ಗಳಿಸಿದ ಜ್ಞಾನ ದೇಶಸೇವೆಗೆ ಬಳಸದಿದ್ದರೆ ಆತನೇ ದೇಶದ್ರೋಹಿ

KannadaprabhaNewsNetwork |  
Published : Jul 05, 2026, 01:15 AM IST
24 | Kannada Prabha

ಸಾರಾಂಶ

ಶರಣರು ತಮ್ಮನ್ನು ಸಂಪೂರ್ಣವಾಗಿ ಸಮಾಜ ಉದ್ಧಾರಕ್ಕೆ ಬಳಸಿಕೊಂಡು ವಚನ ಸಾಹಿತ್ಯವನ್ನು ವಿಶ್ವಕ್ಕೆ ಕಾಣಿಕೆಯಾಗಿ ನೀಡಿದರು

ಕನ್ನಡಪ್ರಭ ವಾರ್ತೆ ಮೈಸೂರು ಗಳಿಸಿದ ಜ್ಞಾನವನ್ನು ದೇಶಸೇವೆಗೆ ಬಳಸದಿದ್ದರೆ ಅವನೇ ಪ್ರಥಮ ದೇಶದ್ರೋಹಿ ಎಂದು ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಅರಳಿ ನಾಗರಾಜ ಗಂಗಾವತಿ ಹೇಳಿದರು.ಶರಣು ವಿಶ್ವವಚನ ಫೌಂಡೇಶನ್‌ ನಿಂದ ಬೋಗಾದಿಯ ದೀಪನಗರದ ದೀಪ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮತ್ತು ಹಾರನಹಳ್ಳಿ ಬಸವಣ್ಣ ಮತ್ತು ಗುರುಸಿದ್ಧಮ್ಮ ಅವರ ದತ್ತಿ ಅಂಗವಾಗಿ ಹಮ್ಮಿಕೊಂಡಿದ್ದ 127ನೇ ಶಾಲೆಗಳೆಡೆಗೆ ವಚನಗಳ ನಡಿಗೆ ಕಾರ್ಯಕ್ರಮ ಉದ್ಘಾಟನೆ ಮಾಡಿ ಅವರು ಮಾತನಾಡಿದರು.

ಶರಣರು ತಮ್ಮನ್ನು ಸಂಪೂರ್ಣವಾಗಿ ಸಮಾಜ ಉದ್ಧಾರಕ್ಕೆ ಬಳಸಿಕೊಂಡು ವಚನ ಸಾಹಿತ್ಯವನ್ನು ವಿಶ್ವಕ್ಕೆ ಕಾಣಿಕೆಯಾಗಿ ನೀಡಿದರು. ವಚನ ಸಾಹಿತ್ಯ ವಿದ್ಯಾರ್ಥಿಗಳಲ್ಲಿ ವೈಚಾರಿಕ ಚಿಂತನೆ ಬೆಳೆಸಿ ಉತ್ತಮ ಬದುಕನ್ನು ಕಟ್ಟಿಕೊಳ್ಳಲು ನೆರವಾಗುತ್ತದೆ. ವಿದ್ಯಾರ್ಥಿಗಳಲ್ಲಿ ಸಾಧನೆಯ ಜ್ಯೋತಿಯನ್ನು ಬೆಳಗಿಸಲು ಜಗತ್ಪ್ರಸಿದ್ಧ ವಿಜ್ಞಾನಿ ಥಾಮಸ್ ಆಲ್ವಾ ಎಡಿಸನ್ ಅವರ ಜೀವನದ ಅದ್ಭುತ ಪ್ರಸಂಗ ಹೇಳಿದ ಅವರು ಬುದ್ಧಿಮಾಂದ್ಯ ಎಂದು ಶಾಲೆಯಿಂದ ಹೊರಹಾಕಲ್ಪಟ್ಟ ಎಡಿಎಸ್‌ ಯನ್ನು ಜಗತ್ತಿಗೆ ಬೆಳಕು ನೀಡುವ ಮಹಾನ್ ವಿಜ್ಞಾನಿಯನ್ನಾಗಿ ಮಾಡಿದ್ದು, ಅವರ ತಾಯಿ. ತಾಯಿಯೇ ಮೊದಲ ಗುರುವಾಗಿ ನೀಡಿದ ಪ್ರೇರಣೆಯಿಂದಾಗಿ ಎಡಿಸನ್ ಇಡೀ ಜಗತ್ತನ್ನು ಬೆಳಗಲು

ಸಾಧ್ಯವಾಯಿತು ಎಂದರು.ನಿವೃತ್ತ ಪ್ರಾಂಶುಪಾಲ ಎಚ್.ಬಿ. ಓಂಕಾರಯ್ಯ ಅವರು ಸಮಾಜದಲ್ಲಿ ಸುಧಾರಕರು ಕೆಲವರಿದ್ದರೆ, ದಾರಿ ತಪ್ಪುತ್ತಿರುವವರು ಅನೇಕರಿದ್ದಾರೆ. ಇಂತಹ ಅನೇಕರನ್ನು ಸುಧಾರಣೆ ಮಾಡಲು ಬಸವಾದಿ ಶರಣರು ಈ ಭೂಮಿಯಲ್ಲಿ ಅವತರಿಸಿ, ವಚನಗಳ ಮೂಲಕವೇ ಕ್ರಾಂತಿಕಾರಿ ಸುಧಾರಣೆಯನ್ನು ತಂದರು‌ ಎಂದು ತಿಳಿಸಿದರು.ಶರಣು ವಿಶ್ವವಚನ ಫೌಂಡೇಷನ್ ಸಂಸ್ಥಾಪಕಿ ರೂಪಾ ಕುಮಾರಸ್ವಾಮಿ ಮಾತನಾಡಿ, ಬಸವಣ್ಣನವರ ಸಪ್ತ ಸೂತ್ರಗಳನ್ನು ಮಕ್ಕಳಿಗೆ ಸಾಮೂಹಿಕವಾಗಿ ಹೇಳಿಕೊಟ್ಟು ಅವುಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಲು ಕರೆ ನೀಡಿದರು.ಶರಣು ವಿಶ್ವವಚನ ಫೌಂಡೇಷನ್ ಸಂಸ್ಥಾಪಕ ವಚನ ಕುಮಾರಸ್ವಾಮಿ ಅಧ್ಯಕ್ಷತೆ ವಹಿಸಿ ಮಾತನಾಡಿ, ವಚನಗಳನ್ನುಬದುಕಿಗೆ ದಾರಿ ತೋರುವ ದೀಪಸ್ತಂಭಕ್ಕೆ ಹೋಲಿಸಿ, ಏಕಾಗ್ರತೆಯನ್ನು ರೂಡಿಸಿಕೊಳ್ಳಲು ಶರಣರ ವಚನಗಳನ್ನುಅಭ್ಯಸಿಸಲು ತಿಳಿಸಿದರು.ವಚನ ದೀವಿಗೆ ಪ್ರಮಾಣಪತ್ರ ಹಾಗೂ ವಚನ ಶಾಲೆ, ; ಪುಸ್ತಕವನ್ನು ವಿತರಿಸಲಾಯಿತು.ಶಾಲೆಯ ಮುಖ್ಯ ಶಿಕ್ಷಕ ಬಾಬು ಅವರು ಸ್ವಾಗತಿಸಿದರು, ಶಿಕ್ಷಕಿ ಅಶ್ವಿನಿ ನಿರೂಪಿಸಿದರು. ಪೂರ್ಣಿಮಾ ವಂದಿಸಿದರು. ಪೌಂಡೇಷನ್ ಕೇಂದ್ರೀಯ ಸಂಚಾಲಕ ವಿ. ಲಿಂಗಣ್ಣ, ಶಿಕ್ಷಕರುಗಳಾದ ಜಿ. ಸರ್ವೇಶ್, ಮಹದೇವಯ್ಯ, ಉಮಾಮಹೇಶ್ವರಿ, ಚಂದ್ರಿಕಾ, ನೇತ್ರಾವತಿ, ಪ್ರತಿಭಾ, ರಾಧಿಕಾ, ಚೈತ್ರ, ಸೌಮ್ಯ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಎನ್ ಡಿಎನಿಂದ SIR ಅಧಿಕಾರಿಗಳಿಗೆ ಆತಂಕ: ಕಾಂಗ್ರೆಸ್ ಆರೋಪ
ಬಸ್ -ಟಿಪ್ಪರ್ ನಡುವೆ ಡಿಕ್ಕಿ: ಹಲವರಿಗೆ ಗಾಯ