ಸತತ ಪ್ರಯತ್ನ, ಆತ್ಮವಿಶ್ವಾಸದಿಂದ ಗುರಿ ಸಾಧಿಸಬೇಕು: ಡಾ.ವೆಂಕಟೇಶ್ ಬಾಬು

KannadaprabhaNewsNetwork |  
Published : Aug 12, 2024, 01:00 AM IST
ಕ್ಯಾಪ್ಷನಃ10ಕೆಡಿವಿಜಿ31ಃದಾವಣಗೆರೆಯ ಎಂಈಎಸ್ ಪಿಯು ಕಾಲೇಜು ಮತ್ತು ಶಾಹಿದ್ ಫಾಲ್ಕಾನ್ ಪಿಯು ಕಾಲೇಜಿನಲ್ಲಿ ನಡೆದ ಆರಂಭ-2024 ಫ್ರೆಷರ್ಸ್ ಡೇ ಕಾರ್ಯಕ್ರಮವನ್ನು ಡಾ.ವೆಂಕಟೇಶ್ ಬಾಬು ಉದ್ಘಾಟಿಸಿದರು. | Kannada Prabha

ಸಾರಾಂಶ

ಸತತ ಪ್ರಯತ್ನ, ಆತ್ಮವಿಶ್ವಾಸದಿಂದ ಗುರಿಯನ್ನು ಸಾಧಿಸಬೇಕು. ದೃಢ ಮನಸ್ಸಿನ ಪ್ರಯತ್ನದಿಂದ ಮಾತ್ರವೇ ಸಾಧನೆ ಸಾಧ್ಯ ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಡಾ. ಎಸ್.ವೆಂಕಟೇಶ್ ಬಾಬು ದಾವಣಗೆರೆಯಲ್ಲಿ ಹೇಳಿದ್ದಾರೆ.

- ''''''''ಆರಂಭ-2024 ಫ್ರೆಷರ್ಸ್ ಡೇ'''''''' ಸ್ವಾಗತ ಕಾರ್ಯಕ್ರಮ - - - ಕನ್ನಡಪ್ರಭ ವಾರ್ತೆ, ದಾವಣಗೆರೆ

ಸತತ ಪ್ರಯತ್ನ, ಆತ್ಮವಿಶ್ವಾಸದಿಂದ ಗುರಿಯನ್ನು ಸಾಧಿಸಬೇಕು. ದೃಢ ಮನಸ್ಸಿನ ಪ್ರಯತ್ನದಿಂದ ಮಾತ್ರವೇ ಸಾಧನೆ ಸಾಧ್ಯ ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಡಾ. ಎಸ್.ವೆಂಕಟೇಶ್ ಬಾಬು ಹೇಳಿದರು.

ನಗರದ ಆದಿಕೇಶವ ಅಕಾಡೆಮಿ ಅಸೋಸಿಯೇಟೆಡ್ ವಿತ್ ಎಂಈಎಸ್ ಪಿಯು ಕಾಲೇಜು ಮತ್ತು ಶಾಹಿದ್ ಫಾಲ್ಕಾನ್ ಪಿಯು ಕಾಲೇಜಿನ ಆಶ್ರಯದಲ್ಲಿ ''''''''ಆರಂಭ-2024 ಫ್ರೆಷರ್ಸ್ ಡೇ'''''''' ಹೆಸರಿನಲ್ಲಿ ಶೈಕ್ಷಣಿಕ ವರ್ಷದ ಸ್ವಾಗತ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಮಾಜಿ ಮೇಯರ್ ಬಿ.ಜಿ.ಅಜಯಕುಮಾರ ಮಾತನಾಡಿ, ವಿದ್ಯಾರ್ಥಿಗಳು ಕಷ್ಟಪಟ್ಟು ಓದಿ ತಮ್ಮ ತಂದೆ- ತಾಯಿ ಆಶಯದಂತೆ ಅವರ ಕನಸುಗಳನ್ನು ನನಸಾಗಿಸಬೇಕು. ತಂದೆ ತಾಯಿಗಳನ್ನು ಗೌರವಿಸಬೇಕು ಎಂದರು.

ಅಕಾಡೆಮಿ ನಿರ್ದೇಶಕ ಧನರಾಜ್ ಅಧ್ಯಕ್ಷತೆ ಕಾರ್ಯಕ್ರಮದಲ್ಲಿ ಅಕಾಡೆಮಿ ಕಾರ್ಯದರ್ಶಿ ಜ್ಯೋತಿ ಕುಮಾರ, ಹರಿಹರದ ಡಾ. ಬಿ.ಆರ್. ಅಂಬೇಡ್ಕರ್ ಕಾಲೇಜಿನ ನಿವೃತ್ತ ಪ್ರಾಚಾರ್ಯ ಕರುಣಾಕರನ್, ಶಾಹಿನ್ ಫಾಲ್ಕನ್ ಕಾಲೇಜಿನ ಅಧ್ಯಕ್ಷ ದಾದಾಪೀರ್, ಕಾಲೇಜಿನ ಪ್ರಾಚಾರ್ಯ ನಾಗರಾಜ, ಅಕಾಡೆಮಿ ನಿರ್ದೇಶಕರಾದ ಬಲ್ಲೂರು ಬಸವರಾಜ್, ಎಂ.ಸಿ. ಸುಜಾತ, ಮಲ್ಲೇಶಪ್ಪ, ಪವನ್, ಎಂಇಎಸ್ ಕಾಲೇಜಿನ ನಿರ್ದೇಶಕ ಪ್ರದೀಪ್, ಉಪನ್ಯಾಸಕರಾದ ಸತೀಶ್, ಮಲ್ಲೇಶ್ ಎಂ ನಾಯ್ಕ, ಅನಿಲ್, ನಿರಂಜನ್, ರಾಜೇಶ್, ದಸ್ತಗಿರ, ನಾಗರಾಜ, ಆಶಾ, ಮೋನಿಕಾ, ಕೋಮಲ, ಮೇಘನ, ಶಿವಾನಿ, ಜ್ಯೋತಿ, ಭಾಗ್ಯ, ಶುಭ ಬೋಧಕೇತರ ವರ್ಗದವರು ಉಪಸ್ಥಿತರಿದ್ದರು.

- - - -10ಕೆಡಿವಿಜಿ31ಃ:

ದಾವಣಗೆರೆಯ ಎಂಈಎಸ್ ಪಿಯು ಕಾಲೇಜು ಮತ್ತು ಶಾಹಿದ್ ಫಾಲ್ಕಾನ್ ಪಿಯು ಕಾಲೇಜಿನಲ್ಲಿ ನಡೆದ ಆರಂಭ-2024 ಫ್ರೆಷರ್ಸ್ ಡೇ ಕಾರ್ಯಕ್ರಮವನ್ನು ಡಾ.ವೆಂಕಟೇಶ್ ಬಾಬು ಉದ್ಘಾಟಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾ.11ರಿಂದ ಸರ್ಕಾರಿ ಆಸ್ಪತ್ರೆ ಒಪಿಡಿ ಬಂದ್‌ : ಎಚ್ಚರ
ಬೆಂಗಳೂರಲ್ಲಿ ಏಷ್ಯಾದ 2ನೇ ದೊಡ್ಡ 5 ಎಕರೆ ಅಮೆಜಾನ್‌ ಕಚೇರಿ : 7000 ನೌಕರರಿಗೆ ಸ್ಥಳಾವಕಾಶ