ಶಿಕ್ಷಣವು ಅಂಕಗಳಿಗೆ ಸೀಮಿತವಾಗದೆ ಮೌಲ್ಯ ಕಲಿಸಲಿ: ಪ್ರೊ.ಗಣೇಶ್ ಸಂಜೀವ್

KannadaprabhaNewsNetwork |  
Published : Dec 29, 2025, 03:15 AM IST
ಸಾಧಕ ವಿದ್ಯಾರ್ಥಿಗಳನ್ನು ವಾರ್ಷಿಕೋತ್ಸವದಲ್ಲಿ ಸನ್ಮಾನಿಸಲಾಯಿತು. | Kannada Prabha

ಸಾರಾಂಶ

ಕೊಣಾಜೆ ವಿಶ್ವಮಂಗಳ ವಿದ್ಯಾಸಂಸ್ಥೆಗಳ ವಾರ್ಷಿಕೋತ್ಸವ ಇತ್ತೀಚೆಗೆ ನಡೆಯಿತು. ಮಂಗಳೂರು ವಿವಿ ಕುಲಸಚಿವ ಪ್ರೊ.ಗಣೇಶ್ ಸಂಜೀವ್ ಉದ್ಘಾಟಿಸಿದರು. ಸಾಧಕ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.

ಕೊಣಾಜೆ ಮಂಗಳಗಂಗೋತ್ರಿ ವಿಶ್ವಮಂಗಳ ವಿದ್ಯಾಸಂಸ್ಥೆಗಳ ವಾರ್ಷಿಕೋತ್ಸವ

ಉಳ್ಳಾಲ: ಪ್ರತಿಯೊಬ್ಬರಲ್ಲೂ ಪ್ರತಿಭೆಗಳಿರುತ್ತವೆ. ಪ್ರತಿಭೆಗಳನ್ನು ಅವಕಾಶಗಳನ್ನಾಗಿ ಮಾಡುವ ಚಾಕಚಕ್ಯತೆ ನಮ್ಮಲ್ಲಿರಬೇಕು. ಶಿಕ್ಷಣವು ಅಂಕಗಳಿಗೆ ಮಾತ್ರವಲ್ಲ ಜ್ಞಾನ ಹಾಗೂ ಜೀವನದ ಮೌಲ್ಯಗಳನ್ನು ಬೆಳೆಸಿ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಪೂರಕವಾಗಿರಬೇಕು ಎಂದು ಮಂಗಳೂರು ವಿವಿ ಕುಲಸಚಿವ ಪ್ರೊ.ಗಣೇಶ್ ಸಂಜೀವ್ ಹೇಳಿದ್ದಾರೆ.

ಅವರು ಕೊಣಾಜೆ ವಿಶ್ವಮಂಗಳ ವಿದ್ಯಾಸಂಸ್ಥೆಗಳ ವಾರ್ಷಿಕೋತ್ಸವ ಉದ್ಘಾಟಿಸಿ ಅವರು ಮಾತನಾಡಿದರು.ಮಕ್ಕಳು ಸಾಧನೆ ಮಾಡಿದಾಗ ಪಾಲಕರು ಮಾತ್ರವಲ್ಲ ಶಿಕ್ಷಕರೂ ಸಂತಸಪಡುತ್ತಾರೆ. ವಿದ್ಯಾರ್ಥಿಗಳಲ್ಲಿ ಪ್ರಾಮಾಣಿಕತೆ, ಗೌರವ ನೀಡುವ ಮನೋಭಾವನೆ, ನಾಯಕತ್ವ ಗುಣವನ್ನು ಹಾಗೂ ಸಮಾಜದಲ್ಲಿ ಉತ್ತಮ ವ್ಯಕ್ತಿಯನ್ನಾಗಿ ರೂಪಿಸುವ ಜವಬ್ಧಾರಿ ಶಿಕ್ಷಕರದ್ದಾಗಿದೆ ಎಂದರು. ಮಂಗಳೂರು ವಿವಿ ಸಿಂಡಿಕೇಟ್ ಸದಸ್ಯರಾದ ರಘುರಾಜ್ ಕದ್ರಿ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ, ಇಂದು ಎಷ್ಟೋ ಜನರು ಶಿಕ್ಷಣಕ್ಕೆ ಸೀಮಿತವಾಗಿ ಹೋಗುತ್ತಿರುವುದನ್ನು ಕಾಣುತ್ತೇವೆ. ಸಮಾನತೆ, ಸಾಮರಸ್ಯ, ಮಾನವೀಯತೆಯ ಮನೋಭಾವಗಳು ಶಿಕ್ಷಣದ ಮೂಲಕ ಸಿಗುವಂತಾಗಲಿ ಎಂದರು.ವಿಶ್ವಮಂಗಳ ಆಡಳಿತ ಅಧ್ಯಕ್ಷರಾದ ಪ್ರೊ.ಜಗದೀಶ್ ಪ್ರಸಾದ್ ಅವರು ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ, ಮಕ್ಕಳ ವಿದ್ಯಾಭ್ಯಾಸದ ಜೊತಗೆ ನಾರಾಯಣ ಗುರು, ಬಸವಣ್ಣ , ಗಾಂಧೀಜಿ ಯವರಂತಹ ಮಹಾತ್ಮರ ಆದರ್ಶ ತತ್ವಗಳನ್ನು ತಿಳಿಯಪಡಿಸುವ ಕಾರ್ಯ ಅಗತ್ಯವಾಗಿ ಆಗಬೇಕಿದೆ ಎಂದರು.ಹಳೆ ವಿದ್ಯಾರ್ಥಿಗಳಾದ ಚಿತ್ರನಟಿ ವಂಶಿ ರತ್ನಕುಮಾರ್, ತೃಷಾ‌ ಹಾಗೂ ಫಾತಿಮತ್ ನಿಶಾ ಅವರನ್ನು ಶೈಕ್ಷಣಿಕ ಸಾಧನೆಗಾಗಿ ಸನ್ಮಾನಿಸಿ ಗೌರವಿಸಲಾಯಿತು.ಕಾರ್ಯಕ್ರಮದಲ್ಲಿ ವಿವಿಧ ವಿಭಾಗಗಳ ಮುಖ್ಯಸ್ಥರಾದ ಶೋಭಾವತಿ ಬಿ, ಪ್ರಿಯಾ ಎನ್, ಹಂಸಗೀತ ಅವರು ವಾರ್ಷಿಕ‌ ವರದಿ ಮಂಡಿಸಿದರು. ಸಿಂಡಿಕೇಟ್ ಸದಸ್ಯರಾದ ಅಚ್ಯುತ ಗಟ್ಟಿ, ಕಾರ್ಯದರ್ಶಿ ಡಾ. ಗೋವಿಂದ ರಾಜು, ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷರಾದ ರಾಜೀವ್ ನಾಯ್ಜ್ ಮೊದಲಾದವರು ಉಪಸ್ಥಿತರಿದ್ದರು.

ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ ಪೂರ್ಣಿಮಾ ಡಿ ಶೆಟ್ಟಿ ಸ್ಬಾಗತಿಸಿದರು. ಕೋಶಾಧಿಕಾರಿ ಸುಬ್ಬ ನಾಯ್ಕ್ ಅವರು ವಂದಿಸಿದರು. ಮಾನ್ವಿ ಎಸ್ ಹಾಗೂ ಮಹಮ್ಮದ್ ಝಹೀದ್ ನಿರೂಪಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕಣಚೂರು ವೈದ್ಯಕೀಯ ಕಾಲೇಜಿಗೆ ಕಿಮ್ಸ್ ಯು.ಜಿ. ಮೆಡಿಕ್ವಿಜ್- 2025 ಪ್ರಶಸ್ತಿ
ಮನ್‌ ಕೀ ಬಾತ್ ಭಾಷಣವಲ್ಲ, ಪ್ರೇರಣಾ ಶಕ್ತಿ: ವಿಜಯೇಂದ್ರ