ಸಂತಪೂರ ವಸತಿ ಶಾಲೆಯ ಪ್ರಾಂಶುಪಾಲರಾದ ಭಾಗವತ್ ಕಾಂಬಳೆ ಹಾಗೂ ಪ್ರಭಾರಿ ವಾರ್ಡನ್ ಶಿವಕುಮಾರ್ ಇವರಿಗೆ ಕಾರ್ಯ ನಿರ್ವಾಹಕ ನಿರ್ದೇಶಕರು ಈಗಾಗಲೇ ಕಾರಣ ಕೇಳಿ ನೋಟಿಸ್ ನೀಡಿದ್ದಾರೆ. ಮೆನು ಪ್ರಕಾರ ಊಟ ನೀಡದಿರುವುದು, ಪ್ರಶ್ನಿಸಿದ ಮಕ್ಕಳಿಗೆ ಅವಾಚ್ಯ ಶಬ್ದಗಳಿಂದ ನಿಂದಿಸುವುದು, ಹೊಡೆಯುವ ವಿಚಾರ ಉಲ್ಲೇಖಿಸಿರುತ್ತಾರೆ. ಅಲ್ಲದೇ ನೋಟಿಸ್ ನೀಡಿದ 24 ಗಂಟೆಯೊಳಗೆ ಉತ್ತರಿಸುವಂತೆ ತಿಳಿಸಿದ್ದು, ಉತ್ತರಿಸದ ಪಕ್ಷದಲ್ಲಿ ನಿಯಮಾನುಸಾರ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.