ವಿಶೇಷ ವರದಿ
ಸರ್ಕಾರಿ ಶಾಲೆ ಉಳಿಸಿ ಅಭಿಯಾನದೊಂದಿಗೆ ಶತಮಾನದ ಸರ್ಕಾರಿ ಹಿರಿಯ ಪ್ರಾಥಮಿಕ ಬಾಲಕರ ಶಾಲೆಗೆ ಪೇಂಟಿಂಗ್ ಮಾಡಿ ಆಕರ್ಷಕ ಚಿತ್ರಗಳನ್ನು ಬಿಡಿಸಿ ಅಂದ ಹೆಚ್ಚಿಸುವ ಕಾರ್ಯವನ್ನು ಕನ್ನಡತಿ ಅನು ಅಕ್ಕ ತಂಡ ಮಾಡುತ್ತಿದೆ.
ಕಳೆದ ಒಂದು ವಾರದಿಂದ ಶಾಲೆಯಲ್ಲೇ ಮೊಕ್ಕಂ ಹೂಡಿರುವ ತಂಡ ಕೊರೆಯುವ ಚಳಿಯ ವಾತಾವರಣವನ್ನೂ ಲೆಕ್ಕಿಸದೆ ಶಾಲೆಗೆ ಬಣ್ಣ ಬಳಿಯುವ ಕೈಂಕರ್ಯದಲ್ಲಿ ನಿರತವಾಗಿದೆ. ಶಾಲೆ ಅಭಿವೃದ್ಧಿಗೆ ಬೆಂಬಲ ನೀಡುತ್ತಿರುವ ಬೆಂಗಳೂರಿನ ಸೌಜನ್ಯ ಸೇವಾಶ್ರಮ ಬಣ್ಣಗಳ ಕೊಡುಗೆ ನೀಡುತ್ತಿದೆ.ಮುಖ್ಯಶಿಕ್ಷಕ ಸಂತಾನ ರಾಮನ್ ಮನವಿ ಮೇರೆಗೆ ಮೇಲುಕೋಟೆಗೆ ಆಗಮಿಸಿರುವ ತಂಡಕ್ಕೆ ಹಿರಿಯ ವಿದ್ಯಾರ್ಥಿಗಳು, ಶಾಲಾಭಿವೃದ್ಧಿ ಸಮಿತಿ ಶಾಲೆಗೆ ವಿವಿಧ ರೀತಿಯ ಬಣ್ಣಗಳಲ್ಲಿ ಆಕರ್ಷಣೆ ತಂದು ಕೊಡುವ ಕಾರ್ಯಕ್ಕೆ ಸಹಕಾರ ನೀಡುತ್ತಿದ್ದಾರೆ.
ಪುತಿನ ಸೇರಿದಂತೆ ಕವಿಗಳು, ಹಲವು ಗಣ್ಯರು ವ್ಯಾಸಂಗ ಮಾಡಿರುವ ಶಾಲೆಗೆ ಸೇವೆ ನೀಡುವುದು ನಮಗೆ ಖುಷಿ ನೀಡುತ್ತಿದೆ. ಸತತ ಮಳೆಯಿಂದ ನಮ್ಮ ಕಾರ್ಯಕ್ಕೆ ಸ್ವಲ್ಪ ಹಿನ್ನಡೆಯಾಗಿದೆ. ಇನ್ನೂ ಕೆಲವು ದಿನಗಳ ಕಾಲ ಇಲ್ಲೇ ಉಳಿದು ಶಾಲಾ ಆವರಣಕ್ಕೆ ಸಂಪೂರ್ಣ ಪೇಂಟಿಂಗ್ ಮಾಡುವ ಕಾರ್ಯ ಮುಕ್ತಾಯ ಮಾಡುತ್ತೇವೆ. ನಮ್ಮೊಡನೆ ಶಿವಮೊಗ್ಗ ಜಿಲ್ಲೆ ಶಿಕಾರಿಪುರದ ಚಿತ್ರ ಕಲಾವಿದ ಪ್ರಶಾಂತ್ ಪ್ರತಿಬಿಂಬ ಇದ್ದು, ಪೇಂಟಿಂಗ್ ಕೆಲಸ ಮುಗಿದ ನಂತರ ಸ್ಮಾರಕಗಳು, ಕವಿಗಳು, ರಾಜ, ಮಹಾರಾಜರು ಸೇರಿ ಶೈಕ್ಷಣಿಕ ವಿಚಾರಗಳಿಗೆ ಪೂರಕವಾದ ಚಿತ್ರಗಳನ್ನು ಬಿಡಿಸಿ ಮನಮುಟ್ಟುವ ಸುಭಾಷಿತಗಳನ್ನು ಬರೆದು ಶಾಲೆಗೆ ಹೊಸ ಆಕರ್ಷಣೆ ನೀಡಲಾಗುವುದು. ಪುತಿನ ವ್ಯಾಸಂಗ ಮಾಡಿದ ಮಹತ್ವವಿರುವ ಈ ಶಾಲೆಗೆ ವಿಶೇಷ ಕಾಳಜಿವಹಿಸಿ ಕೆಲಸ ಮಾಡಬೇಕಿದೆ. ಶಾಲೆ ಪೇಂಟಿಂಗ್ ಕೆಲಸಕ್ಕೆ ಸರಿಸುಮಾರು 1.50 ಲಕ್ಷ ರು.ವೆಚ್ಚವಾಗಲಿದೆ ಎಂದು ಕನ್ನಡತಿ ಅನುಅಕ್ಕ ತಿಳಿಸಿದ್ದಾರೆ.
- ದರ್ಶನ್ ಪುಟ್ಟಣ್ಣಯ್ಯ ಶಾಸಕರು, ಮೇಲುಕೋಟೆ ಕ್ಷೇತ್ರ