ಉತ್ತರಾದಿ ಶ್ರೀಗಳ ಆಶೀರ್ವಾದ ಪಡೆದ ಅರುಣ ಪಾಟೀಲ್‌

KannadaprabhaNewsNetwork |  
Published : Jul 22, 2024, 01:25 AM ISTUpdated : Jul 22, 2024, 01:26 AM IST
ಕಲಬುರಗಿಯ ಬ್ರಹ್ಮಪುರ ಉತ್ತರಾದಿ ಮಠದ ರುಕ್ಮಿಣಿ ಪಾಂಡುರಂಗ ಮಂದಿರದಲ್ಲಿ ಅಫಜಲ್ಪುರ ಹಿರಿಯ ಶಾಸಕರಾದ ಎಂವೈ ಪಾಟೀಲರ ಪುತ್ರ ಅರುಣ ಪಾಟೀಲರು ಗುರುಪೂರ್ಣಿಮೆ ದಿನ ಉತ್ತರಾದಿ ಮಠಾಧೀಶರಾದ ಸತ್ಯಾತ್ಮತೀರ್ಥರ ದರುಶನ ಆಶೀರ್ವಾದ ಪಡೆದುಕೊಂಡರು. | Kannada Prabha

ಸಾರಾಂಶ

ಗುರು ಪೂರ್ಣಿಮೆ ನಿಮಿತ್ತ ಮಾಜಿ ಜಿಪಂ ಸದಸ್ಯ ಅರುಣ ಪಾಟೀಲ್‌ ಅವರು ಉತ್ತರಾದಿ ಮಠಾಧೀಶರಾದ ಸತ್ಯಾತ್ಮತೀರ್ಥ ಶ್ರೀಪಾದಂಗಳವರನ್ನು ಕಲಬುರಗಿಯ ಬ್ರಹ್ಮಪುರ ಉತ್ತರಾದಿ ಮಠದ ರುಕ್ಮಿಣಿ ಪಾಂಡುರಂಗ ಮಂದಿರದಲ್ಲಿ ಕಂಡು ಆಶೀರ್ವಾದ, ಫಲ, ಮಂತ್ರಾಕ್ಷತೆ ಪಡೆದುಕೊಂಡರು.

ಕನ್ನಡಪ್ರಭ ವಾರ್ತೆ ಕಲಬುರಗಿ

ಗುರು ಪೂರ್ಣಿಮೆ ನಿಮಿತ್ತ ಮಾಜಿ ಜಿಪಂ ಸದಸ್ಯ ಅರುಣ ಪಾಟೀಲ್‌ ಅವರು ಉತ್ತರಾದಿ ಮಠಾಧೀಶರಾದ ಸತ್ಯಾತ್ಮತೀರ್ಥ ಶ್ರೀಪಾದಂಗಳವರನ್ನು ಕಲಬುರಗಿಯ ಬ್ರಹ್ಮಪುರ ಉತ್ತರಾದಿ ಮಠದ ರುಕ್ಮಿಣಿ ಪಾಂಡುರಂಗ ಮಂದಿರದಲ್ಲಿ ಕಂಡು ಆಶೀರ್ವಾದ, ಫಲ, ಮಂತ್ರಾಕ್ಷತೆ ಪಡೆದುಕೊಂಡರು.

ಈ ಸಂದರ್ಭದಲ್ಲಿ ಗುರುಗಳು ಅರುಣ ಪಾಟೀಲರೊಂದಿಗೆ ಕೆಲಕಾಲ ಮಾತುಕತೆ ನಡೆಸುತ್ತ ಸುಕ್ಷೇತ್ರ, ಭೀಮಾ ತೀರದ ಮಣ್ಣೂರಲ್ಲಿರುವ ಶ್ರೀ ಮಾಧವ ತೀರ್ಥರು, ಶ್ರೀ ವೇದೇಶತೀರ್ಥರ ವೃಂದಾವನ ಸಮುಚ್ಚಯ ಹಾಗೂ ಚೆನ್ನಕೇಶವ ದೇವರ ಮಂದಿರದಲ್ಲಿ ಭಕ್ತರಿಗೆ, ವಿದ್ಯಾರ್ಥಿಗಳಿಗೆ ಶುದ್ಧ ಕುಡಿವ ನೀರಿನ ಸವಲತ್ತು ಕಲ್ಪಿಸಬೇಕೆಂದರು.

ಈಗಾಗಲೇ ಮಣ್ಣೂರಿನ ಚೆನ್ನಕೇಶವ ಮಂದಿರದಲ್ಲಿ ಕೈಗೊಂಡಿರುವ ಕಾಮಗಾರಿಗಳ ಬಗ್ಗೆ ಮಾಹಿತಿ ಪಡೆದು ಗುರುಗಳು ಮೆಚ್ಚುಗೆ ಸೂಚಿಸಿದರಲ್ಲದೆ ಬಸ್‌ ನಿಲ್ದಾಣದಿಂದ ಬೈಪಾಸ್‌ ಮಠ ಹಾಗೂ ಮಂದಿರ ಎರಡಕ್ಕೂ ರಸ್ತೆ ಸವಲತ್ತು ಕಲ್ಪಿಸಿರೋದರ ಬಗ್ಗೆಯೂ ಮೆಚ್ಚಿಕೊಂಡರು. ಮಠವನ್ನು ಒಳಗೊಂಡಂತೆ ಪ್ರವಾಹ ತಡೆ, ರಕ್ಷಣಾ ಗೋಡೆಯನ್ನು ಕಟ್ಟಿಸಿಕೊಡುವ ಬಗ್ಗೆಯೂ ವಿಷಯ ಪ್ರಸ್ತಾಪಿಸಿದರು.

ಇದಲ್ಲದೆ ಭೀಮಾ ನದಿಗೆ ವೃಂದಾವನದ ಸಮುಚ್ಚಯದ ಬಳಿ ಹೊಂದಿಕೊಂಡಂತೆ ಭಕ್ತರಿಗಾಗಿ ಪ್ರತ್ಯೇಕ ಸ್ನಾನ ಘಟ್ಟ ನಿರ್ಮಿಸಿಕೊಡುವ ಬಗ್ಗೆ ಭಕ್ತರ ಆಗ್ರಹ, ಅನುಕೂಲಗಳ ವಿಷಯ ಪ್ರಸ್ತಾಪಿಸಿ , ಅಲ್ಲಿಗೆ ಬಂದು ಹೋಗುವ ಸಾವಿರಾರು ಭಕ್ತರಿಗೆ ಅನುಕೂಲವಾಗುವಂತಹ ಈ ಕೆಲಸಗಳನ್ನು ಬೇಗ ಕೈಗೊಂಡು ಮಾಡಿ ಮುಗಿಸುವಂತೆ ಫಲ ಮಂತ್ರಾಕ್ಷತೆ ನೀಡಿದರು. ಕಲಬುರಗಿ ಭಾಗದ ಉತ್ತರಾದಿ ಮಠಾಧಿಕಾರಿಗಳಾದ ರಾಮಾಚಾರ್ಯ ಘಂಟಿ, ಪಂ. ವಾಸುದೇವಾಚಾರ್ಯ ಕಾನುಗೋವಿ ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶೇ.11ರಷ್ಟು ಟೊಯೋಟಾ ಕಾರುಗಳು ರಾಜ್ಯದಲ್ಲೇ ಸೇಲ್‌
ರಾಜ್ಯದಲ್ಲಿ 2 ದಿನ ಮೋಡಕವಿದ ವಾತಾವರಣ, ಮಳೆ