ಮಹಿಳೆ ಸಕಾರಾತ್ಮಕ ಚಿಂತನೆ ಮೂಲಕ ಬೆಳೆದು ಬೆಳಗಬೇಕು-ನ್ಯಾಯವಾದಿ ವೀಣಾ

KannadaprabhaNewsNetwork | Published : Mar 13, 2024 2:02 AM

ಸಾರಾಂಶ

ಯಾರದೋ ತೇಜೋವಧೆಯಿಂದ ನಮ್ಮ ಅಭಿವೃದ್ಧಿ ಸಾಧ್ಯವಿಲ್ಲ, ಮಾನಸಿಕ ಬೌದ್ಧಿಕವಾಗಿ ಮಹಿಳೆ ಸಕಾರಾತ್ಮಕ ಚಿಂತನೆ ಮೂಲಕ ಬೆಳೆದು ಬೆಳಗಬೇಕು ಎಂದು ನ್ಯಾಯವಾದಿ ವೀಣಾ ಬ್ಯಾತನಾಳ ತಿಳಿಸಿದರು.

ಹಾನಗಲ್ಲ: ಯಾರದೋ ತೇಜೋವಧೆಯಿಂದ ನಮ್ಮ ಅಭಿವೃದ್ಧಿ ಸಾಧ್ಯವಿಲ್ಲ, ಮಾನಸಿಕ ಬೌದ್ಧಿಕವಾಗಿ ಮಹಿಳೆ ಸಕಾರಾತ್ಮಕ ಚಿಂತನೆ ಮೂಲಕ ಬೆಳೆದು ಬೆಳಗಬೇಕು ಎಂದು ನ್ಯಾಯವಾದಿ ವೀಣಾ ಬ್ಯಾತನಾಳ ತಿಳಿಸಿದರು.

ಹಾನಗಲ್ಲಿನ ಶ್ರೀ ಕುಮಾರೇಶ್ವರ ವಿರಕ್ತಮಠದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ನ್ಯಾಯವಾದಿಗಳ ಸಂಘ, ಶರಣ ಸಾಹಿತ್ಯ ಪರಿಷತ್ತು, ಕದಳಿ ಮಹಿಳಾ ವೇದಿಕೆಗಳ ಸಂಯುಕ್ತ ಆಶ್ರಯದಲ್ಲಿ ಮಹಿಳಾ ದಿನಾಚರಣೆ ಅಂಗವಾಗಿ ಆಯೋಜಿಸಿದ ಕಾನೂನು ಅರಿವು ನೆರವು ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಮಾತನಾಡಿದರು. ಘೋಷಣೆಗಳು, ದೂಷಣೆಗಳಿಂದ ಎಲ್ಲವೂ ಸಾಧ್ಯವಿಲ್ಲ. ಇದು ಗಾಂಧಾರಿಯ ಕಾಲವಲ್ಲ. ಪುರುಷರ ಅವಹೇಳನದಿಂದ ಮಹಿಳಾ ಅಭಿವೃದ್ಧಿ ಸಾಧ್ಯವಿಲ್ಲ. ಸ್ತ್ರೀ ಪುರುಷರು ಒಂದು ನಾಣ್ಯದ ಎರಡು ಮುಖ. ಈಗಾಗಲೇ ಸಾಧನೆಯ ಮೇರು ವ್ಯಕ್ತಿತ್ವ ಹೊಂದಿದ ಸಾಧಕಿಯರನ್ನು ಆದರ್ಶವಾಗಿಟ್ಟುಕೊಂಡು ಮಹಿಳೆ ಬೆಳೆಯಬೇಕಾಗಿದೆ. ಮಹಿಳೆಯರ ಮೇಲೆ ದೌರ್ಜನ್ಯ ಪ್ರಕರಣಗಳು ನಡೆಯುತ್ತಿದ್ದರೆ ರಾಮರಾಜ್ಯ ಕಾಣುವುದು ಯಾವಾಗ? ಎಲ್ಲದಕ್ಕೂ ಒಳ್ಳೆಯ ಸಂಸ್ಕಾರ ಬೇಕಾಗಿದೆ ಎಂದರು.

ಮುಖ್ಯ ಅತಿಥಿಯಾಗಿ ಮಾತನಾಡಿದ ಶಿಕ್ಷಕಿ ಎಸ್. ವಿನುತಾ, ೧೨ನೇ ಶತಮಾನದ ಶರಣರು ಭವಿಷ್ಯದ ಈ ಜಗದ ಆತಂಕಗಳನ್ನು ಅರಿತು ಅಂಕು ಡೊಂಕು ತಿದ್ದಲು ವಚನಗಳ ಮೂಲಕ ಪ್ರೇರಣೆ ಆದರು. ಮಹಿಳಾ ಸ್ವಾತಂತ್ರ್ಯಕ್ಕಾಗಿ ಅಂದೇ ಕ್ರಾಂತಿ ಮಾಡಿದರು. ಹೆಣ್ಣಿನ ಬಗೆಗೆ ಕನಿಕರ, ಮಮತೆಗಿಂತಲೂ ನೋವು ಸಂಕಟ ಕೊಡದಂತೆ ಹೆಣ್ಣನ್ನು ಕಾಣುವುದೇ ಒಳ್ಳೆಯ ಸಮಾಜದ ಮೌಲ್ಯದ ಮೊತ್ತ. ಈಗ ಮಹಿಳಾ ಸ್ವಾತಂತ್ರ್ಯದ ಉತ್ಥಾನ ಕಾಲದಲ್ಲಿದ್ದೇವೆ. ಇದರ ಸದುಪಯೋಗ ಆಗಬೇಕೇ ಹೊರತು ದುರುಪಯೋಗ ಸಲ್ಲದು. ಭಾರತೀಯ ಇತಿಹಾಸದಲ್ಲಿ ಹೆಣ್ಣಿಗೆ ಇರುವ ನಿಜವಾದ ಗೌರವವನ್ನು ಗಮನಿಸಿದರೆ ನಾವು ಹೆಣ್ಣಾಗಿ ಹುಟ್ಟಿದ್ದೇ ಒಂದು ದೊಡ್ಡ ಸಾರ್ಥಕ್ಯ ಎಂದರು.

ಅಧ್ಯಕ್ಷೀಯ ಮಾತುಗಳನ್ನಾಡಿದ ಕದಳಿ ಮಹಿಳಾ ವೇದಿಕೆ ಅಧ್ಯಕ್ಷೆ ಶಿವಗಂಗಕ್ಕ ಪಟ್ಟಣದ, ಇಂದು ತಂತ್ರಜ್ಞಾನದ ಯುಗದಲ್ಲಿರುವ ಮಹಿಳೆಗೆ ಸಾಂಸ್ಕೃತಿಕ ಸಾಮಾಜಿಕ ಆರ್ಥಿಕ ಅವಕಾಶಗಳು ಸಾಕಷ್ಟಿವೆ ಅವುಗಳ ಸದುಪಯೋಗ ಆಗಬೇಕು. ಮಹಿಳೆ ಅಬಲೆ ಅಲ್ಲ ಎಂಬುದು ಸಾಬೀತಾಗಿದೆ. ಅಂತಹ ದಿಟ್ಟತನ ನಮ್ಮ ನಡುವಳಿಕೆಗಳಲ್ಲಿ ಬೇಕು ಎಂದರು.

ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಪ್ರೊ.ಮಾರುತಿ ಶಿಡ್ಲಾಪೂರ ಪ್ರಾಸ್ತಾವಿಕ ಮಾತನಾಡಿದರು. ಶಸಾಪ ನಗರ ಘಟಕದ ಗೌರವಾಧ್ಯಕ್ಷ ರವಿಬಾಬು ಪೂಜಾರ, ಅಧ್ಯಕ್ಷ ಪ್ರೊ.ಸಿ.ಮಂಜುನಾಥ, ತಾಲೂಕು ಘಟಕದ ಅಧ್ಯಕ್ಷ ಎಸ್.ಸಿ.ಕಲ್ಲನಗೌಡರ, ಅಕ್ಕಮ್ಮ ಶೆಟ್ಟರ, ರೇಖಾ ಶೆಟ್ಟರ, ಎಂ.ಎಸ್.ಹುಲ್ಲೂರ, ಅಶೋಕ ದಾಸರ, ಮಲ್ಲಿಕಾರ್ಜುನ ಅಮರದ, ಕಮಲಾಕ್ಷಿ ಕೊಂಡೋಜಿ, ವೇದಿಕೆಯಲ್ಲಿದ್ದರು.

ಪಂಕಜ ಅರಳೆಲಿಮಠ, ವಿಜಯಲಕ್ಷ್ಮೀ ಹಳ್ಳೀಕೇರಿ, ಸುನಿತಾ ಉಪ್ಪಿನ, ಬಸನಗೌಡ ಪಾಟೀಲ, ರತ್ನ ಡೂಗೂರಮಠ, ರೇವತಿ ಹತ್ತಿಕಾಳ, ಸುಧಾ ಎಚ್, ಸುಜಾತಾ ಸಿಂಧೂರ, ಕವಿತಾ ಸಿಂದೂರ, ಉಷಾ ಕಬ್ಬೂರ, ಕಲಾ ಶೀಲವಂತರ, ಅನಿತಾ ಹಲಕುರ್ಕಿ, ಕವಿತಾ ಹಿರೇಗೌಡರ, ಅನುಪಮಾ ಉಪ್ಪಿನ, ಶ್ರೀದೇವಿ ಕೋಟಿ, ಪ್ರತಿಭಾ ಎಸ್, ಯಾಮಿನಿ ಪೂಜಾರ, ಲಕ್ಷ್ಮೀ ಸಿಂಧೂರ್, ಐಶ್ವರ್ಯ ಎಚ್.ವಿ., ಶಾಂತಕ್ಕ ಹೊಳಲದ, ಸುವರ್ಣ ಹಿರೇಗೌಡರ, ಮಹಾದೇವಿ ಶಾಂತಪೂರಮಠ, ಶೋಭಾ ಪಾಟೀಲ ವಚನಗಳನ್ನು ಹಾಡಿದರು.

ಎಚ್.ಸುಧಾ, ಲಕ್ಷ್ಮೀ ಸಿಂಧೂರ ಪ್ರಾರ್ಥನೆ ಹಾಡಿದರು, ತಾಲೂಕು ಕಾರ್ಯದರ್ಶಿ ಸುಭಾಸ ಹೊಸಮನಿ ಸ್ವಾಗತಿಸಿದರು. ಬಿ.ಅರ್.ಪಾಟೀಲ ವಚನ ಗಾಯನ ಮಾಡಿದರು. ಪ್ರವೀಣ ಬ್ಯಾತನಾಳ ಕಾರ್ಯಕ್ರಮ ನಿರೂಪಿಸಿದರು. ತಾಲೂಕು ಉಪಾಧ್ಯಕ್ಷ ಅಶೋಕ ದಾಸರ ವಂದಿಸಿದರು.

Share this article