ಕನ್ನಡಪ್ರಭ ವಾರ್ತೆ ಮೈಸೂರು
ಮಾನವನಿಗೆ ಪ್ರಕೃತಿದತ್ತವಾದ ಎರಡು ಗುಣಗಳಿವೆ. ಮಾನವನ ಎಲ್ಲಾ ಪ್ರಗತಿಗಳು ಇವೆರಡರ ಆಧಾರದ ಮೇಲೆ ಆಗಿದ್ದು, ಒಬ್ಬ ಶಿಕ್ಷಕ ಬಯಸಿದ್ದಂತೆ ರೂಪಿಸಿಕೊಳ್ಳಬಲ್ಲ. ಅಂತೆಯೇ ಬಯಸಿದಂತೆ ಅನ್ಯರನ್ನು ರೂಪಿಸಬಲ್ಲ ಎಂದು ದಾವಣಗೆರೆಯ ಆದರ್ಶ ಯೋಗ ಪ್ರತಿಷ್ಠಾನ, ಶ್ರೀಮಹಾಮ್ಮಾಯಿ ವಿಶ್ವಯೋಗ ಮಂದಿರ ಹಾಗೂ ಯೋಗ ಚಿಕಿತ್ಸಾ ಕೇಂದ್ರದ ಸಂಸ್ಥಾಪಕ ರಾಘವೇಂದ್ರ ಅಭಿಪ್ರಾಯಪಟ್ಟರು.ರಾಮಕೃಷ್ಣನಗರದ ಪರಮಹಂಸ ಯೋಗ ಮಹಾವಿದ್ಯಾಲಯ, ಇಂಟರ್ ನ್ಯಾಷನಲ್ ಯೋಗ ಸ್ಕೂಲ್ ನಲ್ಲಿ ನಡೆದ 11ನೇ ಅಂತಾರಾಷ್ಟ್ರೀಯ ವಿಶ್ವ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಶಿಕ್ಷಕನ ಗುಣಧರ್ಮ ಕುರಿತು ಅವರು ಉಪನ್ಯಾಸ ನೀಡಿದರು.
ಒಬ್ಬ ಶಿಕ್ಷಕನಾಗಿ ತಾನಾಗಬಲ್ಲ, ಆ ಶಿಕ್ಷಕನಲ್ಲಿರುವ ಗುಣಧರ್ಮವನ್ನು ಇನ್ನೊಬ್ಬರಿಗೆ ಧಾರೆ ಎರೆದು ತಾನಾಗಿಸಬಲ್ಲ. ಇದು ಶಿಕ್ಷಕಲ್ಲಿರುವ ಅಪೂರ್ವವಾದ ಗುಣಧರ್ಮ. ಯಾವುದೇ ಕ್ಷೇತ್ರದಲ್ಲಿ ಉತ್ತಮ ಶಿಕ್ಷಕರಾಗಲು ಮೂರು ಉದ್ದೇಶವನ್ನು ಹೊತ್ತು ತಾನು ಏತಕ್ಕಾಗಿ ಶಿಕ್ಷಕನಾಗಬೇಕು ಎನ್ನುವ ಅಂಶವನ್ನು ತಿಳಿಯಬೇಕಿದೆ ಎಂದರು.ವಿದ್ಯೆಗಾಗಿ ಇನ್ನೊಬ್ಬರ ನೋವು ನಿವಾರಣೆ ಮಾಡುವುದಕ್ಕಾಗಿ ಅಥವಾ ಪರರ ಹಿತಕ್ಕಾಗಿ ಹಣಕ್ಕಾಗಿ ಈ ಮೂರು ಉದ್ದೇಶಗಳಲ್ಲಿ ಹಣಕ್ಕಾಗಿ ಮಾಡುವವರು ಎಂದೂ ಪ್ರಗತಿಯ ತುತ್ತತುದಿಯನ್ನು ಮುಟ್ಟಲಾರರು. ಪ್ರತಿನಿತ್ಯವೂ ಸ್ವಾಧ್ಯಾಯವನ್ನು ಮಾಡುತ್ತಾ, ತಾನು ಇನ್ನೂ ಕಲಿಯುತ್ತಿರುವ ವಿದ್ಯಾರ್ಥಿ ಎಂಬ ಭಾವನೆಯಿಂದ, ಪರರ ಹಿತಕ್ಕಾಗಿ ಬುದುಕುವನು ಎಂದರು.
ಅಧ್ಯಕ್ಷತೆ ವಹಿಸಿದ್ದ ಮಹಾವಿದ್ಯಾಲಯದ ಸಂಸ್ಥಾಪಕ ಯೋಗ ಪ್ರವೀಣ ಶಿವಪ್ರಕಾಶ್ ಮಾತನಾಡಿ, ಯೋಗ ಒಂದು ನಿತ್ಯಾನುಷ್ಠಾನದ ಕಲೆ. ದೇಶ- ವಿದೇಶಗಳಲ್ಲಿ ಇಂದು ಅಪಾರ ಸಂಖ್ಯೆಯಲ್ಲಿ ಯೋಗವನ್ನು ಅಭ್ಯಾಸ ಮಾಡುತ್ತಿರುವುದು ಒಂದು ಉತ್ತಮ ಬೆಳವಣಿಗೆ. ಯೋಗವನ್ನು ಕಲಿತು ಇತರರಿಗೂ ಕಲಿಸುವ ಉದ್ದೇಶವನ್ನು ಬೆಳೆಸಿಕೊಂಡಲ್ಲಿ ನಮ್ಮ ಜೀವನ ಸಾರ್ಥಕವಾಗುತ್ತದೆ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.ಬೋಗಾದಿಯ ಗೋಸಾಯಿ ಟ್ರಸ್ಟ್ ಅಧ್ಯಕ್ಷ ನಾಗರಾಜಪ್ಪ, ಕಾರ್ಯದರ್ಶಿ ರಾಘವೇಂದ್ರ ಭಟ್, ಮಾಸ್ಟರ್ಆಫ್ ಯೋಗಿಕ್ಸೈನ್ಸ್ ಅಧ್ಯಯನ ವಿಭಾಗದ ವಿ.ಕೆ. ರಾಹುಲ್, ಚೇತನ್ ಇದ್ದರು.
ಗಾಯಕಿ ಸಂವೇದಿತಾ ಸುಭಾಷ್ ಪ್ರಾರ್ಥಿಸಿದರು. ಬಿ. ಭರತ್ ಸ್ವಾಗತಿಸಿದರು. ಉಪನ್ಯಾಸಕ ಪಿ. ಮರಿಸ್ವಾಮಿ ವಂದಿಸಿದರು.ಬಿ.ಬೀರೇಗೌಡಗೆ ಅಭಿನಂದನೆ
ಕನ್ನಡಪ್ರಭ ವಾರ್ತೆ ಮೈಸರುಮೈಸೂರು ವಿವಿ ಗೃಹ ನಿರ್ಮಾಣ ಮಂಡಳಿ ನಿರ್ದೇಶಕರಾಗಿ ಬೀರೇಗೌಡ ಅವಿರೋಧವಾಗಿ ಆಯ್ಕೆಯಾದರು.
ವಿಶ್ವಮಾನವ ಮೈಸೂರು ವಿವಿ ನೌಕರರ ವೇದಿಕೆ ವತಿಯಿಂದ ಬೀರೇಗೌಡರನ್ನು ಅಭಿನಂದಿಸಲಾಯಿತು. ಇವರ ವಿರುದ್ಧ ಯಾರು ನಾಮಪತ್ರ ಸಲ್ಲಿಸದ ಕಾರಣ ಇವರು ನೇರವಾಗಿ ಆಯ್ಕೆಯಾಗಿದ್ದಾರೆ. ಯಾರ ಮನಸ್ಸನ್ನು ನೋಯಿಸದೆ ಸರಳ ಸಜ್ಜನರು ವಿಶ್ವವಿದ್ಯಾನಿಲಯಕ್ಕೆ ಆಯ್ಕೆಯಾಗಿರುವುದು ನಮ್ಮ ಹೆಮ್ಮೆ ಎಂದರು.ಈ ವೇಳೆ ಗೃಹ ನಿರ್ಮಾಣ ಮಂಡಳಿ ಅಧ್ಯಕ್ಷ ಕೆ.ಟಿ. ಮನು, ನಿರ್ದೇಶಕರಾದ ಹರೀಶ್ ಬಾಬು, ಮಹೇಶ್, ವೇದಿಕೆ ಅಧ್ಯಕ್ಷ ಆರ್. ವಾಸುದೇವ್, ಉಪಾಧ್ಯಕ್ಷ ಭಾಸ್ಕರ್, ತೋಟಗಾರಿಕೆ ಉಪ ನಿರ್ದೇಶಕ ಚೆಲುವೆಸ್, ವಿವೇಕ್, ಯೋಗೇಶ್, ನವೀನ್, ಚಿದಾನಂದ್, ಹರೀಶ್, ಶಿವರಾಂ, ದರ್ಶನ್ ಮೊದಲಾದವರು ಇದ್ದರು.