ಕನ್ನಡಪ್ರಭ ವಾರ್ತೆ, ಬಾಳೆಹೊನ್ನೂರು
ನಾಗರಿಕ ವೇದಿಕೆ ಹಿರಿಯಣ್ಣ ಮಾತನಾಡಿ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಗ್ರಾಮಸಭೆ ನಡೆಸುವುದು ಗ್ರಾಮಸ್ಥರ ಹಕ್ಕಾಗಿದೆ. ಆದರೆ ಅಧಿಕಾರಿಗಳು ಸಭೆಗೆ ಬಾರದೆ ನಿರ್ಲಕ್ಷ್ಯ ತಾಳಿದ್ದಾರೆ. ಸರ್ಕಾರ ಗ್ರಾಮಸಭೆ ರೂಪಿಸಿರುವುದೇ ಜನರ ಸಮಸ್ಯೆ ಆಲಿಸಲು. ಗ್ರಾಮಸ್ಥರ ಸಮಸ್ಯೆಗಳನ್ನು ಇಲ್ಲಿ ಆಲಿಸಿ ಅದರ ನಿರ್ಣಯ ಕೈಗೊಂಡು ಸರ್ಕಾರಕ್ಕೆ ಸಲ್ಲಿಸಬೇಕಿದೆ. ಅಧಿಕಾರಿಗಳೇ ಸಭೆಗೆ ಬಾರದಿದ್ದರೆ ಸಮಸ್ಯೆಗೆ ಪರಿಹಾರ ಕೈಗೊಳ್ಳುವುದು ಹೇಗೆ? ಸದ್ಯದಲ್ಲಿ ಗ್ರಾಪಂ ಚುನಾವಣೆ ಎದುರಾ ಗಲಿದ್ದು, ಈಗ ಸಭೆ ನಡೆಸದಿದ್ದರೆ ಮತ್ತೆ ಸಭೆ ನಡೆಸಲು ಕಾಯಬೇಕಾಗುತ್ತದೆ. ಈಗಾಗಲೇ ಗ್ರಾಪಂ ವ್ಯಾಪ್ತಿಯಲ್ಲಿ ಗ್ರಾಮಸಭೆ ನಡೆದು 3 ವರ್ಷಗಳು ಕಳೆದಿವೆ. ನಮ್ಮ ಕೆಲವು ಸಮಸ್ಯೆ, ಅಭಿವೃದ್ಧಿ ಕಾರ್ಯಗಳಿಗೆ ಗ್ರಾಪಂನವರು ಸ್ಪಂದಿಸುತ್ತಾರೆ. ಕೆಲ ವೊಂದು ಇಲಾಖಾ ವ್ಯಾಪ್ತಿಯಲ್ಲಿ ನಡೆಯಬೇಕಿದೆ. ಅದಕ್ಕೆ ಪರಿಹಾರ ಕೊಡುವುದು ಯಾರು ಎಂದು ಆಕ್ರೋಶ ವ್ಯಕ್ತಪಡಿಸಿದರು.ಗ್ರಾಮಸ್ಥ ಮೋಹನ್ ಭಂಡಾರಿ ಮಾತನಾಡಿ, ಬಾಳೆಹೊನ್ನೂರು ಪಟ್ಟಣ ವ್ಯಾಪ್ತಿಯಲ್ಲಿ ಮಂಗಗಳ ಹಾವಳಿ ಮಿತಿ ಮೀರಿದ್ದು, ಹಲವು ಬಾರಿ ಅರಣ್ಯ ಇಲಾಖೆಗೆ ಮಾಹಿತಿ ನೀಡಿದರೂ ಕ್ರಮಕೈಗೊಂಡಿಲ್ಲ. ಆದ್ದರಿಂದ ಸ್ಥಳಕ್ಕೆ ವಲಯ ಅರಣ್ಯಾಧಿಕಾರಿ ಬಂದು ಉತ್ತರ ನೀಡಬೇಕು ಅಲ್ಲಿವರೆಗೆ ಸಭೆ ನಡೆಸುವುದು ಬೇಡ ಎಂದು ಒತ್ತಾಯಿಸಿದರು. ಗ್ರಾಪಂ ನೋಡಲ್ ಅಧಿಕಾರಿ ಎ.ಕೆ.ಪಾಟೀಲ್ ಮಾತನಾಡಿ, ಗ್ರಾಮಸಭೆಗೆ ಗೈರಾಗಿರುವ ಅಧಿಕಾರಿಗೆ ಪಿಡಿಒ, ತಾಪಂ ಇಓ ಮೂಲಕ ನೋಟಿಸ್ ನೀಡಿಸಬೇಕು. ಮುಂದಿನ ಸಭೆಗೆ ಕಡ್ಡಾಯವಾಗಿ ಹಾಜರಾಗುವಂತೆ ಇಓ ಮೂಲಕ ಸಭೆಯ ಸೂಚನಾ ಪತ್ರ ನೀಡಬೇಕು. ತುರ್ತು ಕಾರಣಗಳಿಂದ ಸಭೆಗೆ ಬರಲು ಸಾಧ್ಯವಿರದ ಅಧಿಕಾರಿಗಳು ಇಓ ಅನುಮತಿ ಮೂಲಕ ಮಾತ್ರ ಗೈರಾಗಬೇಕು ಎಂದು ಹೇಳಿದರು.ಪಿಡಿಓ ಕಾಶಪ್ಪ ಮಾತನಾಡಿ, ಗ್ರಾಮಸ್ಥರು ಅಭಿಪ್ರಾಯದಂತೆ ಗ್ರಾಮಸಭೆ ಮುಂದೂಡಿದ್ದು, ಮುಂದಿನ ಸಭೆ ನಡೆಯುವ ದಿನಾಂಕ ಶೀಘ್ರದಲ್ಲಿ ಪ್ರಕಟಿಸಿ ಗ್ರಾಮಸ್ಥರಿಗೆ ಪ್ರಚುರಪಡಿಸಲಾಗುವುದು ಎಂದರು.ಗ್ರಾಪಂ ಉಪಾಧ್ಯಕ್ಷೆ ರಂಜಿತಾ, ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷೆ ಚಂದ್ರಮ್ಮ, ಗ್ರಾಪಂ ಕಾರ್ಯದರ್ಶಿ ರಾಮಪ್ಪ, ಡಿಆರ್ಎಫ್ಓ ನವೀನ್, ಗ್ರಾಮ ಆಡಳಿತಾಧಿಕಾರಿ ಸಮೀಕ್ಷಾ, ಪಶು ವೈದ್ಯ ಪರೀಕ್ಷಕಿ ನಾಗರತ್ನ, ಕೃಷಿ ಇಲಾಖೆ ಸಂಕೇತ್, ನೀರಾವರಿ ಇಲಾಖೆ ಆಕಾಶ್, ಅನುಪ್ಕುಮಾರ್, ಆರೋಗ್ಯ ಇಲಾಖೆ ಭಗವಾನ್, ವಿಜಯಲಕ್ಷ್ಮಿ, ಸಿಡಿಪಿಓ ಕಚೇರಿ ಮೇಲ್ವಿಚಾರಕಿ ನಳಿನಾಕ್ಷಿ ಮತ್ತಿತರರು ಹಾಜರಿದ್ದರು. ೧೭ಬಿಹೆಚ್ಆರ್ ೧:
ಬಾಳೆಹೊನ್ನೂರಿನ ಬಿ.ಕಣಬೂರು ಗ್ರಾಪಂನಲ್ಲಿ ಆಯೋಜಿಸಿದ್ದ ಗ್ರಾಮಸಭೆಯಲ್ಲಿ ಅಧ್ಯಕ್ಷ ರವಿಚಂದ್ರ ಮಾತನಾಡಿದರು. ಎ.ಕೆ.ಪಾಟೀಲ್, ರಂಜಿತಾ, ಚಂದ್ರಮ್ಮ, ಕಾಶಪ್ಪ, ರಾಮಪ್ಪ ಮತ್ತಿತರರು ಇದ್ದರು.