ಮಳವಳ್ಳಿ: ಗ್ರಾಹಕರು ತಿಳಿಸಿದ ಎಲ್ಲಾ ವಿದ್ಯುತ್ ಸಮಸ್ಯೆಗಳನ್ನು ಬಗೆಹರಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಸೆಸ್ಕ್ ಎಇಇ ಪ್ರೇಮ್ಕುಮಾರ್ ತಿಳಿಸಿದರು.
ಈ ವೇಳೆ ಸೌಭಾಗ್ಯವತಿ ವೆಂಕಟೇಶ್, ಜಯಶಂಕರೇಗೌಡರು ವಿದ್ಯುತ್ ಕಂಬ ಹಾಗೂ ಮಾರ್ಗವನ್ನು ಸ್ಥಳಾಂತರ ಮಾಡಬೇಕೆಂದು ಮನವಿ ಮಾಡಿಕೊಂಡರು.
ನಜೀಮ್ ಮಾತನಾಡಿ, ಮೀಟರ್ ರೈಡರ್ ಮನಬಂದಂತೆ ಮಾತನಾಡುತ್ತಾರೆ. ಅವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದರು. ಬೆಳಕವಾಡಿಯಲ್ಲಿರುವ ಶಾಖಾಧಿಕಾರಿ ಕಚೇರಿಯಲ್ಲಿ ಸುಮಾರು ಒಂದೂವರೆ ಎಕರೆ ಸ್ಥಳವಿದೆ. ತಾಲೂಕು ಕೇಂದ್ರದಲ್ಲಿರುವ ಹೋಬಳಿ ಮಟ್ಟದ ಉಪಶಾಖೆಗಳನ್ನು ಅಲ್ಲಿಯೇ ಪ್ರಾರಂಭಿಸಬೇಕು ಎಂದು ಉಮೇಶ್ ತಿಳಿಸಿದರು.ಸಭೆಯಲ್ಲಿ ಎಇ ಶಿವಕುಮಾರ್, ರಾಜೇಶ್ವರಿ, ಹಿರಿಯ ಸಹಾಯಕ ದಾಸೇಗೌಡ, ಶಿವಚಂದ್ರಮೂರ್ತಿ, ಸಹಾಯಕ ಇಂಜಿನಿಯರ್ಗಳಾದ ನಾಗೇಂದ್ರ, ಎಂ.ಪಿ ಪ್ರಕಾಶ್, ಶಾಖಾಧಿಕಾರಿಗಳಾದ ದಿವಾಕರ್, ವಿಜೇಂದ್ರ ಕಾಂತರಾಜು, ಗುರುಸೂರ್ಯಕುಮಾರ್, ಶಿವಲಿಂಗು ಸೇರಿ ಇತರರು ಇದ್ದರು.