ಪುಣ್ಯಸ್ಮರಣೆ । ಬಸವರಾಜ ದೇಶೀಕೇಂದ್ರ ಸ್ವಾಮೀಜಿ ನೆನಪು
ಕನ್ನಡಪ್ರಭ ವಾರ್ತೆ ಹಳೇಬೀಡುಇಂದಿನ ಸಮಾಜದಲ್ಲಿ ಅದರಲ್ಲಿಯೂ ನಮ್ಮ ರಾಜ್ಯದ ಶೈಕ್ಷಣಿಕ ಪ್ರಗತಿಗೆ ಸಹಕಾರ ನೀಡಿದ ಮಠಗಳು, ಖಾಸಗಿ ವಿದ್ಯಾ ಸಂಸ್ಥೆಗಳು, ರಾಜ್ಯ ಸರ್ಕಾರ ಸಮಾನತೆಯಲ್ಲಿ ಕೊಡುಗೆ ನೀಡುತ್ತ ಬಂದಿದೆ. ನಮ್ಮ ರಾಜ್ಯದಲ್ಲಿ ಮಠಾಧೀಶರು ಶೈಕ್ಷಣಿಕವಾಗಿ ತ್ಯಾಗ- ಸೇವೆ ನೀಡಿದ ಎಲ್ಲಾ ಧರ್ಮದ ಮಠಾಧೀಶರ ಕೊಡುಗೆ ಇದೆ ಎಂದು ತುಮಕೂರಿನ ಸಿದ್ದಗಂಗಾ ಮಠದ ತ್ರಿವಿಧ ದಾಸೋಹಿ ಡಾ.ಸಿದ್ಧಲಿಂಗ ಮಹಾ ಸ್ವಾಮೀಜಿ ತಿಳಿಸಿದರು.
ನಮ್ಮ ರಾಜ್ಯದಲ್ಲಿ ಮಠಾಧೀಶರು ಶೈಕ್ಷಣಿಕವಾಗಿ ತ್ಯಾಗ- ಸೇವೆ ನೀಡಿದ ಎಲ್ಲಾ ಧರ್ಮದ ಮಠಾಧೀಶರ ಕೊಡುಗೆ ಇದೆ ಎಂದು ತುಮಕೂರಿನ ಸಿದ್ದಗಂಗಾ ಮಠದ ತ್ರಿವಿಧ ದಾಸೋಹಿ ಡಾ.ಸಿದ್ಧಲಿಂಗ ಮಹಾ ಸ್ವಾಮೀಜಿ ತಿಳಿಸಿದರು. ಹಳೇಬೀಡಿನಲ್ಲಿ ಮಠಾಧೀಶರ ಸಮನ್ವಯ ಸಮಿತಿಯ ಕಾರ್ಯಕ್ರಮವನ್ನ ಉದ್ಘಾಟಿಸಿ ಮಾತನಾಡಿದರು. ಹಳೇಬೀಡು ಸಮೀಪ ಶ್ರೀ ಪುಷ್ಪಗಿರಿ ಕ್ಷೇತ್ರದಲ್ಲಿ ಬಸವರಾಜ ದೇಶೀಕೇಂದ್ರ ಮಹಾ ಸ್ವಾಮೀಜಿಯ ೨೦ನೇ ಪುಣ್ಯ ಸಂಸ್ಮರಣೆ ಹಾಗೂ ಮಠಾಧೀಶರ ಸಮನ್ವಯ ಸಮಿತಿಯ ಕಾರ್ಯಕ್ರಮವನ್ನ ಉದ್ಘಾಟಿಸಿ ಮಾತನಾಡಿ, ‘೧೦೦ ವರ್ಷಗಳಿಂದ ಲಕ್ಷಾಂತರ ವಿದ್ಯಾರ್ಥಿಗಳಿಗೆ ವಿದ್ಯಾದಾನದೊಂದಿಗೆ ದಾಸೋಹವನ್ನು ನೀಡುತ್ತ ಮಕ್ಕಳಿಗೆ ಪಾಠ, ಪ್ರವಚನ, ಸಂಸ್ಕಾರವನ್ನು ನೀಡುತ್ತ ಬಂದಿದ್ದಾರೆ. ಇಂದಿನ ಸಮಾಜದಲ್ಲಿ ತಂದೆ ತಾಯಿಯರಿಗೆ ಎಷ್ಟು ಮಹತ್ವ ನೀಡುತ್ತ ಬಂದಿದ್ದಾರೋ ಹಾಗೆ ಮಠದ ಬಗ್ಗೆಯೂ ಸಹ ಮಹತ್ವ ನೀಡಿದರೆ ಮಠಗಳು ಮುಂದೆ ಬರಲು ಸಾಧ್ಯ’ ಎಂದು ಹೇಳಿದರುಇಂದಿನ ಜನತೆಗೆ ಮಠದ ಬಗ್ಗೆ ತಾತ್ಸಾರ ಬಂದಿರುವುದು ಬೇಸರ ವಿಚಾರವಾಗಿದೆ, ಹಳೇಬೀಡು ಹಳೆ ಕ್ಷೇತ್ರವಾದರೆ, ಪುಷ್ಪಗಿರಿ ನೂತನ ಭೂ ಕೈಲಾಸವಾಗಿದೆ. ಇದರ ಹಿನ್ನೆಲೆಯಲ್ಲಿ ಎಷ್ಟು ಸಾಧನೆ ಇದೆ ಎಂಬುದು ಜನರ ಅರ್ಥಮಾಡಿಕೊಳ್ಳಬೇಕು. ನಾನು ಈ ಹಿಂದೆ ದೊಡ್ಡ ಶ್ರೀಗಳ ಜೊತೆಯಲ್ಲಿ ಬಂದಾಗ ದೊಡ್ಡ ಕಾಡು ಅದರ ಮಧ್ಯದಲ್ಲಿ ದೇವಾಲಯ ಇತ್ತು. ಈಗ ನೋಡಿದರೆ ಇದು ನಿಜವಾಗಲೂ ಭೂ ಕೈಲಾಸವಾಗಿ ಪ್ರವಾಸಿಗರನ್ನು ಕೈಬೀಸಿ ಕರೆಯುವಂತ ಸ್ಥಳವಾಗಿದೆ. ಇಲ್ಲಿ ಬಂದರೆ ಶಾಂತಿ ನೆಮ್ಮದಿ ಸಹ ದೊರೆಯುತ್ತದೆ ಎಂದು ಅಭಿಪ್ರಾಯಪಟ್ಟರು.
‘ಇವತ್ತಿನ ಸಮಾಜದಲ್ಲಿ ಮಠಾಧೀಶರು ಎಷ್ಟು ಕೆಲಸವನ್ನು ಮಾಡುತ್ತಾರೆ ಎಂದರೆ ಶೈಕ್ಷಣಿಕ ಪ್ರಗತಿಯಲ್ಲಿ ಮಕ್ಕಳನ್ನು ಅಭಿವೃದ್ಧಿಗೆ ಎಷ್ಟು ಸಾಧನೆ ನೀಡಿದ್ದಾರೆದ ಎಂದು ತಿಳಿಯುತ್ತದೆ. ಕರ್ನಾಟಕ ರಾಜ್ಯದಲ್ಲಿ ಶೈಕ್ಷಣಿಕವಾಗಿ ೫೦ ವರ್ಷಗಳು ಮುಂದಿದೆ. ಬೇರೆ ರಾಜ್ಯವಾದ ಬಿಹಾರದಲ್ಲಿ ೫೦ ವರ್ಷಗಳ ಹಿಂದಿದೆ. ಅಲ್ಲಿಯ ಜನತೆ ಈ ಭಾಗದಲ್ಲಿ ವಿದ್ಯಾಭ್ಯಾಸ ಮಾಡಿ ಒಳ್ಳೆಯ ಸ್ಥಾನವನ್ನು ಪಡೆದಿದ್ದಾರೆ. ಶ್ರೀಪುಷ್ಪಗಿರಿ ಕ್ಷೇತ್ರ ಭಕ್ತಿ ಕ್ಷೇತ್ರವಾಗದೆ ಗ್ರಾಮೀಣ ಅಭಿವೃದ್ಧಿಯ ಸಂಸ್ಥೆಯನ್ನು ಕಟ್ಟಿಕೊಂಡು ಅದರ ಹಿಂದೆ ಎಷ್ಟು ಶ್ರಮವನ್ನು ಹಾಕಿದ್ದಾರೆ. ಮನುಷ್ಯನ ಜೀವನಕ್ಕೆ ಹಣ ಸಹಾಯ, ವ್ಯವಹಾರದ ಕಲಿಕೆ, ಕುಟುಂಬಗಳು ಜೀವನಕ್ಕೆ ತಳಪಾಯ ಇವುಗಳ ಕೆಲಸ. ಕರ್ನಾಟಕದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಮಕಾಲಿಕವಾಗಿ ಶ್ರೀ ಕ್ಷೇತ್ರ ಪುಷ್ಪಗಿರಿ ಗ್ರಾಮೀಣ ಅಭಿವೃದ್ಧಿಯ ಕೆಲಸವನ್ನು ಮಾಡುತ್ತಾ ಬಂದಿದೆ. ರಾಜ್ಯದ ಜನತೆಯು ಸಹ ಇದರ ವಿಚಾರವಾಗಿ ಹರ್ಷ ವ್ಯಕ್ತಪಡಿಸಿದ್ದಾರೆ ನನಗೆ ಭಾರಿ ಸಂತೋಷವಾಯಿತು. ಈ ಚಿಕ್ಕ ವಯಸ್ಸಿನಲ್ಲಿ ಸನ್ಯಾಸ ಸ್ವೀಕರಿಸಿ ಕ್ಷೇತ್ರದಲ್ಲಿ ಹಲವಾರು ಅಭಿವೃದ್ದಿ ಮಾಡುತ್ತ ಬಂದಿರುವ ಸೋಮಶೇಖರ ಶಿವಾಚಾರ್ಯರಿಗೆ ಬಗ್ಗೆ ನನಗೆ ಹೆಮ್ಮೆ ಎಂದು ತಿಳಿಸಿದರು.ಕ್ಷೇತ್ರದ ಪುಷ್ಪಗಿರಿಯ ಸ್ವಾಮೀಜಿ ಸೋಮಶೇಖರ ಶಿವಾಚಾರ್, ವಿವಿಧ ಮಠಾಧೀಶರು, ಆಡಳಿತಾಧಿಕಾರಿ ಕುಮಾರಸ್ವಾಮಿ, ಗಂಗೂರು ಶಿವಕುಮಾರ್, ಹುಲ್ಲಿಕೆರೆ ರಾಜಶೇಖರಯ್ಯ ಹಾಜರಿದ್ದರು.
ಹಳೇಬೀಡಲ್ಲಿ ಮಠಾಧೀಶರ ಸಮನ್ವಯ ಸಮಿತಿಯ ಕಾರ್ಯಕ್ರಮವನ್ನು ಸಿದ್ಧಲಿಂಗ ಸ್ವಾಮಿ ಹಾಗೂ ಸೋಮಶೇಖರ ಶಿವಾಚಾರ್ಯರು, ವಿವಿಧ ಮಠಾಧೀಶರು ಉದ್ಘಾಟಿಸಿದರು .