ಯುವ ತಂತ್ರಜ್ಞರು ಈ ನಿಟ್ಟಿನಲ್ಲಿ ಹೆಚ್ಚಿನ ಅಧ್ಯಯನ ಮಾಡಲು ಮುಂದಾಗಬೇಕು.
ಕನ್ನಡಪ್ರಭ ವಾರ್ತೆ ಮೈಸೂರು
ಅಂತರಂಗದ ಶಕ್ತಿ ಅರಿತು ಕೆಲಸ ನಿರ್ವಹಿಸಿದರೆ ಸಾಧನೆ ಸಿದ್ಧಿಗೊಳ್ಳುತ್ತದೆ ಎಂದು ಪದ್ಮಶ್ರೀ ಪುರಸ್ಕೃತ ಬ್ರಹ್ಮೋಸ್ ಕ್ಷಿಪಣಿ ತಜ್ಞ, ಹಿರಿಯ ವಿಜ್ಞಾನಿ ಡಾ. ಪ್ರಹ್ಲಾದ ರಾಮರಾವ್ ಹೇಳಿದರು.ನಗರದ ಟಿ.ಕೆ. ಬಡಾವಣೆಯ ಶ್ರೀ ರಾಯರ ಮಠದಲ್ಲಿ ಭಾನುವಾರ ನಡೆದ ಶ್ರೀ ಗುರುರಾಘವೇಂದ್ರ ಸೇವಾ ಟ್ರಸ್ಟ್ ರಜತ ಸಂಭ್ರಮ ಮಹೋತ್ಸವದಲ್ಲಿ ಮಾತನಾಡಿದ ಅವರು, ಪ್ರಾಚೀನ ಭಾರತೀಯ ವೇದಗಳಲ್ಲಿ ವಿಜ್ಞಾನವಿದೆ. ಅದು ಇಂದಿನ ಕ್ಷಿಪಣಿ ತಂತ್ರಜ್ಞಾನ ಮತ್ತು ಏರೋ ಡೈನಮಿಕ್ಸ್ ಸಂಶೋಧನೆಗೆ ಪೂರಕವಾಗಿದೆ ಎಂದರು.ಯುವ ತಂತ್ರಜ್ಞರು ಈ ನಿಟ್ಟಿನಲ್ಲಿ ಹೆಚ್ಚಿನ ಅಧ್ಯಯನ ಮಾಡಲು ಮುಂದಾಗಬೇಕು. ದೇಶ ಮತ್ತು ಸತನಾತನ ಧರ್ಮಕ್ಕೆ ಮಹತ್ತರ ಕೊಡುಗೆ ನೀಡಿ ಭಾರತದ ಹಿರಿಮೆಗೆ ಕೊಡುಗೆ ನೀಡುವಂತಾಗಬೇಕು ಎಂದು ಅವರು ತಿಳಿಸಿದರು.ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿ ವಿ. ಶ್ರೀಶಾನಂದ ಮಾತನಾಡಿ, ರಾಯರ ಮೃತ್ತಿಕಾ ವೃಂದಾವನ ಎಲ್ಲೇ ಪ್ರತಿಷ್ಠಾಪನೆಯಾದರೂ ಆ ಪ್ರದೇಶ ಅಭಿವೃದ್ಧಿ ಹೊಂದಿ ಭಕ್ತರ ಸಂಖ್ಯೆ ಹೆಚ್ಚಾಗುತ್ತದೆ. ಈ ನಿಟ್ಟಿನಲ್ಲಿ ಟಿ.ಕೆ. ಬಡಾವಣೆ ಸನ್ನಿಧಿಯಲ್ಲಿ 25 ವರ್ಷ ಧಾರ್ಮಿಕ ಮತ್ತು ಸಾಮಾಜಿಕ ಸೇವೆಗಳು ನಡೆದಿರುವುದು ಮಾದರಿಯಾಗಿದೆ ಎಂದರು.ಜ್ಞಾನ ಮತ್ತು ಭಕ್ತಿಗೆ ಯಾವುದೇ ಸಮಯ, ಸಮುದಾಯಗಳ ಮಿತಿ ಇಲ್ಲ. ಹೀಗಾಗಿ, ನಾವು ಮಕ್ಕಳಿಗೆ ಸಂಸ್ಕೃತಿ, ಸಂಸ್ಕಾರಗಳನ್ನು ಕಲಿಸಬೇಕು. ಇದಕ್ಕೆ ಸಂಸ್ಕೃತ ಭಾಷಾ ಕಲಿಕೆಯೂ ಬೇಕು. ಭಾರತದಂಥ ಅದ್ಭುತ ದೇಶದಲ್ಲಿ ಜನಿಸಿರುವೆ ಎಂಬ ಹೆಮ್ಮೆಯನ್ನು ಯುವಜನರಲ್ಲಿ ಮೂಡಿಸಬೇಕು. ರಾಷ್ಟ್ರದ ಋಣ ತೀರಿಸುವ ನಿಟ್ಟಿನಲ್ಲಿ ಛಲ ಮತ್ತು ಬಲಗಳು ಎಲ್ಲರಲ್ಲೂ ವೃದ್ಧಿಯಾಗಬೇಕು ಎಂದು ಅವರು ಹೇಳಿದರು.ಇದೇ ವೇಳೆ ಬ್ರಹ್ಮೋಸ್ ಸಂಶೋಧನೆ, ಪ್ರಯೋಗ ಮತ್ತು ಭಾರತದ ವಾಯು ಸೇನಾ ಸಾಮರ್ಥ್ಯಗಳ ವಿಡಿಯೋ ಪ್ರದರ್ಶಿಸಲಾಯಿತು. ಹಿರಿಯ ವಕೀಲ ಕೆ.ಆರ್. ಶಿವಶಂಕರ್, ಟ್ರಸ್ಟ್ ಅಧ್ಯಕ್ಷ ಜಯರಾಂ ಮತ್ತು ಪದಾಧಿಕಾರಿಗಳು ಇದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.