- ರಾಜ್ಯ ಸಂಚಾಲಕ ಆವರಗೆರೆ ವಾಸು ನೇತೃತ್ವದಲ್ಲಿ ಮನವಿ - - - ದಾವಣಗೆರೆ: ಅಂಗನವಾಡಿ ಕಾರ್ಯಕರ್ತೆಯರ ಸಮವಸ್ತ್ರದ ಬಟ್ಟೆ ಬಣ್ಣವನ್ನು ಪದೇಪದೇ ಬದಲಾವಣೆ ಮಾಡುವುದರಿಂದ ನಮ್ಮ ಗುರುತಿಸುವಿಕೆಗೆ ಧಕ್ಕೆ ಆಗುತ್ತಿದೆ. ಅಂಗನವಾಡಿ ಕೇಂದ್ರಗಳಿಗೆ ಗುಣಮಟ್ಟದ ಪೌಷ್ಠಿಕ ಆಹಾರ ನೀಡಿಕೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಅಗ್ರಹಿಸಿ, ಶಿಶು ಯೋಜನಾ ಅಭಿವೃದ್ಧಿ ಯೋಜನಾಧಿಕಾರಿಗಳಿಗೆ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರ ಸಹಾಯಕಿಯರ ಫೆಡರೇಷನ್ (ಎಐಟಿಯುಸಿ) ತಾಲೂಕು ಸಮಿತಿಯಿಂದ ಮನವಿ ಸಲ್ಲಿಸಲಾಯಿತು.
ಫೆಡರೇಷನ್ ರಾಜ್ಯ ಸಂಚಾಲಕ ಆವರಗೆರೆ ವಾಸು ಮಾತನಾಡಿ, ಅಂಗನವಾಡಿ ಕೇಂದ್ರಗಳಿಗೆ ಸರಬರಾಜಾಗುವ ಸ್ಥಿರ ವಸ್ತುಗಳನ್ನು ಕೇಂದ್ರಕ್ಕೆ ತಲುಪಿಸಬೇಕು. ಸುಮಾರು 2ರಿಂದ 3 ವರ್ಷಗಳಿಂದ ಅಂಗನವಾಡಿ ಕೇಂದ್ರಕ್ಕೆ ಸಹಾಯಕಿಯರಿಲ್ಲದೇ ಕಾರ್ಯಕರ್ತೆಗೆ ಕೆಲಸ ಮಾಡುವುದು ತುಂಬಾ ಕಷ್ಟವಾಗಿದೆ. ಆದ್ದರಿಂದ ಖಾಲಿ ಇರುವ ಸಹಾಯಕಿ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಬೇಕು. ಗರ್ಭಿಣಿ ಮತ್ತು ಬಾಣಂತಿಯರಿಗೆ ಮನೆಗಳಿಗೆ ರೇಷನ್ ಕೊಡುವ ವ್ಯವಸ್ಥೇ ಮಾಡಬೇಕು. ಗ್ಯಾಸ್, ಒಲೆ, ಪಾತ್ರೆಗಳು, ಟೇಬಲ್, ಕುರ್ಚಿಗಳನ್ನು ಆದಷ್ಟು ತುರ್ತಾಗಿ ಕೇಂದ್ರಗಳಿಗೆ ಒದಗಿಸಬೇಕು. ಇಲಾಖೆಗೆ ಸಂಬಂಧಪಟ್ಟ ಯಾವುದೇ ತರಬೇತಿ ಕರೆ ಕೊಟ್ಟರೂ ಮೂಲಸೌಕರ್ಯ ಇರುವುದಿಲ್ಲ. ತಿಂಡಿ ಊಟದ ವ್ಯವಸ್ಥೆ ಇರುವುದಿಲ್ಲ. ಇನ್ನು ಮುಂದೆ ವ್ಯವಸ್ಥಿತ ಜಾಗದಲ್ಲಿ ತರಬೇತಿ ವ್ಯವಸ್ಥೆ ಮಾಡಬೇಕು ಎಂದು ಸಮಿತಿ ಪರವಾಗಿ ಮನವಿ ಮಾಡಿದರು.ಈ ಸಂದರ್ಭ ತಾಲೂಕು ಸಮಿತಿ ಗೌರವಾಧ್ಯಕ್ಷೆ ರೇಣುಕಾ, ಅಧ್ಯಕ್ಷೆ ಕೆ.ಸಿ. ನಿರ್ಮಲ, ತಾಲೂಕು ಪ್ರಧಾನ ಕಾರ್ಯದರ್ಶಿ ಗೀತಾ, ಖಜಾಂಚಿ ಸರ್ವಮ್ಮ, ಉಪಾಧ್ಯಕ್ಷೆ ಸುಧಾ, ಸಂಘಟನಾ ಸದಸ್ಯೆ ಎಚ್.ಜಿ. ಮಂಜುಳ ಇತರರು ಇದ್ದರು.
- - - -15ಕೆಡಿವಿಜಿ33ಃ:ದಾವಣಗೆರೆಯಲ್ಲಿ ಎಐಟಿಯುಸಿ ತಾಲೂಕು ಸಮಿತಿ ವತಿಯಿಂದ ವಿವಿಧ ಬೇಡಿಕೆಗಳ ಈಡೇರಿಕೆಗೆ ಅಗ್ರಹಿಸಿ ಶಿಶು ಯೋಜನಾ ಅಭಿವೃದ್ಧಿ ಯೋಜನಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.