ಕನ್ನಡಪ್ರಭ ವಾರ್ತೆ ಅಫಜಲ್ಪುರ
ಅವರು ತಾಲೂಕಿನ ಬಳೂರ್ಗಿ ಗ್ರಾಮದ ಸರ್ಕಾರಿ ಆಯುರ್ವೇದ ಆಸ್ಪತ್ರೆಯಲ್ಲಿ ಜರುಗಿದ ಉಚಿತ ಆರೋಗ್ಯ ಶಿಬಿರ ಉದ್ಘಾಟಿಸಿ ಮಾತನಾಡಿ, ಪೂರ್ವಜರು ನೈಸರ್ಗಿಕವಾಗಿ ದೊರೆಯುವ ಔಷಧ ಗುಣಗಳುಳ್ಳ ವನಸ್ಪತಿಗಳನ್ನು ಸರಿಯಾಗಿ ಬಳಸಿಕೊಳ್ಳುವ ಮೂಲಕ ನೂರಾರು ವರ್ಷಗಳ ಕಾಲ ಬದುಕಿ ಬಾಳುತ್ತಿದ್ದರು. ಈಗ ಮತ್ತೆ ಅದೇ ಪದ್ಧತಿಯು ಹೆಚ್ಚು ಜನಪ್ರಿಯವಾಗುತ್ತಿದೆ. ನಿಸರ್ಗ ಚಿಕಿತ್ಸೆ ಎಂದೇ ಕರೆಯಲ್ಪಡುವ ಆಯುರ್ವೇದ ಪದ್ಧತಿಯು ದೇಶಿ ಸಂಸ್ಕೃತಿಯ ಒಂದು ಭಾಗವಾಗಿದೆ. ಹಿಂದಿನ ವೈಭವ ಮತ್ತೆ ಮರುಕಳಿಸುವತ್ತ ಆಯುರ್ವೇದಕ್ಕೆ ಮತ್ತೆ ಹೆಚ್ಚಿನ ಮಹತ್ವದ ದೊರೆಯುತ್ತಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಡಾ. ಮನೋರಮಾ ಕಕ್ಕಳಮೇಲಿ ಯೋಗ ಶಿಕ್ಷಕಿ ಪ್ರಭಾವತಿ ಮೇತ್ರಿ ಪ್ರತಿಭಾ ಮಹಿಂದ್ರಕರ ವಿಜಯಕುಮಾರ ಪಾಟೀಲ ನೆಹರು ಮಠಪತಿ ಗೌಡಪ್ಪ ಶೈಲಜಾ ಸುಪ್ರೀತ ಹಸರಗುಂಡಗಿ ಸೇರಿದಂತೆ ಇತರರಿದ್ದರು.