ಕನ್ನಡಪ್ರಭ ವಾರ್ತೆ,ರಬಕವಿ-ಬನಹಟ್ಟಿ,
ರಾಜ್ಯ ನೀರಾವರಿ ಅಧಿಕಾರಿಗಳು ಉಪಸ್ಥಿತರಿದ್ದು, ನೀರಿನ ಪ್ರಮಾಣ, ಸಾಧಕ-ಬಾಧಕಗಳ ಕುರಿತು ವಿಷಯ ಮಂಡಿಸಿದರು.
ಆಲಮಟ್ಟಿಯಲ್ಲಿ ೫೨೪.೨೫ ಮೀ. ಎತ್ತರ ಮಾಡುವಲ್ಲಿ ವಿಚಾರಣೆಯಲ್ಲಿರುವ ಕಾರಣ, ನೀರು ಸಂಗ್ರಹದ ನಂತರ ಮಹಾರಾಷ್ಟ್ರ ಹಾಗು ರಾಜ್ಯಗಳಲ್ಲಿನ ಕೃಷ್ಣಾ ಜಲಾನಯನ ಪ್ರದೇಶದಲ್ಲಿನ ಮುಳುಗಡೆ ಕುರಿತು ಸಮಗ್ರ ಮಾಹಿತಿಯೊಂದಿಗೆ ಬಹುತೇಕ ಕೃಷ್ಣಾ ನದಿಗಳ ಬ್ಯಾರೇಜ್ಗಳ ವೀಕ್ಷಣೆಯಲ್ಲಿ ತೊಡಗಿದ್ದರು.ತಂಡದ ನೇತೃತ್ವ ವಹಿಸಿರುವ ಹಿರಿಯ ವಕೀಲ ಮೋಹನ ಕಾತರಕಿ ಸುದ್ದಿಗಾರರೊಂದಿಗೆ ಮಾತನಾಡಿ, ಕೃಷ್ಣಾ ನದಿ ಪ್ರವಾಹದ ಸಂದರ್ಭ ಹಾಗೂ ನೀರು ಶೇಖರಣೆ ಕುರಿತಾದ ಮಾಹಿತಿಗಾಗಿ ಭೆಟ್ಟಿ ನೀಡಿ ಬ್ಯಾರೇಜ್ ಪರಿಶೀಲನೆ ನಡೆಸಲಾಗುತ್ತಿದೆ ಎಂದು ಸ್ಪಷ್ಟಪಡಿಸಿದರು.
ಈ ಸಂದರ್ಭ ನಿಗಮದ ಮುಖ್ಯ ಕಾರ್ಯನಿರ್ವಾಹಕ ಬಿ.ಆರ್. ನಂದೀಶ, ವ್ಯವಸ್ಥಾಪಕ ಕಾರ್ಯನಿರ್ವಾಹಕ ಎಸ್.ಸಿ. ರರ್ಮೇಂದ್ರ, ವಿ.ಎನ್. ರಘುಪತಿ, ಅನೀಲಕುಮಾರ, ಎಂ.ಎಸ್. ಮೋಹನ, ಹಿಪ್ಪರಗಿ ಸಹಾಯಕ ಅಭಿಯಂತರ ಎಂ.ಪಿ. ಶಿವಮೂರ್ತಿ, ಬಸವರಾಜ ಮಾಳಿ ಸೇರಿದಂತೆ ಅನೇಕರಿದ್ದರು.