ಸಿದ್ದಿಕೇರಿ ಬೆಟ್ಟದಲ್ಲಿ ಜೋಡಿ ಚಿರತೆ ಪ್ರತ್ಯಕ್ಷ

KannadaprabhaNewsNetwork | Updated : Oct 06 2023, 01:18 AM IST

ಸಾರಾಂಶ

ಗಂಗಾವತಿ ಸಮೀಪದ ಸಿದ್ದಿಕೇರಿ ರಸ್ತೆಯ ವ್ಯಾಪ್ತಿಯ ಬೇಡರ ಕಣ್ಣಪ್ಪ ವೃತ್ತದ ಮಾರೆಮ್ಮನ ಗುಡಿ ಹತ್ತಿರ ಬೆಟ್ಟದಲ್ಲಿ ಜೋಡಿ ಚಿರತೆ ಪ್ರತ್ಯಕ್ಷವಾಗಿವೆ.

ಗಂಗಾವತಿ: ಸಮೀಪದ ಸಿದ್ದಿಕೇರಿ ರಸ್ತೆಯ ವ್ಯಾಪ್ತಿಯ ಬೇಡರ ಕಣ್ಣಪ್ಪ ವೃತ್ತದ ಮಾರೆಮ್ಮನ ಗುಡಿ ಹತ್ತಿರ ಬೆಟ್ಟದಲ್ಲಿ ಜೋಡಿ ಚಿರತೆ ಪ್ರತ್ಯಕ್ಷವಾಗಿವೆ.

ಕಳೆದ ಒಂದು ವಾರದಿಂದ ಚಿರತೆಗಳು ಪ್ರತ್ಯಕ್ಷವಾಗುತ್ತಿದ್ದರಿಂದ ರೈತರು ಗದ್ದೆ ಕೆಲಸಕ್ಕೆ ಹೋಗಲು ಹಿಂದೇಟು ಹಾಕಿತ್ತಿದ್ದರು. ಎಚ್.ರಾಜೇಶ ನಾಯಕ ದೊರೆ, ರಾಜೇಶ್ ಚಳ್ಳೂರ್, ಲಿಂಗರಾಜ ಚಳ್ಳೂರ್, ಎಂ.ಆನಂದ, ರವಿ ಕೋಲ್ಕಾರ್ ಎಂಬವರಿಗೆ ಚಿರತೆಗಳನ್ನು ಪ್ರತ್ಯಕ್ಷವಾಗಿ ನೋಡಿ, ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದಾರೆ. ಕೂಡಲೇ ಅರಣ್ಯ ಇಲಾಖೆಯವರು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.

Share this article