ಭೂ ಹೀನ ದಲಿತರಿಗೆ ಭೂಮಿ ಮಂಜೂರು ಮಾಡಿಸಿಕೊಡಲು ಒತ್ತಾಯಿಸಿ ತಹಸೀಲ್ದಾರ್ ಗೆ ಮನವಿ

KannadaprabhaNewsNetwork |  
Published : Feb 04, 2026, 01:45 AM IST
 ನರಸಿಂಹರಾಜಪುರ ತಹಶೀಲ್ದಾರ್ ಡಾ.ನೂರಲ್ ಹುದಾ ಅವರಿಗೆ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಮುಖಂಡ ತರೀಕೆರೆ ವೆಂಕಟೇಶ್ ಹಾಗೂ ಇತರ ಮುಖಂಡರು ಮನವಿ ಪತ್ರ ಅರ್ಪಿಸಿದರು. | Kannada Prabha

ಸಾರಾಂಶ

ನರಸಿಂಹರಾಜಪುರತಾಲೂಕಿನ ರಾವೂರು, ಶಿರಿಗಳಲೆ ಹಾಗೂ ನಾಗಲಾಪುರ ಗ್ರಾಮದಲ್ಲಿ ಭೂ ಹೀನ ದಲಿತರಿಗೆ ಭೂಮಿ ಮಂಜೂರು ಮಾಡಿಸಿಕೊಡಬೇಕು ಎಂದು ಒತ್ತಾಯಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ( ಪ್ರೊ.ಬಿ.ಕೃಷ್ಣಪ್ಪ ಸ್ಥಾಪಿತ ) ಮುಖಂಡರು ತಹಸೀಲ್ದಾರ್ ಡಾ.ನೂರಲ್ ಹುದಾ ಅವರಿಗೆ ಮನವಿ ಪತ್ರ ಅರ್ಪಿಸಿದರು.

ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರ

ತಾಲೂಕಿನ ರಾವೂರು, ಶಿರಿಗಳಲೆ ಹಾಗೂ ನಾಗಲಾಪುರ ಗ್ರಾಮದಲ್ಲಿ ಭೂ ಹೀನ ದಲಿತರಿಗೆ ಭೂಮಿ ಮಂಜೂರು ಮಾಡಿಸಿಕೊಡಬೇಕು ಎಂದು ಒತ್ತಾಯಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ( ಪ್ರೊ.ಬಿ.ಕೃಷ್ಣಪ್ಪ ಸ್ಥಾಪಿತ ) ಮುಖಂಡರು ತಹಸೀಲ್ದಾರ್ ಡಾ.ನೂರಲ್ ಹುದಾ ಅವರಿಗೆ ಮನವಿ ಪತ್ರ ಅರ್ಪಿಸಿದರು.

ಮನವಿಯಲ್ಲಿ, ಈಗಾಗಲೇ ತಾಲೂಕಿನ ರಾವೂರು ಗ್ರಾಮ, ಶಿರಿಗಳಲೆ ಗ್ರಾಮ ಹಾಗೂ ನಾಗಲಾಪುರ ಗ್ರಾಮದಲ್ಲಿ ದಲಿತರ ಅಭಿವೃದ್ಧಿ ಕಾರ್ಯಗಳಿಗೆ ಭೂಮಿ ಮಂಜೂರು ಮಾಡಿಸಿಕೊಡಬೇಕು ಎಂದು ಮನವಿ ಮಾಡಲಾಗಿತ್ತು. ಸರ್ಕಾರ 2010 ರ ಮಾರ್ಚ್ 3 ರಂದು ಮಾಡಿದ ಆದೇಶದಂತೆ ಅರಣ್ಯ ಇಲಾಖೆ ಜಮೀನನ್ನು ಬಿಟ್ಟು ಉಳಿದ ಲಭ್ಯ ಇರುವ ಜಮೀನನ್ನು ಗ್ರಾಮ ಲೆಕ್ಕಿಗರು ಹಾಗೂ ಅರಣ್ಯ ಇಲಾಖೆ, ತಾಲೂಕು ಸರ್ವೇಯರ್ ಸ್ಥಳ ಪರಿಶೀಲನೆ ಮಾಡಿ ನಕ್ಷೆ ತಯಾರಿಸಿರುತ್ತಾರೆ.

ಅದರಂತೆ ಶಿರಗಳಲೆ ಗ್ರಾಮದಲ್ಲಿ 10 ಎಕರೆ, ನಾಗಲಾಪುರ ಗ್ರಾಮದಲ್ಲಿ 38 ಎಕ್ರೆ ಲಭ್ಯ ಇರುತ್ತದೆ.ಅದರಂತೆ ಕಡತ ತಯಾರಿಸಿ ಜಮೀನು ಮಂಜೂರು ಮಾಡಿಸಿಕೊಡಬೇಕು ಎಂದು ಆಗ್ರಹಿಸಿ 4.10.2025 ರಂದು ಮನವಿ ಮಾಡಿರುತ್ತೇವೆ. ಆದರೂ ಕಡತ ತಯಾರಿಸದೆ ಇರುವುದರಿಂದ 16.2.2026 ರಿಂದ ತಾಲೂಕು ಕಚೇರಿ ಎದುರು ಆಹೋ ರಾತ್ರಿ ಅನಿರ್ಧಿಷ್ಟ ಕಾಲ ಧರಣಿ ಸತ್ಯಾಗ್ರಹ ಮಾಡಲು ತೀರ್ಮಾನಿಸಿದ್ದೇವೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.

ಮನವಿ ನೀಡುವ ಸಂದರ್ಭದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಮುಖಂಡರಾದ ತರೀಕೆರೆ ವೆಂಕಟೇಶ್,ಎಂ.ವಿ.ಭವಾನಿ, ಎಸ್.ರಾಜೇಶ್, ಎಂ.ಜೆ.ಸಿಜು, ಎಸ್.ರಾಜು, ಮಡಬೂರು ಜೈ ರಾಮ್, ಸೈಯ್ಯದ್ ಖದೀರ್ ಮತ್ತಿತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸರ್ಕಾರಿ ಶಾಲೆಗಳ ಮುಚ್ಚಲು ಬಿಡೋದಿಲ್ಲ: ಪೂಜಾ
ಅಂಗನವಾಡಿ ಕಟ್ಟಡಗಳಿಗೆ ನಿವೇಶನ ಗುರುತಿಸಿ: ಡಿಸಿ ಪ್ರಭುಲಿಂಗ