ಕ್ರೀಡಾ ಸಾಧನೆಗೆ ಗದಗ ಜಿಲ್ಲೆಯಲ್ಲಿ‌ ಪೂರಕ ಸೌಕರ್ಯ ಲಭ್ಯ: ಎಚ್.ಕೆ. ಪಾಟೀಲ

KannadaprabhaNewsNetwork |  
Published : Aug 08, 2024, 01:35 AM IST
ಜಿಲ್ಲಾ ಉಸ್ತುವಾರಿ ಸಚಿವ.ಎಚ್.ಕೆ. ಪಾಟೀಲ ಅವರಿಂದ ಕ್ರೀಡಾಕೂಟಕ್ಕೆ ಚಾಲನೆಕ್ರೀಡಾ ಸಾಧನೆಗೆ ಜಿಲ್ಲೆಯಲ್ಲಿ‌ ಪೂರಕ ಸೌಕರ್ಯ ಲಭ್ಯ. ಎಚ್.ಕೆ.ಪಾಟೀಲಕನ್ನಡಪ್ರಭ ವಾರ್ತೆ ಗದಗ: ಗದಗ ಜಿಲ್ಲೆಯಲ್ಲಿ ಕ್ರೀಡಾಬ್ಯಾಸ ಮಾಡಲು ಎಲ್ಲ ರೀತಿಯ ಸೌಲಭ್ಯಗಳನ್ನು ಸರ್ಕಾರ ಒದಗಿಸಿದೆ. ಅವುಗಳನ್ನು ಸದ್ಬಳಕೆ ಮಾಡಿಕೊಂಡು ಕ್ರೀಡಾ ಸಾಧನೆ‌ ಮಾಡಬೇಕು ಎಂದು ಕಾನೂನು, ಪ್ರವಾಸೋದ್ಯಮ ಇಲಾಖೆ ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವ  ಎಚ್.ಕೆ. ಪಾಟೀಲ ಹೇಳಿದರು.  ಅವರು ಬುಧವಾರ ಗದಗ ನಗರದ ಕೆ.ಎಚ್. ಪಾಟೀಲ ಜಿಲ್ಲಾ ಕ್ರೀಡಾಂಗಣದಲ್ಲಿ ಗದಗ ತಾಲೂಕ ಮಟ್ಟದ 'ಬಿ' ಗ್ರೂಪ್ ಪದವಿಪೂರ್ವ ಕಾಲೇಜುಗಳ ಅಥ್ಲೆಟಿಕ್ ಕ್ರೀಡಾಕೂಟಕ್ಕೆ ಚಾಲನೆ‌ ನೀಡಿ ಮಾತನಾಡಿದರು.ಮಕ್ಕಳು ಕ್ರೀಡಾ ಚಟುವಟಿಕೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಕ್ರೀಡಾ ಸ್ಪರ್ಧೆಯಿಂದ ಸಾಧನೆಯ‌ ಶಿಖರ ತಲುಪಬೇಕು.ಜಿಲ್ಲೆಯಲ್ಲಿ ಕ್ರೀಡಾ ಅಭ್ಯಾಸಕ್ಕಾಗಿ ಹಾಕಿ ಕ್ರೀಡಾಂಗಣ, ಈಜು ಕೋಳ, ಸುಸಜ್ಜಿತ ಕ್ರೀಡಾಂಗಣ ದಂತಹ ಸೌಕರ್ಯ ಒದಗಿಸಿದೆ. ಜೊತೆಗೆ ಮಕ್ಕಳಿಗೆ ಉತ್ತಮ ತರಬೇತುದಾರರನ್ನು ನೀಡಿ, ಸರ್ಕಾರ ಪ್ರೋತ್ಸಾಹಿಸುತ್ತಿದೆ. ಇವುಗಳನ್ನು ಮಕ್ಕಳು ಉಪಯೋಗಿಸಿಕೊಂಡು ಸಾಧನೆ‌ ಮಾಡಲು ಮುಂದೆ ಬರಬೇಕು.ಜಿಲ್ಲೆಯಲ್ಲಿರುವ ಈಜುಕೊಳಗಳು ಕಳೆದ ಬೇಸಿಗೆಯಲ್ಲಿ ಮಕ್ಕಳು ಸೇರಿದಂತೆ ಎಲ್ಲರು ಬೇಸಿಗೆ ಜಳವನ್ನು ತಣಿಸಿವೆ. ಇವುಗಳಿಂದ 70 ಸಾವಿರ ಮೊತ್ತವು ಬಂದಿದೆ ಎಂದ‌ ಅವರು ಮೂಲಭೂತ ಸೌಕರ್ಯಗಳನ್ನು ನಾವು ನೀಡಲು ಬದ್ಧ, ಅವುಗಳ‌‌ ಸರಿಯಾದ ಸದ್ಭಳಕೆ ನಿಮ್ಮದಾಗಲಿ ಎಂದರು.ವಿಧಾನ ಪರಿಷತ್ ಶಾಸಕ ಎಸ್. ವಿ. ಸಂಕನೂರ ಅತಿಥಿಯಾಗಿ ಪಾಲ್ಗೊಂಡು ಕ್ರೀಡಾ ದ್ವಜಾರೋಹಣ ನೆರವೇರಿಸಿ ಮಾತನಾಡಿ, ಪದವಿ ಪೂರ್ವ ವಿಧ್ಯಾರ್ಥಿಗಳಿಗೆ ಓದಿನಲ್ಲಿ ಇರುವ ಆಸಕ್ತಿ ಕ್ರೀಡೆಯಲ್ಲಿ ಕಾಣುತ್ತಿಲ್ಲ. ಪಠ್ಯದಷ್ಟೆ ಪಠ್ಯೇತರ ಚಟುವಟಿಕೆಗಳಿಗೆ ಆಸಕ್ತಿ ನೀಡುವ ಮೂಲಕ ದೈಹಿಕ‌ ಮಾನಸಿಕ ನೆಮ್ಮದಿ ನಿಮ್ಮದಾಗಿಸಿಕೊಳ್ಳಿ.ವಿದ್ಯಾರ್ಥಿಗಳು ದೈಹಿಕ ಮಾನಸಿಕ ಆರೋಗ್ಯದ ಕಡೆಗೆ ಗಮನ ಹರಿಸಿ, ಕ್ರೀಡಾ ಕ್ಷೇತ್ರದಲ್ಲಿ ಸಾಧನೆ‌ ಮಾಡಬೇಕು. ಕ್ರೀಡಾ ಪಟುಗಳ ಪ್ರೋತ್ಸಾಹಿಸುವ ಸದುದ್ದೇಶದಿಂದ ಕೇಂದ್ರ ಸರ್ಕಾರ ಪ್ರಧಾನ ಮಂತ್ರಿ ಖೇಲೊ ಇಂಡಿಯಾ ಕಾರ್ಯಕ್ರಮ ಜಾರಿಗೊಳಿಸಿದೆ. ಇದರಿಂದ ಗ್ರಾಮೀಣ ಪ್ರತಿಭೆಗಳನ್ನು ಗುರುತಿಸಿ ಅವರಿಗೆ ಸರಿಯಾದ ತರಬೇತಿ ನೀಡಿ, ಕ್ರೀಡಾ ಸಾಧನೆಗೆ ಕಾರಣವಾಗಿದೆ ಎಂದು ಹೇಳಿದರು.ಇದೇ ಸಂದರ್ಭದಲ್ಲಿ ವಿಧ್ಯಾರ್ಥಿಗಳಿಗೆ ಕ್ರೀಡಾ ಕೂಟದ ಪ್ರತಿಜ್ಞಾವಿಧಿ ಭೋದಿಸಲಾಯಿತು. ಗದಗ ಬೆಟಗೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕಬರಸಾಬ್ ಬಬರ್ಜಿ, ವಿವಿಧ ಇಲಾಖೆಗಳ ಅಧಿಕಾರಿಗಳು, ಶಿಕ್ಷಕರು ಸೇರಿದಂತೆ ಗದಗ ತಾಲೂಕ ಮಟ್ಟದ 'ಬಿ' ಗ್ರೂಪ್ ಪದವಿಪೂರ್ವ ಕಾಲೇಜುಗಳ ವಿಧ್ಯಾರ್ಥಿಗಳು ಹಾಜರಿದ್ದರು.ಕೋಟ್ಒಲಂಪಿಕ್ಸ್ ನಲ್ಲಿ ಈಗಾಗಲೇ ದೇಶದ ಕ್ರೀಡಾ ಪಟುಗಳು ಉತ್ಯಮ ಪ್ರದರ್ಶನ‌ ತೋರಿ ಸಾಧನೆಗೈಯುತ್ತಿದ್ದಾರೆ. ಮನು ಬಾಕರ್, ಸರ್ವೋಜಿತ್ ಸಿಂಗ್, ಸ್ವನಿತ್ ಕುಸಲೆ ಅವರುಗಳು ಶೂಟಿಂಗ್ ನಲ್ಲಿ ಪ್ರಾಂಜ್ ಮೆಡಲ್ ಪಡೆದಿದ್ದಾರೆ. ನೀರಜ್ ಚೋಪ್ರಾ ಅವರು ಪೈನಲ್ ತಲುಪಿದ್ದು ಅವರು ವಿಜಯಶಾಲಿಯಾಗಲಿ ಹಾಕಿಯಲ್ಲಿ, ಕುಸ್ತಿಯಲ್ಲಿ ಹೀಗೆ ಎಲ್ಲಾ ವಿಭಾಗದಲ್ಲಿಯೂ ಜಯಶಾಲಿಯಾಗಲಿ..ಎಚ್.ಕೆ.ಪಾಟೀಲ. ಜಿಲ್ಲಾ ಉಸ್ತುವಾರಿ ಸಚಿವ.ಕ್ರೀಡಾಕೂಟಕ್ಕೆ ಜಿಲ್ಲಾ ಉಸ್ತುವಾರಿ ಎಚ್.ಕೆ.ಪಾಟೀಲ ಚಾಲನೆ ನೀಡಿದರು. | Kannada Prabha

ಸಾರಾಂಶ

ಗದಗ ಜಿಲ್ಲೆಯಲ್ಲಿ ಕ್ರೀಡಾ ಅಭ್ಯಾಸಕ್ಕಾಗಿ ಹಾಕಿ ಕ್ರೀಡಾಂಗಣ, ಈಜು ಕೋಳ, ಸುಸಜ್ಜಿತ ಕ್ರೀಡಾಂಗಣದಂತಹ ಸೌಕರ್ಯ ಒದಗಿಸಿದೆ. ಜತೆಗೆ ಮಕ್ಕಳಿಗೆ ಉತ್ತಮ ತರಬೇತುದಾರರನ್ನು ನೀಡಿ, ಸರ್ಕಾರ ಪ್ರೋತ್ಸಾಹಿಸುತ್ತಿದೆ ಎಂದು ಸಚಿವ ಎಚ್‌.ಕೆ. ಪಾಟೀಲ್‌ ಹೇಳಿದರು.

ಗದಗ: ಗದಗ ಜಿಲ್ಲೆಯಲ್ಲಿ ಕ್ರೀಡಾಭ್ಯಾಸ ಮಾಡಲು ಎಲ್ಲ ರೀತಿಯ ಸೌಲಭ್ಯಗಳನ್ನು ಸರ್ಕಾರ ಒದಗಿಸಿದೆ. ಅವುಗಳನ್ನು ಸದ್ಬಳಕೆ ಮಾಡಿಕೊಂಡು ಕ್ರೀಡಾ ಸಾಧನೆ‌ ಮಾಡಬೇಕು ಎಂದು ಕಾನೂನು, ಪ್ರವಾಸೋದ್ಯಮ ಇಲಾಖೆ ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಹೇಳಿದರು.

ಅವರು ಬುಧವಾರ ಗದಗ ನಗರದ ಕೆ.ಎಚ್. ಪಾಟೀಲ ಜಿಲ್ಲಾ ಕ್ರೀಡಾಂಗಣದಲ್ಲಿ ಗದಗ ತಾಲೂಕು ಮಟ್ಟದ ''ಬಿ'' ಗ್ರೂಪ್ ಪದವಿಪೂರ್ವ ಕಾಲೇಜುಗಳ ಅಥ್ಲೆಟಿಕ್ ಕ್ರೀಡಾಕೂಟಕ್ಕೆ ಚಾಲನೆ‌ ನೀಡಿ ಮಾತನಾಡಿದರು. ಮಕ್ಕಳು ಕ್ರೀಡಾ ಚಟುವಟಿಕೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಕ್ರೀಡಾ ಸ್ಪರ್ಧೆಯಿಂದ ಸಾಧನೆಯ‌ ಶಿಖರ ತಲುಪಬೇಕು ಎಂದು ಹೇಳಿದರು.

ಜಿಲ್ಲೆಯಲ್ಲಿ ಕ್ರೀಡಾ ಅಭ್ಯಾಸಕ್ಕಾಗಿ ಹಾಕಿ ಕ್ರೀಡಾಂಗಣ, ಈಜು ಕೋಳ, ಸುಸಜ್ಜಿತ ಕ್ರೀಡಾಂಗಣದಂತಹ ಸೌಕರ್ಯ ಒದಗಿಸಿದೆ. ಜತೆಗೆ ಮಕ್ಕಳಿಗೆ ಉತ್ತಮ ತರಬೇತುದಾರರನ್ನು ನೀಡಿ, ಸರ್ಕಾರ ಪ್ರೋತ್ಸಾಹಿಸುತ್ತಿದೆ. ಇವುಗಳನ್ನು ಮಕ್ಕಳು ಉಪಯೋಗಿಸಿಕೊಂಡು ಸಾಧನೆ‌ ಮಾಡಲು ಮುಂದೆ ಬರಬೇಕು.

ಜಿಲ್ಲೆಯಲ್ಲಿರುವ ಈಜುಕೊಳಗಳು ಕಳೆದ ಬೇಸಿಗೆಯಲ್ಲಿ ಮಕ್ಕಳು ಸೇರಿದಂತೆ ಎಲ್ಲರೂ ಬೇಸಿಗೆ ಝಳವನ್ನು ತಣಿಸಿವೆ. ಇವುಗಳಿಂದ ₹70 ಸಾವಿರ ಮೊತ್ತವೂ ಬಂದಿದೆ ಎಂದ‌ ಅವರು, ಮೂಲಭೂತ ಸೌಕರ್ಯಗಳನ್ನು ನಾವು ನೀಡಲು ಬದ್ಧ, ಅವುಗಳ‌‌ ಸರಿಯಾದ ಸದ್ಭಳಕೆ ನಿಮ್ಮದಾಗಲಿ ಎಂದರು.

ವಿಧಾನ ಪರಿಷತ್ ಶಾಸಕ ಎಸ್. ವಿ. ಸಂಕನೂರ ಅತಿಥಿಯಾಗಿ ಪಾಲ್ಗೊಂಡು ಕ್ರೀಡಾ ಧ್ವಜಾರೋಹಣ ನೆರವೇರಿಸಿ ಮಾತನಾಡಿ, ಪದವಿ ಪೂರ್ವ ವಿದ್ಯಾರ್ಥಿಗಳಿಗೆ ಓದಿನಲ್ಲಿ ಇರುವ ಆಸಕ್ತಿ ಕ್ರೀಡೆಯಲ್ಲಿ ಕಾಣುತ್ತಿಲ್ಲ. ಪಠ್ಯದಷ್ಟೆ ಪಠ್ಯೇತರ ಚಟುವಟಿಕೆಗೆ ಆಸಕ್ತಿ ನೀಡುವ ಮೂಲಕ ದೈಹಿಕ‌ ಮಾನಸಿಕ ನೆಮ್ಮದಿ ನಿಮ್ಮದಾಗಿಸಿಕೊಳ್ಳಿ.

ವಿದ್ಯಾರ್ಥಿಗಳು ದೈಹಿಕ-ಮಾನಸಿಕ ಆರೋಗ್ಯದ ಕಡೆಗೆ ಗಮನ ಹರಿಸಿ, ಕ್ರೀಡಾಕ್ಷೇತ್ರದಲ್ಲಿ ಸಾಧನೆ‌ ಮಾಡಬೇಕು. ಕ್ರೀಡಾಪಟುಗಳ ಪ್ರೋತ್ಸಾಹಿಸುವ ಸದುದ್ದೇಶದಿಂದ ಕೇಂದ್ರ ಸರ್ಕಾರ ಪ್ರಧಾನ ಮಂತ್ರಿ ಖೇಲೊ ಇಂಡಿಯಾ ಕಾರ್ಯಕ್ರಮ ಜಾರಿಗೊಳಿಸಿದೆ. ಇದರಿಂದ ಗ್ರಾಮೀಣ ಪ್ರತಿಭೆಗಳನ್ನು ಗುರುತಿಸಿ ಅವರಿಗೆ ಸರಿಯಾದ ತರಬೇತಿ ನೀಡಿ, ಕ್ರೀಡಾ ಸಾಧನೆಗೆ ಕಾರಣವಾಗಿದೆ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಕ್ರೀಡಾಕೂಟದ ಪ್ರತಿಜ್ಞಾವಿಧಿ ಬೋಧಿಸಲಾಯಿತು. ಗದಗ ಬೆಟಗೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕಬರಸಾಬ್ ಬಬರ್ಜಿ, ವಿವಿಧ ಇಲಾಖೆಗಳ ಅಧಿಕಾರಿಗಳು, ಶಿಕ್ಷಕರು ಸೇರಿದಂತೆ ಗದಗ ತಾಲೂಕ ಮಟ್ಟದ ''ಬಿ'' ಗ್ರೂಪ್ ಪದವಿಪೂರ್ವ ಕಾಲೇಜುಗಳ ವಿದ್ಯಾರ್ಥಿಗಳು ಹಾಜರಿದ್ದರು.

PREV

Recommended Stories

''ಪ್ರಜ್ವಲ್‌ ಬಚಾವ್‌ಗೆ ಆತನ ಪೋಷಕರು ತಂತ್ರ ಮಾಡಿದ್ರು ''
ಸಾರಿಗೆ ಮುಷ್ಕರಿಂದ ನಾಲ್ಕು ನಿಗಮಗಳಿಗೆ 12 ಕೋಟಿ ನಷ್ಟ