ಔಷಧಿ ಬಳಕೆಯ ಬಗ್ಗೆ ಕ್ರೀಡಾಪಟುಗಳಿಗೆ ಇರಲಿ ಜಾಗೃತೆ

KannadaprabhaNewsNetwork |  
Published : Aug 08, 2025, 01:02 AM IST
7ಡಿಡಬ್ಲೂಡಿ5ಕರ್ನಾಟಕ ಕಾಲೇಜು ಪ್ರವಾಸೋದ್ಯಮ ವಿಭಾಗದಲ್ಲಿ ನಡೆದ ಸಮಾರಂಭದಲ್ಲಿ ಡೋಪಿಂಗ್ ವಿರೋಧಿ ಜಾಗೃತಿ ಕಾರ್ಯಕ್ರಮದಲ್ಲಿ ಡಾ.ಕಿರಣ ಕುಲಕರ್ಣಿ ಮಾತನಾಡಿದರು. | Kannada Prabha

ಸಾರಾಂಶ

ಪ್ರಸ್ತುತ ಕ್ರೀಡಾ ಔಷಧಗಳ ತುರ್ತು ಬಳಕೆಯಾಗುತ್ತಿದೆ. ಹೀಗಾಗಿ ಕ್ರೀಡೆಗಳಲ್ಲಿ ಕೆಲವು ಔಷಧಿಗಳ ದುರುಪಯೋಗ, ಕ್ರೀಡಾಪಟುಗಳು, ತರಬೇತುದಾರರು ಮತ್ತು ಕ್ರೀಡಾ ವೈದ್ಯರ ನಿರ್ಲಕ್ಷ್ಯದಿಂದ ಹೆಚ್ಚಿನ ಪ್ರಮಾಣದಲ್ಲಿ ತಪ್ಪಾಗುವ ಸಂದರ್ಭಗಳಾಗುತ್ತಿವೆ. ಆದ್ದರಿಂದ ಔಷಧಗಳ ಬಳಕೆಯಲ್ಲಿ ಅರಿವು ಹೆಚ್ಚು ಅಗತ್ಯ.

ಧಾರವಾಡ: ಔಷಧಿಗಳ ಬಳಕೆಯ ಬಗ್ಗೆ ಕ್ರೀಡಾಪಟುಗಳು ಮತ್ತು ಕ್ರೀಡಾ ತರಬೇತುದಾರರು ಜಾಗರೂಕತೆಯಿಂದ ವರ್ತಿಸಬೇಕು ಎಂದು ಕ್ರೀಡಾ ವೈದ್ಯ ಡಾ. ಕಿರಣಕುಮಾರ್ ಕುಲಕರ್ಣಿ ಹೇಳಿದರು.

ನಗರದ ಕರ್ನಾಟಕ ಕಾಲೇಜು ಪ್ರವಾಸೋದ್ಯಮ ವಿಭಾಗದಲ್ಲಿ ಬಹು ಶಾಸ್ತ್ರೀಯ ವಿಕಾಸ ಸಂಶೋಧನಾ ಕೇಂದ್ರ (ಸಿ.ಎಂ.ಡಿ.ಆರ್), ಭಾರತ ಕ್ರೀಡಾ ಪ್ರಾಧಿಕಾರದ ಸಹಯೋಗದಲ್ಲಿ ಕ್ರೀಡಾಪಟುಗಳಿಗಾಗಿ ಡೋಪಿಂಗ್ ವಿರೋಧಿ ಜಾಗೃತಿಯಲ್ಲಿ ಅವರು ಪಾಲ್ಗೊಂಡು ಮಾತನಾಡಿದರು.

ಪ್ರಸ್ತುತ ಕ್ರೀಡಾ ಔಷಧಗಳ ತುರ್ತು ಬಳಕೆಯಾಗುತ್ತಿದೆ. ಹೀಗಾಗಿ ಕ್ರೀಡೆಗಳಲ್ಲಿ ಕೆಲವು ಔಷಧಿಗಳ ದುರುಪಯೋಗ, ಕ್ರೀಡಾಪಟುಗಳು, ತರಬೇತುದಾರರು ಮತ್ತು ಕ್ರೀಡಾ ವೈದ್ಯರ ನಿರ್ಲಕ್ಷ್ಯದಿಂದ ಹೆಚ್ಚಿನ ಪ್ರಮಾಣದಲ್ಲಿ ತಪ್ಪಾಗುವ ಸಂದರ್ಭಗಳಾಗುತ್ತಿವೆ. ಆದ್ದರಿಂದ ಔಷಧಗಳ ಬಳಕೆಯಲ್ಲಿ ಅರಿವು ಹೆಚ್ಚು ಅಗತ್ಯ ಎಂದರು.

ದೇಹದ ಮೇಲೆ ಅಡ್ಡಪರಿಣಾಮ: ಅವೈಜ್ಞಾನಿಕ ವಾಗಿ ಔಷಧಿಗಳ ಬಳಕೆಯಿಂದ ದೇಹದ ಮೇಲೆ ಅಡ್ಡಪರಿಣಾಮ ಬೀರಬಹುದು ಎಂದ ಅವರು, ಇತ್ತೀಚಿನ ದಿನಗಳಲ್ಲಿ ಕ್ರೀಡೆಗಳಲ್ಲಿ ಡೋಪಿಂಗ್‌ನಲ್ಲಿ ಭಾರತ ಮುಂಚೂಣಿ ಸ್ಥಾನದಲ್ಲಿದೆ. ಅದಕ್ಕಾಗಿ ಔಷಧಿಗಳ ಬಳಕೆ‌‌ ಬಗ್ಗೆ ಕ್ರೀಡಾಪಟು, ತರಬೇತುದಾರ ಮತ್ತು ಕ್ರೀಡಾ ವೈದ್ಯನಿಗೆ ಜ್ಞಾನ ಅಗತ್ಯವಿದೆ ಎಂದರು.

ಕ್ರೀಡಾಪಟುಗಳಿಗೆ ನಿಷೇಧಿತ ಪದಾರ್ಥಗಳೊಂದಿಗೆ ಸರಳ ಔಷಧಿಗಳನ್ನು ಸೇವಿಸಬೇಕು. ಆಗಲ ಡೋಪಿಂಗ್‌ಗೆ ಬಲಿಯಾಗುವುದು ತಪ್ಪಲಿದೆ. ಕ್ರೀಡಾಪಟುಗಳಿಗೆ ನಿಷೇಧಿಸಲಾದ ಔಷಧಿಗಳ ಬಳಕೆಯ ಬಗ್ಗೆ ಮಾಹಿತಿ ಇರಬೇಕು. ಅವುಗಳಿಂದ ದೂರವಿರುವುದೊಂದೇ ಕ್ರೀಡಾಪಟುವಿನ ಏಕೈಕ ಜವಾಬ್ದಾರಿ. ಪ್ರಸ್ತುತ ಭಾರತ ಸರ್ಕಾರ‌ ಕ್ರೀಡಾಪಟುಗಳಿಗೆ ವಿಶೇಷ ತಂತ್ರಾಂಶ ರೂಪಿಸಿದ್ದು, ಕ್ರೀಡಾಪಟುಗಳು ‌ಬಳಕೆ ಮಾಡುವ ಔಷಧಿಗಳ ನಿಖರವಾದ ಮಾಹಿತಿಯನ್ನು ಒದಗಿಸುತ್ತದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಸಿಎಂಡಿಆರ್‌ನ ನಿರ್ದೇಶಕ ಪ್ರೊ. ಬಸವಪ್ರಭು ಜಿರ್ಲಿ, ಆರೋಗ್ಯಕರ ದೇಹ ಮತ್ತು ಮನಸ್ಸನ್ನು ಕಾಪಾಡಿಕೊಳ್ಳುವುದರ ಜತೆಗೆ ಒಳ್ಳೆಯದು ಮತ್ತು ಕೆಟ್ಟದ್ದರ ನಡುವೆ ಆಯ್ಕೆ ಮಾಡುವ ಮಹತ್ವವನ್ನು ಪರಿಗಣಿಸಿ ಔಷಧಿಗಳನ್ನು ಬಳಕೆ ಮಾಡಬೇಕು ಎಂದರು.

ಸಿ.ಎಂ.ಡಿ.ಆರ್ ಪ್ರಾಧ್ಯಾಪಕ ಡಾ. ಜೈ‌ ಪ್ರಭಾಕರ್, ಪ್ರವಾಸೋದ್ಯಮ ವಿಭಾಗದ ಸಂಯೋಜಕ ಡಾ. ಜಗದೀಶ್ ಕೆ, ಭಾರತೀಯ ಕ್ರೀಡಾ ಪ್ರಾಧಿಕಾರದ ಉಸ್ತುವಾರಿ ರಾಮ್ ಬುಡಕಿ, ಡಾ. ಪ್ರತೀಕ್ ಮಾಲಿ, ದತ್ತ ನಿರಂಜನ, ಕ್ರೀಡಾ ತರಬೇತುದಾರರಾದ ಶಿವಪ್ಪ ಪಾಟೀಲ, ಶಾಮ್ಲಾ ಪಾಟೀಲ ಸೇರಿದಂತೆ ಹಲವರಿದ್ದರು.

PREV

Recommended Stories

ದೊಡ್ಡೆತ್ತಿನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ₹6 ಲಕ್ಷ ಲಾಭ: ವಸಂತಕುಮಾರ್‌
ಕೃಷ್ಣಮೂರ್ತಿಪುರಂ ಅಭಿನವ ಮಂತ್ರಾಲಯದಲ್ಲಿ ರಾಯರ ಆರಾಧನೆ