- ನವೀನ್ ಗುಳಗಣ್ಣವರ, ಹೇಮಲತಾ ನಾಯಕ ಆರೋಪ ಕನ್ನಡಪ್ರಭ ವಾರ್ತೆ ಕೊಪ್ಪಳ
ನಗರದ ಮೀಡಿಯಾ ಕ್ಲಬ್ನಲ್ಲಿ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾರಟಗಿ ಪುರಸಭೆಯ ದಾಖಲೆ ಬಿಡುಗಡೆ ಮಾಡಿದರು.
ಆಡಳಿತಾಧಿಕಾರಿ ಅವರ ಅವಧಿಯಲ್ಲಿ ತಿಂಗಳಿಗೆ ₹3 ಲಕ್ಷ ಇಂಧನ ವೆಚ್ಚಕ್ಕಾಗಿ ಬಳಕೆ ಮಾಡಲಾಗಿದೆ. ಆದರೆ, ಈಗ ಕೇವಲ ₹1 ಲಕ್ಷ ಬರುತ್ತದೆ. ಹಾಗಾದರೇ ಅಷ್ಟೇ ವಾಹನಗಳು ಈಗಲೂ ಇದ್ದರೂ ಇಂಧನ ಬಳಕೆಯಲ್ಲಿ ಕಡಿಮೆಯಾಗಿದ್ದು ಹೇಗೆ ಎಂದು ಪ್ರಶ್ನೆ ಮಾಡಿದರು. ಇದರಲ್ಲಿ ಗೋಲ್ ಮಾಲ್ ಆಗಿದ್ದು, ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.ಡಸ್ಟ್ ಬಿನ್ ಖರೀದಿಯಲ್ಲಿಯೂ ಅಕ್ರಮ ನಡೆದಿದೆ. ಡಸ್ಟ್ ಬಿನ್ ಗೆ ₹1550 ಖರ್ಚು ಹಾಕಲಾಗಿದೆ. ಆದರೆ, ಗುಣಮಟ್ಟದ ಮತ್ತು ಕಂಪನಿಯ ಡಸ್ಟ್ ಬಿನ್ ಗಳೇ ಕೇವಲ ₹850 ಇವೆ. ಇದಕ್ಕಾಗಿ ₹19 ಲಕ್ಷ ಖರ್ಚು ಮಾಡಲಾಗಿದೆ. ಅಚ್ಚರಿ ಎಂದರೇ ಯಾವೊಂದು ಡಸ್ಟ್ ಬಿನ್ ಸಹ ಇಲ್ಲ. ಹಾಗಾದರೇ ಬೋಗಸ್ ಬಿಲ್ ಮಾಡಲಾಗಿದೆ ಎಂದು ದೂರಿದರು.ಖಾಸಗಿ ಜಾಗದಲ್ಲಿ ಇಂದಿರಾ ಕ್ಯಾಂಟೀನ್:
ಸರ್ಕಾರದಿಂದ ಕಾರಟಗಿಯಲ್ಲಿ ಇಂದಿರಾ ಕ್ಯಾಂಟೀನ್ ನಿರ್ಮಾಣ ಮಾಡುತ್ತಿರುವುದು ಸ್ವಾಗತರ್ಹ. ಆದರೆ, ಅದನ್ನು ಖಾಸಗಿ ಜಾಗೆಯಲ್ಲಿ ಮಾಡುತ್ತಿರುವುದು ಎಷ್ಟು ಸರಿ ಎಂದು ಪ್ರಶ್ನೆ ಮಾಡಿದರು.ವಿವಾದ ಇರುವ ಜಾಗೆಯಲ್ಲಿ ನಿರ್ಮಾಣ ಮಾಡಲಾಗುತ್ತದೆ. ಕೋರ್ಟಿನಲ್ಲಿ ಆ ಜಾಗೆಯ ಸಮಸ್ಯೆ ಖಾಸಗಿಯವರಿಗೆ ಆದರೆ ಆಗ ಕಟ್ಟಿದ ಕಟ್ಟಡ ವ್ಯರ್ಥವಾಗುತ್ತದೆ. ಅಷ್ಟಕ್ಕೂ ಆ ಜಾಗೆಯ ವಿವಾದ ಇರುವುದು ಖಾಸಗಿಯವರ ನಡುವಿನ ವಿವಾದವಾಗಿದೆ. ಇದೆಲ್ಲವೂ ಜಿಲ್ಲಾ ಉಸ್ತುವಾರಿ ಸಚಿವರಿಗೆ ಗೊತ್ತಿದ್ದರೂ ಸಹ ನಿರ್ಮಾಣ ಮಾಡಲಾಗುತ್ತಿದೆ.
ತುರ್ತಾಗಿ ನಿರ್ಮಾಣ ಮಾಡಬೇಕು ಎನ್ನುವ ಕಾರಣಕ್ಕಾಗಿ ಸರ್ಕಾರದ ಹಣ ದುರ್ಬಳಕೆ ಮಾಡಿಕೊಳ್ಳುತ್ತಿರುವುದು ಸರಿಯಲ್ಲ ಎಂದರು.ಸಚಿವರ ಕುಮ್ಮಕ್ಕು:
ಪುರಸಭೆಯಲ್ಲಿ ಆಗಿರುವ ಅಕ್ರಮದ ಕುರಿತು ಎಷ್ಟೇ ದೂರು ನೀಡಿದರೂ ಯಾರು ಸಹ ಗಮನ ಹರಿಸುತ್ತಿಲ್ಲ. ಈ ಕುರಿತು ಪುರಸಭೆ ಸಾಮಾನ್ಯ ಸಭೆಯಲ್ಲಿ ಚರ್ಚೆಗೂ ಅವಕಾಶ ನೀಡುತ್ತಿಲ್ಲ. ಜಿಲ್ಲಾಧಿಕಾರಿಗಳಿಗೂ ಮನವಿ ಮಾಡಿದರೂ ಕ್ರಮವಹಿಸುತ್ತಿಲ್ಲ. ಕೂಡಲೇ ಈ ಕುರಿತು ಸಮಗ್ರ ತನಿಖೆಯಾಗಬೇಕು ಎಂದು ಆಗ್ರಹಿಸಿದರು.ಮುಖಂಡರಾದ ಬಸವರಾಜ ಎತ್ತಿನಮನಿ, ಆನಂದ ಎಂ. ಕಾರಟಗಿ, ಫಕೀರಪ್ಪ ಇದ್ದರು.