ಜಾತಿ ದೃಢೀಕರಣ ಪತ್ರ ರದ್ದು ಕೋರಿ ತಹಸೀಲ್ದಾರ್‌ಗೆ ಮನವಿ

KannadaprabhaNewsNetwork |  
Published : Sep 30, 2025, 12:02 AM IST
ತಾಲೂಕು ಕಚೇರಿ ಮುಂಭಾಗ ಸೇರಿ ಮನವಿ ಸಲ್ಲಿಸಿದ ಸಂದರ್ಭ | Kannada Prabha

ಸಾರಾಂಶ

ಜಿ.ಪಂ. ಮಾಜಿ ಅಧ್ಯಕ್ಷ ಎಸ್‌ ಎನ್‌ ರಾಜಾರಾವ್‌ ಕುಟುಂಬದ ಜಾತಿ ದೃಢೀಕರಣ ಪತ್ರ ರದ್ದು ಕೋರಿ ಜಿಲ್ಲಾ ಆದಿವಾಸಿಗಳ ಸಂಘಟನೆಗಳ ಒಕ್ಕೂಟದ ಪ್ರಮುಖರು ತಾಲೂಕು ತಹಸೀಲ್ದಾರ್‌ ಅವರಿಗೆ ಮನವಿ ಸಲ್ಲಿಸಿದರು.

ಕನ್ನಡಪ್ರಭ ವಾರ್ತೆ ಕುಶಾಲನಗರ

ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಎಸ್ ಎನ್ ರಾಜಾರಾವ್ ಕುಟುಂಬದ ಜಾತಿ ದೃಢೀಕರಣ ಪತ್ರ ರದ್ದು ಕೋರಿ ಜಿಲ್ಲಾ ಆದಿವಾಸಿ ಸಂಘಟನೆಗಳ ಒಕ್ಕೂಟದ ಪ್ರಮುಖರು ಕುಶಾಲನಗರ ತಾಲೂಕು ತಹಸೀಲ್ದಾರ್ ಕಚೇರಿ ಮುಂಭಾಗ ಸೇರಿ ತಾಲೂಕು ತಹಸೀಲ್ದಾರ್ ಅವರಿಗೆ ಮನವಿ ಸಲ್ಲಿಸಿದರು.

ಕೂಡಿಗೆ ಗ್ರಾಮ ಪಂಚಾಯಿತಿಗೆ ಒಳಪಡುವ ಹೆಗ್ಗಡಹಳ್ಳಿ ನಿವಾಸಿಯಾಗಿದ್ದ ಎಸ್ ಎನ್ ರಾಜಾರಾವ್ ಕುಟುಂಬ ಸದಸ್ಯರು ಗಿರಿಜನ ಸಮುದಾಯಕ್ಕೆ ಸೇರುವುದಿಲ್ಲವೆಂದು ಜಿಲ್ಲಾಧಿಕಾರಿಗಳ ನ್ಯಾಯಾಲಯದಲ್ಲಿ ಸೆ. 16 ರಂದು ತೀರ್ಪು ನೀಡಿರುವುದರಿಂದ ತಕ್ಷಣ ಅವರ ಜಾತಿ ದೃಢೀಕರಣ ಪತ್ರವನ್ನು ರದ್ದುಗೊಳಿಸಿ ಆದಿವಾಸಿಗಳಿಗೆ ನ್ಯಾಯ ಒದಗಿಸಬೇಕು ಎಂದು ತಾಲೂಕು ತಹಸೀಲ್ದಾರ್ ಕಿರಣ್ ಜಿ ಗೌರಯ್ಯ ಅವರಿಗೆ ಮನವಿ ಪತ್ರದಲ್ಲಿ ಕೋರಿದ್ದಾರೆ. ಜಿಲ್ಲಾ ಸೋಲಿಗ ಅಭಿವೃದ್ಧಿ ಸಂಘದ ಜಿಲ್ಲಾಧ್ಯಕ್ಷ ಬಿ ಬಿ ಮಹೇಶ್, ಆದಿವಾಸಿ ಸಂಘಟನೆ ಒಕ್ಕೂಟ ಪ್ರಮುಖರಾದ ಆರ್ ಕೆ ಚಂದ್ರ, ರಾಜ್ಯ ಸಂಘಟನಾ ಕಾರ್ಯದರ್ಶಿ ಜೆ ಟಿ ಕಾಳಿಂಗ ಬಿಎನ್ ಮನು, ಆರ್ ಸಿ ಉದಯಕುಮಾರ್ ಬಿ ಆರ್ ಸುರೇಶ್, ಪ್ರಭಾಕರ್ ಮತ್ತಿತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಜಿ ರಾಮ್‌ ಜಿ ಕುರಿತು ಇಂದು ರಾಜ್ಯ ವಿಶೇಷ ಸಂಪುಟ ಸಭೆ
ಫೆ.13ಕ್ಕೆ ಕಾಂಗ್ರೆಸ್‌ ಸರ್ಕಾರಕ್ಕೆ 1000 ದಿನ