ಕ್ರೀಡಾಪಟುಗಳು ಕ್ರೀಡಾ ಸ್ಫೂರ್ತಿ ಮೆರೆಯಿಲಿ: ಬಸವರೆಡ್ಡಿ

KannadaprabhaNewsNetwork |  
Published : Feb 01, 2024, 02:00 AM IST
ಸುರಪುರದ ಪ್ರಭು ಕಾಲೇಜಿನ ಆವರಣದಲ್ಲಿ ರಾಜಾ ಕುಮಾರ ನಾಯಕ ಮತ್ತು ರಾಜಾ ರೂಪಕುಮಾರ ನಾಯಕ ಸ್ಮರಾಣರ್ಥ ರಾಜ್ಯಮಟ್ಟದ ಟೆನ್ನಿಸ್‌ಬಾಲ್ ಪಂದ್ಯಾವಳಿ ಹಮ್ಮಿಕೊಳ್ಳಲಾಗಿತ್ತು. ಕಾಂಗ್ರೆಸ್ ಜಿಲ್ಲಾಧ್ಯಕ್ಷ ಬಸವರೆಡ್ಡಿ ಪಾಟೀಲ್ ಚಾಲನೆ ನೀಡಿದರು. | Kannada Prabha

ಸಾರಾಂಶ

ಕ್ರೀಡೆಯಲ್ಲಿ ಸೋಲು ಗೆಲುವು ಸಾಮಾನ್ಯವಾಗಿದ್ದು, ಯಾವುದೇ ವೈಷ್ಯಮ್ಯವಿಲ್ಲದೆ ಸ್ನೇಹದಿಂದ ಆಟವಾಡಿ ಕ್ರೀಡಾ ಸ್ಫೂರ್ತಿ ಮೆರೆಯಬೇಕು.

ಕನ್ನಡಪ್ರಭ ವಾರ್ತೆ ಸುರಪುರ

ನಗರದ ಪ್ರಭು ಕಾಲೇಜಿನ ಆವರಣದಲ್ಲಿ ರಾಜಾ ಕುಮಾರ ನಾಯಕ ಮತ್ತು ರಾಜಾ ರೂಪಕುಮಾರ ನಾಯಕ ಸ್ಮರಾಣರ್ಥ ರಾಜ್ಯಮಟ್ಟದ ಟೆನ್ನಿಸ್‌ಬಾಲ್ ಪಂದ್ಯಾವಳಿ ಹಮ್ಮಿಕೊಳ್ಳಲಾಗಿತ್ತು.

ಇದಕ್ಕೆ ಚಾಲನೆ ನೀಡಿದ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಬಸವರೆಡ್ಡಿ ಪಾಟೀಲ್, ಕ್ರೀಡೆಯಲ್ಲಿ ಸೋಲು ಗೆಲುವು ಸಾಮಾನ್ಯವಾಗಿದ್ದು, ಯಾವುದೇ ವೈಷ್ಯಮ್ಯವಿಲ್ಲದೆ ಸ್ನೇಹದಿಂದ ಆಟವಾಡಿ ಕ್ರೀಡಾ ಸ್ಫೂರ್ತಿ ಮೆರೆಯಬೇಕು ಎಂದು ಕರೆ ನೀಡಿದರು.

ನಿವೃತ್ತ ಉಪನ್ಯಾಸಕ ವೇಣುಗೋಪಾಲ ನಾಯಕ ಜೇವರ್ಗಿ ಮಾತನಾಡಿ, ರಾಜಾ ಕುಮಾರ ಉತ್ತಮ ಕ್ರೀಡಾಪಟುವಾಗಿದ್ದರು. ಕ್ರೀಡೆಯೆಂದರೆ ಅಚ್ಚುಮೆಚ್ಚು. ರೂಪಕುಮಾರ ನಾಯಕ ಉತ್ತಮ ರಾಜಕೀಯ ಮತ್ತು ಕ್ರೀಡಾಸಕ್ತರಾಗಿದ್ದರು ಎಂದರು.

ಕೆಪಿಸಿಸಿಯ ಮರಿಗೌಡ ಹುಲಿಕಲ್ ಮಾತನಾಡಿದರು. ಬಿಇಓ ಯಲ್ಲಪ್ಪ ಕಾಡ್ಲೂರು, ಪೌರಾಯುಕ್ತ ಜೀವನ ಕಟ್ಟಿಮನಿ, ರಾಜಾ ವೇಣುಗೋಪಾಲ ನಾಯಕ, ರಾಜಾ ಕುಮಾರ ನಾಯಕ, ರಾಜಾ ವಾಸುದೇವ ನಾಯಕ, ಪ್ರಕಾಶ ಗುತ್ತೇದಾರ, ಬಸವರಾಜ ಜಮದ್ರಖಾನಿ, ಅಬ್ದುಲ ಗಫೂರ ನಗನೂರಿ, ಸೂಗರೇಶ ವಾರದ ಸೇರಿ ಇತರರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಸ್ತೆ ಅಪಘಾತ ಸೈಕಲ್‌ ಸವಾರ ಸಾವು
ವಿದ್ಯುತ್‌ ತೊಂದರೆ ಸರಿಪಡಿಸದಿದ್ದರೇ ಅಹೋರಾತ್ರಿ ಧರಣಿ