ಕನ್ನಡಪ್ರಭ ವಾರ್ತೆ ಕೆ.ಎಂ.ದೊಡ್ಡಿ
ಮಾಜಿ ಸಚಿವ ಡಿ.ಸಿ.ತಮ್ಮಣ್ಣ ನಿವಾಸದ ಆವರಣದಲ್ಲಿ ಮದ್ದೂರು ವಿಧಾನಸಭಾ ಕ್ಷೇತ್ರದಲ್ಲಿ ಹಮ್ಮಿಕೊಂಡಿದ್ದ ಜನರೊಂದಿಗೆ ಜನತಾದಳ- ಜೆಡಿಎಸ್ ಪಕ್ಷದ ಸದಸ್ಯತ್ವ ನೋಂದಣಿ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು.
ಕುಮಾರಣ್ಣ ಕೇಂದ್ರ ಸಚಿವರಾಗಿ ದೆಹಲಿಯಲ್ಲಿ ರೈತರಿಗೆ ಏನು ಮಾಡ್ಬೇಕೊ ಅದನ್ನು ಮಾಡ್ತಿದ್ದಾರೆ. ಕುಮಾರಣ್ಣನ ಬಗ್ಗೆ ಟೀಕೆ ಮಾಡಿದ್ರೆ ಯಾರ ಹೊಟ್ಟೇನು ತುಂಬುವುದಿಲ್ಲ. ನೀವು ಏನು ಮಾಡಿದಿರಾ ಹೇಳಿ ಎಂದು ಪರೋಕ್ಷವಾಗಿ ತರಾಟೆಗೆ ತೆಗೆದುಕೊಂಡರು.ನೀವು ರಾಜಕಾರಣದಲ್ಲಿ ಈ ಮಟ್ಟಕ್ಕೆ ಬೆಳೆದು ನಿಂತಿದೀರಾ ಎಂದರೆ ಯಾರ ಆಶಯದಿಂದ?. ನಿಮ್ಮ ಬಗ್ಗೆ ನನಗೆ ಗೌರವವಿದೆ. ಕುಮಾರಣ್ಣನ ಬಗ್ಗೆ ಹಗುರವಾಗಿ ಮಾತನಾಡುವುದನ್ನು ನಿಲ್ಲಿಸಿ. ನಿಮ್ಮ ರಾಜಕೀಯ ಬೆಳವಣಿಗೆಗೆ ಯಾರು ಕಾರಣ ಎಂಬುವುದನ್ನು ನಿಮಗೆ ನೀವೇ ಪ್ರಶ್ನೆ ಮಾಡಿಕೊಳ್ಳಿ ಎಂದು ತೀಕ್ಷ್ಣವಾಗಿ ಉತ್ತರಿಸಿದರು.
ಕುಮಾರಣ್ಣ ಮತ್ತೆ ರಾಜ್ಯದ ಮುಖ್ಯಮಂತ್ರಿ ಆಗಬೇಕು. ಮೂರನೇ ಬಾರಿಗೆ 5 ವರ್ಷ ಪೂರ್ಣಾವಧಿ ಅಧಿಕಾರ ಹಿಡಿಯಬೇಕು. ಈ ಹಿಂದೆ ಕೊಟ್ಟ 20 ತಿಂಗಳ ಆಡಳಿತ ಎಲ್ಲರ ಮನಮುಟ್ಟಿದೆ. ರಾಜ್ಯದ ಎಲ್ಲಾ ವರ್ಗದ ಜನರು ಹೆಚ್ಡಿಕೆ ಮತ್ತೆ ಸಿಎಂ ಆಗಬೇಕು ಅನ್ನೋ ಆಶಯ ವ್ಯಕ್ತಪಡಿಸಿದ್ದಾರೆ ಎಂದರು.
ಚುನಾವಣೆ ಸೋಲು ನನ್ನ ಜೀವನಕ್ಕೆ ಪಾಠ ಕಲಿಸಿದೆ. ಮೂರು ಚುನಾವಣೆ ಸೋಲು ನನ್ನ ದೃತಿಗೆಡಿಸಿಲ್ಲ. ನಾನು ಮತ್ತಷ್ಟು ಗಟ್ಟಿಯಾಗಲು ಅವಕಾಶ ಸಿಕ್ಕಿದೆ. ಚುನಾವಣೆಯಲ್ಲಿ ನಾನು ಗೆಲ್ಲದೆ ಇದ್ದರೂ ಜನರ ಋಣ ನಮ್ಮ ಮೇಲಿದೆ. ಕುಮಾರಣ್ಣ ದೆಹಲಿಯಲ್ಲಿದ್ದರೂ ಮಂಡ್ಯ ಜನರಿಗಾಗಿ ಅವರ ಹೃದಯ ಸದಾ ಮಿಡಿಯುತ್ತಿದೆ ಎಂದರು.
ಪಕ್ಷವನ್ನು ಕ್ಷೇತ್ರದಲ್ಲಿ ಬಲಿಷ್ಠವಾಗಿ ಸಂಘಟಿಸುವ ನಿಟ್ಟಿನಲ್ಲಿ ಬೂತ್ ಮಟ್ಟದಲ್ಲಿ ಸದಸ್ಯತ್ವ ನೋಂದಣಿ ಮಾಡಿಸಲು ಕಾರ್ಯಕರ್ತರು ಹಾಗೂ ಮುಖಂಡರಿಗೆ ಮನವಿ ಮಾಡಿದರು. ಅತೀ ಹೆಚ್ಚು ಮದ್ದೂರು ಕ್ಷೇತ್ರದಲ್ಲಿ ಸದಸ್ಯತ್ವ ನೋಂದಣಿ ಆಗಬೇಕು ಎಂದು ಕರೆ ನೀಡಿದರು.
ದೊಡ್ಡರಸಿನಕೆರೆ ಗೇಟ್ನಲ್ಲಿ ಜೆಡಿಎಸ್ ಯುವ ಮುಖಂಡ ಗುರುದೇವರಹಳ್ಳಿ ಅರವಿಂದ್ ಬೃಹತ್ ಹೂವಿನ ಹಾರ ಹಾಕುವ ಮೂಲಕ ಸ್ವಾಗತ ಕೋರಿದರು. ಈ ವೇಳೆ ವಿಧಾನ ಪರಿಷತ್ ಸದಸ್ಯ ವಿವೇಕಾನಂದ, ಮಾಜಿ ಶಾಸಕರಾದ ಸುರೇಶ್ ಗೌಡ, ಡಾ.ಕೆ.ಅನ್ನದಾನಿ, ಜಿಲ್ಲಾಧ್ಯಕ್ಷ ಡಿ.ರಮೇಶ್, ತಾಲೂಕು ಅಧ್ಯಕ್ಷ ಹಾಗಲಹಳ್ಳಿ ಚಿಕ್ಕತಿಮ್ಮೇಗೌಡ, ಜಿಪಂ ಮಾಜಿ ಸದಸ್ಯ ಕಂಸಾಗರ ರವಿ, ಮುಖಂಡರಾದ ಸಂತೋಷ್ ತಮ್ಮಣ್ಣ, ಚಾಮನಹಳ್ಳಿ ಸ್ವಾಮಿ, ಪ್ರಿಯಾಂಕಾ, ಎ.ಬಿ.ಹಳ್ಳಿ ಚಂದ್ರಣ್ಣ, ಮಾದನಾಕನಹಳ್ಳಿ ರಾಜಣ್ಣ, ಕರಡಕೆರೆ ಹನುಮಂತೇಗೌಡ, ಕೆ.ಟಿ.ಸುರೇಶ್, ಅಣ್ಣೂರು ಯೋಗೇಂದ್ರ, ವಿನು ಸೇರಿದಂತೆ ಹಲವರು ಭಾಗವಹಿಸಿದ್ದರು.