ತಿಯಾದವರು. ನಿವೃತ್ತಿಯ ನಂತರ ಅವರ ಜೀವನದ ಪರಿಸ್ಥಿತಿ ಕಲ್ಪನೆ ಮಾಡಿಕೊಳ್ಳಲು ಅಸಾಧ್ಯವಾಗಿದ್ದು, ಸರ್ಕಾರ ಆದಷ್ಟು ಬೇಗ ಈ ಎನ್.ಪಿ.ಎಸ್. ಯೋಜನೆ ರದ್ದು ಮಾಡಿ ಹಿಂದಿನಂತೆ ಒ.ಪಿ.ಎಸ್. ಯೋಜನೆ ಜಾರಿಗೆ ಮಾಡಿದರೆ ಲಕ್ಷಾಂತರ ನೌಕರರ ಕುಟುಂಬಗಳು ಸಂಧ್ಯಾಲದ ಜೀವನ ಸಂಕಷ್ಟದಿಂದ ಪಾರಾಗಬಹುದು ಎಂದ ಅವರು, ಪ್ರಸ್ತುತ ಸರ್ಕಾರಿ ನೌಕರರ ಸಂಘ ಅವರಣದಲ್ಲಿ ಮುಂದಿನ ದಿನಗಳಲ್ಲಿ 5 ವಾಣಿಜ್ಯ ಮಳಿಗೆಗಳನ್ನು ನಿರ್ಮಿಸುವ ಯೋಜನೆ ಕೂಡ ಹೊಂದಲಾಗಿದೆ ಎಂದರು.
ವಿವಿಧ ಇಲಾಖೆಗಳಲ್ಲಿ ಸೇವೆ ಸಲ್ಲಿಸಿ ನಿವೃತ್ತಿಯಾದ ನೌಕರರು ಮತ್ತು ಶಿಕ್ಷಕರಾದ ಎ.ಶೇಖರಪ್ಪ, ಇಬ್ರಾಹಿಂ ಎಚ್.ಎಣ್ಣೇರ, ಎಂ.ಬಿ.ವಿನೋದ, ಶಾಂತವೀರಯ್ಯ, ಎ.ಆರ್.ರಾಜಪ್ಪ, ಎಂ.ಆರ್.ಗಣೇಶ್, ಎಸ್.ದೇವರಾಜ, ಕೆ.ಮೆಹರುನ್ನಿಸಾ, ಎಸ್.ಗುಂಡಪ್ಪ, ಎಸ್.ಎಂ.ಸುಶಿಲಮ್ಮ, ಕೆ.ಗೌರಮ್ಮ, ಟಿ.ಮಂಜಪ್ಪ. ಹನುಮಂತಪ್ಪ, ಟಿ.ಎಚ್. ನಾಗರಾಜ ಅವರನ್ನು ನೆನಪಿನ ಕಾರಣಿಕೆ ನೀಡಿ ಗೌರವಿಸಲಾಯಿತು.
- - -
ಸೇವೆಯಿಂದ ನಿವೃತ್ತರಾದ ನೌಕರರಿಗೆ ಹೊನ್ನಾಳಿಯಲ್ಲಿ ಸರ್ಕಾರಿ ನೌಕರರ ಸಂಘದಿಂದ ಶನಿವಾರ ರಾತ್ರಿ ಸನ್ಮಾನಿಸಿ ಬೀಳ್ಕಕೋಡಲಾಯಿತು.