ಕನ್ನಡ ಪ್ರಭ ವಾರ್ತೆ ಗುಳೇದಗುಡ್ಡ
ಪಟ್ಟಣದ ಪಾಂಡುರಂಗ ವಿಠ್ಠಲ ದೇವಸ್ಥಾನದಲ್ಲಿ ರಾಮನವಮಿ ಉತ್ಸವದ ನಿಮಿತ್ತ ಗುರುವಾರ ಹಮ್ಮಿಕೊಂಡ ದಿಂಡಿ ಸಪ್ತಾಹ, ಜ್ಞಾನೇಶ್ವರಿ ಪಾರಾಯಣ ಹಾಗೂ ಕಳಸಾರೋಹಣ ಸಮಾರಂಭದಲ್ಲಿ ಮಾತನಾಡಿದರು. ಜನರು ಭಕ್ತಿ ಪರಂಪರೆ ಮಾರ್ಗದ ಮೂಲಕ ಸಾಕಷ್ಟು ನೆಮ್ಮದಿ ಕಾಣಬಹುದಾಗಿದ್ದು, ದೇವರನ್ನು ಭಜನೆ, ಕೀರ್ತನೆಗಳ ಮೂಲಕ ಸ್ಮರಿಸಬಹುದಾಗಿದೆ. ದಿಂಡಿ ಬಜನೆ ಪಾರಾಯಣ ಇಂದಿನ ದಿನಗಳಲ್ಲಿ ಅಗತ್ಯವಾಗಿದೆ ಎಂದು ಹೇಳಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಂಜಯ ಬರಗುಂಡಿ ಮಾತನಾಡಿ, ದೇವರನ್ನು ಭಕ್ತಿಯೋಗದ ಮೂಲಕ ಭಜಿಸುವುದರಿಂದ ಮಾನಸಿಕವಾಗಿ ನೆಮ್ಮದಿ ಸಿಗುತ್ತದೆ. ಭಕ್ತಿ ಮಾರ್ಗ ಅತ್ಯಂತ ಮಹತ್ವದ್ದಾಗಿದೆ ಎಂದರು.ಕೃಷ್ಣ ಮಹಾರಾಜರು,ಮುರುಘಾಮಠದ ಕಾಶೀನಾಥ ಶ್ರೀಗಳು ಸಾನಿಧ್ಯವಹಿಸಿ ಮಾತನಾಡಿ, ಪರಮಾತ್ಮನನ್ನು ಬಿಟ್ಟು ಜಗತ್ತು ಇಲ್ಲ ದೇವರ ಸ್ಮರಣೆ ನಾವೆಲ್ಲರೂ ಮಾಡಬೇಕು ಅಂದಾಗ ನಾಡು ಸಮೃದ್ದವಾಗಿರುತ್ತದೆ ಎಂದರು.
ಮೆರವಣಿಗೆ : ಪಟ್ಟಣದ ಪ್ರಮುಖ ಬೀದಿಗಳಲ್ಲಿ ಪಾಂಡುರಂಗನ ಭಾವಚಿತ್ರದ ಮೆರವಣಿಗೆ ಮಹಿಳೆಯರು ಕುಂಭ ಕಳಸದೊಂದಿಗೆ ಜರುಗಿತು.