ಕರ್ನಾಟಕ ವಿಶ್ವವಿದ್ಯಾಲಯ ಪರೀಕ್ಷಾ ಶುಲ್ಕ ಏರಿಕೆಗೆ ಎಬಿವಿಪಿ ಆಕ್ರೋಶ

KannadaprabhaNewsNetwork | Published : May 29, 2025 2:24 AM
ವಿದ್ಯಾರ್ಥಿಗಳಿಗೆ ಕಡಿಮೆ ಶುಲ್ಕ ಅಥವಾ ಉಚಿತ ಶುಲ್ಕದೊಂದಿಗೆ ಶೈಕ್ಷಣಿಕ ಅನುಕೂಲ ಕಲ್ಪಿಸಬೇಕಾದ ಸರ್ಕಾರ ಹಾಗೂ ವಿಶ್ವವಿದ್ಯಾಲಯಗಳು ಶುಲ್ಕ ಏರಿಕೆ ಮಾಡಿ ಹೊರ ಮಾಡುತ್ತಿರುವುದು ಖಂಡನೀಯ.

ಹಾನಗಲ್ಲ: ಕರ್ನಾಟಕ ವಿಶ್ವವಿದ್ಯಾಲಯ ಪದವಿ ಅಂತಿಮ ವರ್ಷದಲ್ಲಿ ಓದುವ ವಿದ್ಯಾರ್ಥಿಗಳ ಪರೀಕ್ಷಾ ಶುಲ್ಕವನ್ನು ಯಥೇಚ್ಛವಾಗಿ ಏರಿಕೆ ಮಾಡಿದ್ದು, ಇದು ವಿದ್ಯಾರ್ಥಿಗಳ ಪಾಲಿಗೆ ಕಂಟಕಪ್ರಾಯವಾಗಿದೆ ಎಂದು ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ಪ್ರತಿಭಟನೆ ನಡೆಸಿ ತಾಲೂಕು ತಹಸೀಲ್ದಾರರ ಮೂಲಕ ವಿಶ್ವವಿದ್ಯಾಲಯ ಹಾಗೂ ಸರ್ಕಾರಕ್ಕೆ ಮನವಿ ಸಲ್ಲಿಸಿತು.ಬುಧವಾರ ಇಲ್ಲಿನ ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ಘಟಕ ಇಲ್ಲಿನ ತಹಸೀಲ್ದಾರ್ ಕಚೇರಿಗೆ ತೆರಳಿ ಮನವಿ ಅರ್ಪಿಸಿದ ಸಂದರ್ಭದಲ್ಲಿ ಕನಾಟಕ ವಿಶ್ವವಿದ್ಯಾಲಯ ಪದವಿ ಅಂತಿಮ ವರ್ಷದ ವಿದ್ಯಾರ್ಥಿಗಳ ಪರೀಕ್ಷಾ ಶುಲ್ಕವನ್ನು ₹590 ಏರಿಕೆ ಮಾಡಿದೆ. ಇದರ ಫಲವೆಂದರೆ ಹಾವೇರಿ ವಿಶ್ವವಿದ್ಯಾಲಯವೂ ಏರಿಸುವ ಭಯವಿದೆ. ವಿದ್ಯಾರ್ಥಿಗಳಿಗೆ ಕಡಿಮೆ ಶುಲ್ಕ ಅಥವಾ ಉಚಿತ ಶುಲ್ಕದೊಂದಿಗೆ ಶೈಕ್ಷಣಿಕ ಅನುಕೂಲ ಕಲ್ಪಿಸಬೇಕಾದ ಸರ್ಕಾರ ಹಾಗೂ ವಿಶ್ವವಿದ್ಯಾಲಯಗಳು ಶುಲ್ಕ ಏರಿಕೆ ಮಾಡಿ ಹೊರ ಮಾಡುತ್ತಿರುವುದು ಖಂಡನೀಯ. ಕೂಡಲೆ ಏರಿಕೆಯಾದ ಶುಲ್ಕ ರದ್ದುಗೊಳಿಸಬೇಕು ಎಂದು ಒತ್ತಾಯಿಸಿದರು.ಈ ಸಂದರ್ಭದಲ್ಲಿ ಮಾತನಾಡಿದ ವಿದ್ಯಾರ್ಥಿ ಪರಿಷತ್ ಮುಖಂಡ ಬಸವರಾಜ ಕಟ್ಟಿಮನಿ, ಐದು ಗ್ಯಾರಂಟಿ ನೀಡಿರುವ ಸರ್ಕಾರ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣದ ಗ್ಯಾರಂಟಿ ನೀಡಲಿ. ಆದರೆ ಒಂದೆಡೆ ಐದು ಗ್ಯಾರಂಟಿ ನೀಡಿ ಇನ್ನೊಂದೆಡೆ ವಿದ್ಯಾರ್ಥಿಗಳ ಶುಲ್ಕ ಹೆಚ್ಚಿಸುತ್ತಿರುವುದರ ಹಿಂದಿನ ಮರ್ಮ ತಿಳಿಯುತ್ತಿಲ್ಲ ಎಂದರು.ವಿದ್ಯಾರ್ಥಿ ಪರಿಷತ್ ಮುಖಂಡರಾದ ಪ್ರವೀಣ, ಬಸವರಾಜ ಮಟ್ಟಿಮನಿ, ಕಿರಣ ಗುಡ್ಡರ್ಣಣನವರ, ಮೈಲಾರಿ ಎಡ್ಡಳ್ಳಿ, ಕಿರಣ ಪೂಜಾರ, ಸಹನಾ ಎಸ್.ಕೆ., ಚೈತ್ರಾ ಕಂಕಾಳೆ, ಶೃತಿ ಅಪ್ಪಾಜಿ, ಕೀರ್ತಿ ದೇಸಾಯಿ, ಪ್ರಿಯಾ ಹೋತನಹಳ್ಳಿ, ಚಂದನ್ ಗೋಡಿ, ನಂದಿತಾ ಕಳಲಿ ಮೊದಲಾದವರು ಇದ್ದರು.ಮುತ್ತಿಗೆ: ಮನವಿ ಸಲ್ಲಿಸಲು ತಹಸೀಲ್ದಾರ್ ಕಚೇರಿ ಎದುರು ವಿದ್ಯಾರ್ಥಿಗಳು ತಹಸೀಲ್ದಾರರಿಗಾಗಿ ಕಾಯುತ್ತಿದ್ದರು. ಆದರೆ ಕಚೇರಿಯಲ್ಲಿಯೇ ಇದ್ದ ತಹಸೀಲ್ದಾರರು ಮನವಿ ಸ್ವೀಕರಿಸಲು ವಿಳಂಬ ಮಾಡಿರುವುದನ್ನು ಪ್ರತಿಭಟಿಸಿ, ತಹಸೀಲ್ದಾರ್ ಕಚೇರಿಯ ಮುಂಭಾಗದಲ್ಲಿದ್ದ ಪ್ರತಿಭಟನಾಕಾರರು ತಹಸೀಲ್ದಾರರ ಕೋಣೆಯತ್ತಲೇ ಘೋಷಣೆ ಕೂಗುತ್ತ ನುಗ್ಗಿದರು. ವಿದ್ಯಾರ್ಥಿಗಳು ಪ್ರತಿಭಟನೆಗೆ ಮುಂದಾದ ಸಂಗತಿ ತಿಳಿದು ತಹಸೀಲ್ದಾರ್ ಕೊಠಡಿಯಿಂದ ಹೊರಬಂದು ಮನವಿ ಸ್ವೀಕರಿಸಿದರು. ಸರ್ಕಾರಿ ಶಾಲೆಗಳ ದಾಖಲಾತಿ ಹೆಚ್ಚಿಸಲು ಶ್ರಮಿಸಿ

ಹಿರೇಕೆರೂರು: ಶೈಕ್ಷಣಿಕ ವರ್ಷದಲ್ಲಿ ಶಾಲಾ ಪ್ರಾರಂಭೋತ್ಸವದ ಅತ್ಯಂತ ಮಹತ್ವದ ಘಟ್ಟವಾಗಿದ್ದು, ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ಕರೆತರಲು ಶಿಕ್ಷಕರು ಶ್ರಮ ವಹಿಸಬೇಕು ಎಂದು ಶಾಸಕ ಯು.ಬಿ. ಬಣಕಾರ ತಿಳಿಸಿದರು.

ಪಟ್ಟಣದ ಗುರುಭವನದಲ್ಲಿ ಮಂಗಳವಾರ ನಡೆದ 2025- 26ನೇ ಸಾಲಿನ ಶೈಕ್ಷಣಿಕ ವರ್ಷದ ಶಾಲಾ ಪ್ರಾರಂಭೋತ್ಸವದ ಸಿದ್ಧತಾ ಸಭೆಯನ್ನು ಉದ್ಘಾಟಿಸಿ ಮಾತನಾಡಿ, ಖಾಸಗಿ ಶಾಲೆಗಳನ್ನು ಮೀರುವಂತೆ ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಹಾಜರಾತಿ ಹೆಚ್ಚಬೇಕು. ಅದೇ ರೀತಿ ಶೈಕ್ಷಣಿಕ ಕ್ಷೇತ್ರಕ್ಕೆ ಸರ್ಕಾರ ಸಾಕಷ್ಟು ಸೌಲಭ್ಯಗಳನ್ನು ಒದಗಿಸಿದೆ. ಅವುಗಳನ್ನು ಸದುಪಯೋಗ ಪಡಿಸಿಕೊಳ್ಳುವ ಕಾರ್ಯವಾಗಬೇಕು. ಆ ಮೂಲಕ ಸರ್ಕಾರಿ ಶಾಲೆಗಳು ಅಭಿವೃದ್ಧಿ ಹೊಂದಬೇಕು ಎಂದರು.ಕ್ಷೇತ್ರ ಶಿಕ್ಷಣಾಧಿಕಾರಿ ಎನ್. ಶ್ರೀಧರ, ಕ್ಷೇತ್ರ ಸಮನ್ವಯಾಧಿಕಾರಿ ಎನ್. ಸುರೇಶಕುಮಾರ, ಅಕ್ಷರ ದಾಸೋಹ ಸಮನ್ವಯ ಅಧಿಕಾರಿ ಎಚ್.ಎಫ್. ಜಾಡರ, ಕೆ.ಎಸ್. ಪುಟ್ಟಪ್ಪಗೌಡ್ರ, ಸರಸ್ವತಿ ಅಜ್ಜಪ್ಪನವರ, ಎನ್. ಸುಧಾ, ಬಿ.ಎಸ್. ಹುಲ್ಲತ್ತಿ, ಎಸ್.ಡಿ. ಕರಿಯಣ್ಣನವರ್, ರಮೇಶ ಪೂಜಾರ್ ಇತರರು ಇದ್ದರು.