ಆರಿಕಾ ೧೦೫ ದರ್ಶನ ಭೂಷಣಮತಿ ಮಾತಾಜಿ ಯಮಸಲ್ಲೇಖನ ವ್ರತ ಸ್ವೀಕಾರ

KannadaprabhaNewsNetwork |  
Published : Oct 19, 2025, 01:03 AM IST
ಯಮಸಲ್ಲೇಖನ ಸ್ವೀಕರಿಸಿದ ಆರಿಕಾ ಶ್ರೀ ೧೦೫ ದರ್ಶನಭೂಷಣಮತಿ. | Kannada Prabha

ಸಾರಾಂಶ

ರಬಕವಿ ಬನಹಟ್ಟಿ ತಾಲೂಕಿನ ಹಳಿಂಗಳಿ ಗ್ರಾಮದ ಭದ್ರಗಿರಿ ಬೆಟ್ಟದಲ್ಲಿ ಮಹಾವೀರ ಭಗವಾನರ ಯೋಗನಿರೋಧ ದಿನವಾದ ಶನಿವಾರ ಜೈನ ಸಮಾಜದ ಹಿರಿಯ ಜೀವಿ ಆರಿಕಾ ೧೦೫ ದರ್ಶನಭೂಷಣಮತಿ ಮಾತಾಜಿ ಅವರು ಯಮಸಲ್ಲೇಖನ ವ್ರತ ಸ್ವೀಕರಿಸಿದರು.

ಕನ್ನಡಪ್ರಭ ವಾರ್ತೆ ಬಕವಿ-ಬನಹಟ್ಟಿ

ರಬಕವಿ ಬನಹಟ್ಟಿ ತಾಲೂಕಿನ ಹಳಿಂಗಳಿ ಗ್ರಾಮದ ಭದ್ರಗಿರಿ ಬೆಟ್ಟದಲ್ಲಿ ಮಹಾವೀರ ಭಗವಾನರ ಯೋಗನಿರೋಧ ದಿನವಾದ ಶನಿವಾರ ಜೈನ ಸಮಾಜದ ಹಿರಿಯ ಜೀವಿ ಆರಿಕಾ ೧೦೫ ದರ್ಶನಭೂಷಣಮತಿ ಮಾತಾಜಿ ಅವರು ಯಮಸಲ್ಲೇಖನ ವ್ರತ ಸ್ವೀಕರಿಸಿದರು.

ಶನಿವಾರ ಬೆಳಗ್ಗೆ ಮಾತಾಜಿಯ ಉಸಿರಾಟದಲ್ಲಿ ಗಣನೀಯ ಕ್ಷೀಣತೆ ಕಂಡುಬಂದಿದ್ದು, ಕಳೆದ ೧೨೦ ದಿನಗಳ ಹಿಂದೆ ಭದ್ರಗಿರಿ ಬೆಟ್ಟದ ಜೈನ ಮುನಿ ಆಚಾರ್ಯ ಶ್ರೀ ೧೦೮ ಕುಲರತ್ನಭೂಷಣ ಮಹಾರಾಜರಿಂದ ಸಲ್ಲೇಖನ ವೃತ ಪಡೆದಿದ್ದರು. ಈಗ ಮಾತಾಜಿಯ ಅಂತಿಮ ದಿನಗಳ ಕ್ಷಣಗಣನೆ ಪ್ರಾರಂಭವಾಗಿದ್ದು, ಸಾವಿರಾರು ಭಕ್ತರು ಇವರ ಅಂತಿಮ ಯಾತ್ರೆಯ ಮೋಕ್ಷದ ದರ್ಶನ ಪಡೆಯಲು ಸಾಗರೋಪಾದಿಯಲ್ಲಿ ಬರುತ್ತಿದ್ದಾರೆ.

ಮಾತಾಜಿಯವರ ಪಕ್ಕದಲ್ಲಿಯೇ ಕುಳಿತು ಆಚಾರ್ಯ ಶ್ರೀಗಳು ಮಂತ್ರೋಪದೇಶ ಮಾಡುತ್ತಿದ್ದಾರೆ. ಅವರ ಶ್ರೇಷ್ಠ ಆತ್ಮಪರಮಾತ್ಮವಾಗಲಿದೆ. ಇಂಥ ಅಂತಿಮ ದರ್ಶನ ಪಡೆಯುವುದು ಬಹುಶ್ರೇಷ್ಠ. ಅವರ ೧೦೩ನೇ ವಯೋಮಾನದಲ್ಲಿ ಅವರು ಆರಿಕಾ ಆಗಿ ಜೀವನ ಸಾರ್ಥಕ ಮಾಡಿಕೊಳ್ಳಬೇಕು ಎಂಬ ಅವರ ಇಚ್ಛೆ ನೆರವೇರಿದೆ. ಅವರ ಆತ್ಮಕ್ಕೆ ಆ ಮಹಾವೀರ ಭಗವಾನರು ಶಾಂತಿ ನೀಡಲಿ ಎಂದು ೧೦೮ ಶ್ರೀ ಕುಲರತ್ನಭೂಷಣ ಮಹಾರಾಜರು ಆಶೀರ್ವದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶಿಕ್ಷಣಕ್ಕೆ ಸಿದ್ಧಗಂಗಾ ಮಠದ ಕೊಡುಗೆ ಅನನ್ಯ
ಪಟ್ಟಣದ ಬೀದಿ ಬದಿ ವ್ಯಾಪಾರಸ್ಥರ ಹಿತ ಕಾಪಾಡಿ