ಕನ್ನಡಪ್ರಭ ವಾರ್ತೆ ರಾಯಚೂರು
ಬುಧವಾರ ಬಿಜೆಪಿ ಜಿಲ್ಲಾ ಕಾರ್ಯಾಲಯದಲ್ಲಿ ನಗರ ಮಂಡಲದಿಂದ ಅಟಲ್ ಬಿಹಾರಿ ವಾಜಪೇಯಿ ಅವರ 100ನೇ ಜನ್ಮದಿನದ ಪ್ರಯುಕ್ತ ಹಮ್ಮಿಕೊಂಡಿದ್ದ ರಕ್ತದಾನ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು.
ಭಾರತದಲ್ಲಿ ಉತ್ತಮ ಆಡಳಿತ ನೀಡುವ ಮೂಲಕ ಸೌಹಾರ್ದ ಭಾವನೆ ಮೂಡಿಸುವ ನಿಟ್ಟಿನಲ್ಲಿ ಅಟಲ್ಜೀ ಮುಂದಿದ್ದರು. ನಮಗೆ ಪಾಕಿಸ್ತಾನ ಕಡು ವೈರಿಯಾಗಿದ್ದರೂ ಸ್ನೇಹ ಬಾಂಧವ್ಯವಿರಲಿ ಎನ್ನುವ ದೃಷ್ಟಿಯಿಂದ ವಾಜಪೇಯಿ ಅವರು ಬಸ್ ಪ್ರಯಾಣ ಮಾಡಿದರು ಎಂದು ಹೇಳಿದರು.ದೇಶವು ಆರ್ಥಿಕವಾಗಿ ಬೆಳೆಯಲು ರಸ್ತೆಗಳು ಬಹು ಮುಖ್ಯವಾಗುತ್ತವೆ. ಈ ಹಿನ್ನೆಲೆಯಲ್ಲಿ ವಾಜಪೇಯಿ ನೇತೃತ್ವದ ಸರ್ಕಾರದಲ್ಲಿ ರಾಷ್ಟ್ರೀಯ ಹೆದ್ದಾರಿಗಳನ್ನು ನಿರ್ಮಾಣ ಮಾಡಿದರು. ಅದರ ಫಲ ಎಂಬಂತೆ ಇಂದು ದೇಶ ಆರ್ಥಿಕವಾಗಿ ಸದೃಢವಾಗಿದೆ ಎಂದರು.
ವಿಧಾನ ಪರಿಷತ್ತಿನ ಮಾಜಿ ಸದಸ್ಯ ಎನ್.ಶಂಕರಪ್ಪ ಮಾತನಾಡಿದರು. ಬಿಜೆಪಿ ನಗರ ಮಂಡಲ ಅಧ್ಯಕ್ಷ ಊಟ್ಕೂರು ರಾಘವೇಂದ್ರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಿ.ಶಂಕರ ರೆಡ್ಡಿ, ಮುಖಂಡರಾದ ತ್ರಿವಿಕ್ರಮ ಜೋಶಿ, ಬಿ.ಗೋವಿಂದ, ಪಲುಗುಲ ನಾಗರಾಜ, ತಿಮ್ಮಪ್ಪ ಫಿರಂಗಿ, ನಾಗವೇಣಿ ಸಾಹುಕಾರ ಹಾಗೂ ಮತ್ತಿತರರಿದ್ದರು.