ಕನ್ನಡಪ್ರಭ ವಾರ್ತೆ ವಿಜಯಪುರ
ನಗರದ ರೆಹಮಾನಿಯಾ ವೃತ್ತದಿಂದ ಕನ್ನಾನ್ ಫಂಕ್ಷನ್ ಹಾಲ್ ಹಾಗೂ ಬಾರಾಕೊಟ್ರಿ ತಾಂಡಾ ಮೂಲಕ ಜುಮನಾಳ ಹಾಗೂ ಖತಿಜಾಪುರ ಕೂಡು ರಸ್ತೆ ಸುಧಾರಣೆ ಅಂದಾಜು ₹5 ಕೋಟಿ ವೆಚ್ಚ ಮಾಡಲಾಗುತ್ತಿದೆ. 3 ಕಿಮೀ. ರಸ್ತೆ ಅಭಿವೃದ್ಧಿಪಡಿಸಲಾಗುವುದು. ಈ ಕಾಮಗಾರಿಯಲ್ಲಿ ಎಂಬ್ಯಾಕ್ಮೆಟ್, ಸಬ್ ಗ್ರೇಡ್ (300 ಎಂಎ), ಜಿಎಸ್ಬಿ, ಡಬ್ಲ್ಯೂ ಎಂ.ಎಂ, ಡಾಂಬರೀಕರಣ (ಬಿಎಂ ಮತ್ತು ಎಸ್ಡಿಬಿಸಿ) ಮತ್ತು 8 ಸಿಡಿ ಕಾಮಗಾರಿಗಳು ಸೇರಿವೆ. ಜಿಲ್ಲೆಯ ತಿಕೋಟಾ ತಾಲೂಕಿನ ನವಸರಪುರ, ತಾಜಪುರ ಕೂಡು ರಸ್ತೆ ಸುಧಾರಣೆಗೆ ₹150 ಲಕ್ಷ ಬಿಡುಗಡೆಯಾಗಿದೆ. ಈ ಅನುದಾನದಡಿ 700 ಮೀ. ರಸ್ತೆ ಡಾಂಬರೀಕರಣ ಹಾಗೂ 185 ಮೀಟರ್ ಕಾಂಕ್ರೀಟ್ ರಸ್ತೆ ಮತ್ತು ಫೂಟ್ ಬ್ರಿಡ್ಜ್ ನಿರ್ಮಿಸಲಾಗುವುದು ಎಂದು ಹೇಳಿದರು.
ತೊರವಿ ಅತಾಲಟ್ಟಿಯಿಂದ ವಿಜಯಪುರ-ಅಥಣಿ ರಾಷ್ಟ್ರೀಯ ಹೆದ್ದಾರಿ 548ಕ್ಕೆ ಸಂಪರ್ಕ ಕಲ್ಪಿಸುವ ಡಾಂಬರ್ ರಸ್ತೆ ಮೇಲ್ಮೈ ಹಾಳಾಗಿದ್ದು, 700ಮೀ. ಉದ್ದಕ್ಕೂ ಎಸ್ಡಿಬಿಸಿ ಹಾಗೂ 186 ಮೀ. ಉದ್ದದ ಆಂತರಿಕ ರಸ್ತೆಗೆ ಸಿಸಿ ರಸ್ತೆ ಸೇರಿಸಲಾಗುವುದು ಜೊತೆಗೆ ಮೈದಾನದಲ್ಲಿ ರಸ್ತೆ ಅಳವಡಿಸಲಾಗುವುದು ಎಂದರು.ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲಸೌಲಭ್ಯ ಅಭಿವೃದ್ಧಿ ಸಚಿವ, ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಬಿ. ಪಾಟೀಲ ಮಾತನಾಡಿ, ತಿಕೋಟಾ ತಾಲೂಕಿನ ನವರಸಪುರ ತಾಜಪುರ ಜೋಡು ರಸ್ತೆಯ ಸುಧಾರಣೆ ಮಾಡಲಾಗುತ್ತಿದ್ದು, ವಿಜಯಪುರ ನಗರದ ತೊರವಿ ಅತಾಲಟ್ಟಿಯಿಂದ ವಿಜಯಪುರ-ಅಥಣಿ ರಾಷ್ಟ್ರೀಯ ಹೆದ್ದಾರಿ 548ಬಿ ಕಲ್ಪಿಸುವ ರಸ್ತೆ ಅಭಿವೃದ್ಧಿಪಡಿಸಲಾಗುವುದು. ಇದರಲ್ಲಿ ಕಾಲುಸಂಕ (ಫೂಟ್ ಬ್ರಿಡ್ಜ್) ನಿರ್ಮಾಣ ಸೇರಿಸಲಾಗಿದೆ. ಅಥಣಿ ಮುಖ್ಯ ರಸ್ತೆಯಿಂದ ರಾಜಕುಮಾರ ಲೇಔಟ್ ಮುಖ್ಯ ರಸ್ತೆ, ಸುಪ್ರಿಂ ಮೆಡಿಕಲ್ ನಿಂದ ತೊರವಿ ಅತಾಲಟ್ಟಿ ಕೂಡು ರಸ್ತೆ ಹಾಗೂ ಆಂತರಿಕ ರಸ್ತೆ ಸುಧಾರಣೆಗೆ ₹150 ಲಕ್ಷ ವೆಚ್ಚದಲ್ಲಿ ಕೈಗೊಳ್ಳಲಾಗುತ್ತಿದೆ ಎಂದು ಹೇಳಿದರು.
ಶಾಸಕ ವಿಠ್ಠಲ ಕಟಕದೊಂಡ, ಮಾಜಿ ಶಾಸಕ ಪ್ರೊ.ರಾಜು ಆಲಗೂರ, ವಿಡಿಎ ಅಧ್ಯಕ್ಷ ಡಾ.ಗಂಗಾಧರ ಸಂಬಣ್ಣಿ, ಲೋಕೋಪಯೋಗಿ ಇಲಾಖೆ ಕಾರ್ಯನಿರ್ವಾಹಕ ಅಭಿಯಂತರ ಸಿ.ಎಸ್.ಪೊಲೀಸಪಾಟೀಲ, ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ರವಿ ಪವಾರ ಪಾಲ್ಗೊಂಡಿದ್ದರು.