ಮಹಿಳೆ ಮಾನಭಂಗಕ್ಕೆ ಯತ್ನ, ಅಪರಾಧಿಗೆ 4 ಜೈಲು

KannadaprabhaNewsNetwork |  
Published : Feb 23, 2025, 12:32 AM ISTUpdated : Feb 23, 2025, 12:33 AM IST
ಮಹಿಳೆ ಮಾನಭಂಗಕ್ಕೆ ಪ್ರಯತ್ನ, ಕೊಲೆ ಯತ್ನ, ಆರೋಪಿಗೆ 4ವಷ೯ಸೆರೆವಾಸ | Kannada Prabha

ಸಾರಾಂಶ

ಮಹಿಳೆಯೊಬ್ಬರ ಜೊತೆ ಅನುಚಿತವಾಗಿ ವರ್ತಿಸಿ, ಮಾನಭಂಗಕ್ಕೆ ಯತ್ನಿಸಿದ ಆರೋಪ ಸಾಬೀತಾದ ಹಿನ್ನೆಲೆ ಆರೋಪಿಗೆ ಅಪರ ಸಿವಿಲ್ ನ್ಯಾಯಾಧೀಶರು 4 ವರ್ಷಗಳ ಸೆರೆವಾಸ, 5 ಸಾವಿರ ದಂಡ ವಿಧಿಸಿ ಮಹತ್ವದ ತೀರ್ಪು ನೀಡಿದ್ದಾರೆ.

ಕೊಳ್ಳೇಗಾಲ: ಮಹಿಳೆಯೊಬ್ಬರ ಜೊತೆ ಅನುಚಿತವಾಗಿ ವರ್ತಿಸಿ, ಮಾನಭಂಗಕ್ಕೆ ಯತ್ನಿಸಿದ ಆರೋಪ ಸಾಬೀತಾದ ಹಿನ್ನೆಲೆ ಆರೋಪಿಗೆ ಅಪರ ಸಿವಿಲ್ ನ್ಯಾಯಾಧೀಶರು 4 ವರ್ಷಗಳ ಸೆರೆವಾಸ, 5 ಸಾವಿರ ದಂಡ ವಿಧಿಸಿ ಮಹತ್ವದ ತೀರ್ಪು ನೀಡಿದ್ದಾರೆ.

ಮೈಸೂರು ಜಿಲ್ಲೆ, ಸಿದ್ದಲಿಂಗಪುರ ಗ್ರಾಮದ ವಾಸಿ ಬಸ್ ಕ್ಲಿನರ್ ಕಾರ್ತಿಕ್ ಎಂಬಾತ ಸೆರೆವಾಸಕ್ಕೆ ಗುರಿಯಾದ ಆರೋಪಿ. ಈತ ಕೊಳ್ಳೇಗಾಲದ 2019 ರ ಅಕ್ಟೋಬರ್ 26 ರಂದು ಜೆ ಎಸ್ ಎಸ್ ಕಾಲೇಜು ಸೇತುವೆ ಸಮೀಪದಲ್ಲಿ ಜಯಲಕ್ಷ್ಮಿ ಎಂಬ ಮಹಿಳೆಯನ್ನು ಕೈ ಹಿಡಿದು ಎಳೆದಾಡಿ ಅನುಚಿತವಾಗಿ ನಡೆಸುಕೊಂಡು, ಅತ್ಯಾಚಾರಕ್ಕೆ ಯತ್ನಿಸಿ ಮಹಿಳೆಯನ್ನು ಕೊಲೆ ಮಾಡಲು ಪ್ರಯತ್ನಿಸಿದ್ದಾನೆ. ಈ ಸಂಬಂಧ ಮಹಿಳೆ ಪಟ್ಟಣ ಠಾಣೆಗೆ ದೂರು ನೀಡಿದ ಹಿನ್ನೆಲೆ ಆರೋಪಿಯನ್ನು ಬಂಧಿಸಿ ಪ್ರಕರಣ ದಾಖಲಿಸಿಕೊಂಡು, ಅಂದಿನ ಪಿಎಸ್‌ಐ ರಾಜೇಂದ್ರ ಅವರು ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು. ಈ ಸಂಬಂಧ ಸರ್ಕಾರಿ ಅಭಿಯೋಜಕರಾದ ಮಂಜುನಾಥ್ ಅವರು ಆರೋಪಿ ವಿರುದ್ದವಾಗಿ ವಾದ ಮಂಡಿಸಿದ್ದರು. ಪ್ರಕರಣ ಕೈಗೆತ್ತಿಕೊಂಡ ಅಪರ ಸಿವಿಲ್ ನ್ಯಾಯಾಧೀಶರಾದ ಟಿ ಸಿ ಶ್ರೀಕಾಂತ್ ಅವರು ಕೂಲಂಕುಷ ವಿಚಾರಣೆ ನಡೆಸಿ ಆರೋಪ ಸಾಬೀತಾದ ಹಿನ್ನೆಲೆ ಆರೋಪಿಗೆ 4 ವರ್ಷಗಳ ಕಾಲ ಸೆರೆವಾಸ ಮತ್ತು 5 ಸಾವಿರ ದಂಡ ವಿಧಿಸಿ ಮಹತ್ವದ ತೀರ್ಪು ನೀಡಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಉಪಕದನದ ಬಹಿರಂಗ ಪ್ರಚಾರ ಅಂತ್ಯ
ಇಂದಿನಿಂದ ಗ್ರಾಮದೇವತೆ ಶ್ರೀಪಟ್ಟಲದಮ್ಮನ ಜಾತ್ರಾ ಮಹೋತ್ಸವ