ಗಮನ ಸೆಳೆದ ಗುಳೇದಗುಡ್ಡ ಕುಪ್ಪಸ ಖಣದ ಸ್ತಬ್ಧ ಚಿತ್ರ

KannadaprabhaNewsNetwork |  
Published : Oct 04, 2025, 01:00 AM IST
ಪೋಟೊ:3ಜಿಎಲ್ಡಿ2-   ವಿಶ್ವವಿಖ್ಯಾತ ಮೈಸೂರು ದಸರಾ ಜಂಬೂ ಸವಾರಿ ಮೆರವಣಿಗೆ ಸಂದರ್ಭದಲ್ಲಿ ಗುಳೇದಗುಡ್ಡ ಕುಪ್ಪಸ (ಖಣ)ದ ಕುರಿತಾಗಿ ಪಾಲ್ಗೊಂಡಿದ್ದ ಸ್ಥಬ್ಧಚಿತ್ರ ಮೆರವಣಿಗೆಯು  ಇಲ್ಲಿನ  ನೋಡುಗರ ಗಮನ ಸೆಳೆಯಿತು.  | Kannada Prabha

ಸಾರಾಂಶ

ವಿಶ್ವವಿಖ್ಯಾತ ಮೈಸೂರು ದಸರಾ ಜಂಬೂ ಸವಾರಿ ಮೆರವಣಿಗೆಯ ಸಂದರ್ಭದಲ್ಲಿ ಗುಳೇದಗುಡ್ಡ ಕುಪ್ಪಸದ (ಖಣ) ಕುರಿತಾಗಿ ಪಾಲ್ಗೊಂಡಿದ್ದ ಸ್ತಬ್ಧಚಿತ್ರ ನೋಡುಗರ ಗಮನ ಸೆಳೆಯಿತು.

ಗುಳೇದಗುಡ್ಡ: ವಿಶ್ವವಿಖ್ಯಾತ ಮೈಸೂರು ದಸರಾ ಜಂಬೂ ಸವಾರಿ ಮೆರವಣಿಗೆಯ ಸಂದರ್ಭದಲ್ಲಿ ಗುಳೇದಗುಡ್ಡ ಕುಪ್ಪಸದ (ಖಣ) ಕುರಿತಾಗಿ ಪಾಲ್ಗೊಂಡಿದ್ದ ಸ್ತಬ್ಧಚಿತ್ರ ನೋಡುಗರ ಗಮನ ಸೆಳೆಯಿತು. ಮೆರವಣಿಗೆಯಲ್ಲಿ ಗುಳೇದಗುಡ್ಡ ಖಣದ ಪ್ರದರ್ಶಿಸಿದ್ದಕ್ಕೆ ಪಟ್ಟಣದ ಜನತೆ ಹರ್ಷಗೊಂಡರು. ಜಿಲ್ಲೆಯಿಂದ ಪ್ರದರ್ಶನಗೊಂಡ ಈ ಸ್ತಬ್ಧ ಚಿತ್ರದಲ್ಲಿ ಗುಳೇದಗುಡ್ಡದ ಕುಪ್ಪಸ (ಖಣ) ನೇಯುತ್ತಿರುವ ವ್ಯಕ್ತಿ, ಜೊತೆಗೆ ಕುಪ್ಪಸ ತಯಾರಿಕೆಗೆ ಬೇಕಾದ ಕಂಡಕಿ ಸುತ್ತುವ ಮಹಿಳೆ ಹಾಗೂ ಚಾಲುಕ್ಯರ ಐತಿಹಾಸಿಕ ದೇವಸ್ಥಾನವನ್ನು ಈ ಸ್ತಬ್ಧ ಚಿತ್ರದಲ್ಲಿ ಸಿದ್ಧಪಡಿಸಿ, ಪ್ರದರ್ಶಿಸಲಾಗಿದೆ. ಮೈಸೂರು ದಸರಾ ಪ್ರದರ್ಶನದಲ್ಲಿ ಗುಳೇದಗುಡ್ಡ ಕುಪ್ಪಸದ ಸ್ತಬ್ಧಚಿತ್ರ ಪ್ರದರ್ಶನಗೊಂಡಿದ್ದಕ್ಕೆ ಇಲ್ಲಿನ ಕೈಮಗ್ಗ ಉತ್ಪನ್ನಗಳ ನೇಕಾರ ಸಂಘದ ಅಧ್ಯಕ್ಷ ಹನಮಂತ ಮಾವಿನಮರದ ಸೇರಿದಂತೆ ನೇಕಾರ ಮುಖಂಡರು, ನೇಕಾರರು, ಖಣಗಳ ವರ್ತಕರು ತಮ್ಮ ಹರ್ಷ ವ್ಯಕ್ತಪಡಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

‘ಕನ್ನಡಪ್ರಭ, ಏಷ್ಯಾನೆಟ್‌ ಸುವರ್ಣ ನ್ಯೂಸ್‌’ನ ಸಹಯೋಗದಲ್ಲಿ ಆಯೋಜಿಸಿದ್ದ ‘ಕೆಂಗೇರಿ ಸಂಭ್ರಮ’ಕ್ಕೆ ವಿದ್ಯುಕ್ತ ತೆರೆ
ಸರ್ವಾಧ್ಯಕ್ಷರಾಗಿ ಸೋಮಲಿಂಗ ಗೆಣ್ಣೂರ ಆಯ್ಕೆ