ಕನ್ನಡಪ್ರಭ ವಾರ್ತೆ ಟೇಕಲ್
ಅವರು ಕೆ.ಜಿ.ಹಳ್ಳಿ ಪಂಚಾಯ್ತಿ ವ್ಯಾಪ್ತಿಯಲ್ಲಿನ ಹಳೇಪಾಳ್ಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಏರ್ಪಡಿಸಿದ್ದ ಮಕ್ಕಳ ಗ್ರಾಮಸಭೆಯನ್ನು ಜ್ಯೋತಿ ಬೆಳಗಿಸುವ ಮೂಲಕ ಚಾಲನೆ ನೀಡಿ ಮಾತನಾಡಿದರು.ಮಕ್ಕಳ ಹಕ್ಕುಗಳ ರಕ್ಷಣೆ
ಸಭೆಯಲ್ಲಿ ಮಕ್ಕಳ ಹಕ್ಕುಗಳ ರಕ್ಷಣೆ, ಶೈಕ್ಷಣಿಕ, ಬೆಳವಣಿಗೆ, ಭಾಗವಹಿಸುವಿಕೆಯು ಪ್ರಮುಖ ಅಂಶಗಳಾಗಿದ್ದು ಇವುಗಳ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಸರಿಯಾದ ರೀತಿಯಲ್ಲಿ ಅನುಷ್ಠಾನವಾಗಬೇಕು. ಆಗ ಮಾತ್ರ ಮಕ್ಕಳ ಗ್ರಾಮಸಭೆಗಳು ಯಶಸ್ವಿಯಾಗುತ್ತದೆ ಎಂದರು.ವಿದ್ಯಾರ್ಥಿಗಳ ಬೇಡಿಕೆ
ಈ ಸಂದರ್ಭದಲ್ಲಿ ಕೆ.ಜಿ.ಹಳ್ಳಿ ಶಾಲೆ ಮಕ್ಕಳ ಸಭೆಯಲ್ಲಿ ಹೆಣ್ಣು ಮಕ್ಕಳ ಶೌಚಾಲಯ ಬೇಕು, ಕ್ರೀಡಾಂಗಣ, ಕುಡಿಯುವ ನೀರು ಹಾಗೂ ಗ್ರಂಥಾಲಯಕ್ಕೆ ಪ್ರತ್ಯೇಕ ರೂಮ್ ಮತ್ತು ರ್ಯಾಕ್ಸ್ ಬೇಕೆಂದರು. ಶೌಚಾಲಯ ಹಾಗೂ ಪುಸ್ತಕಗಳನ್ನು ಇಡಲು ರ್ಯಾಕ್ಸ್ ಬೇಕೆಂದರು. ಹಳೇಪಾಳ್ಯದ ಮಕ್ಕಳು ಆಟದ ಮೈದಾನ ಸ್ವಚ್ಛತೆಗೆ ಒತ್ತಾಯಿಸಿದರು. ಶಾಲೆ ಕೆಲವು ಕೊಠಡಿಗಳು ಸೋರುತ್ತಿದೆ ಸರಿಪಡಿಸಿ ಎಂದರು. ಊರುಗುರ್ಕಿ ಶಾಲೆಯವರು ಆಟದ ಮೈದಾನ ಬೇಕೆಂದರು.ಈ ಸಮಸ್ಯೆಗಳನ್ನು ಆಲಿಸಿದ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ವೆಂಕಟೇಶ್ ಮಾತನಾಡಿ, ಮಕ್ಕಳ ಗ್ರಾಮಸಭೆಯಲ್ಲಿ ಶಾಲೆಗಳ ತಿಳಿಸಿದ ಸಮಸ್ಯೆಗಳನ್ನು ಪರಿಹರಿಸಲು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಶಿಕ್ಷಣ ಇಲಾಖೆ ಇಸಿಒ ಜಗದಾಂಬ, ಸಿಆರ್ಪಿ ಸುಬ್ರಮಣಿ, ಗ್ರಾಮೀಣ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷರಾದ ವೆಂಕಟೇಶಗೌಡ, ಗ್ರಾ.ಪಂ.ಸದಸ್ಯ ವೆಂಕಟರಾಮಯ್ಯ, ಮುಖ್ಯೋಪಾಧ್ಯಾಯ ಆನಂದ್ಕುಮಾರ್, ಕಾರ್ಯದರ್ಶಿ ಸವಿತಾ ಮತ್ತಿತರರು ಹಾಜರಿದ್ದರು.