ರಾಮನಗರ: ಬಿಡದಿ ಹೋಬಳಿಯ ಮಂಡಲಹಳ್ಳಿಯಲ್ಲಿ ಬಿಡದಿ ಟೌನ್ ಶಿಪ್ ಯೋಜನೆ ಭೂಸ್ವಾಧೀನಕ್ಕಾಗಿ ಜೆಎಂಸಿ ಸರ್ವೇ ವೇಳೆ ಸಂಭವಿಸಿದ ಗಲಾಟೆ ಸೇರಿದಂತೆ ಹಲವು ಪ್ರಕರಣಗಳಲ್ಲಿ ಆರೋಪಿತರಾಗಿದ್ದ 39 ರೈತರಿಗೆ ಇಲ್ಲಿನ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.
ಜೆಎಂಎಫ್ ನ್ಯಾಯಾಲಯ ವಿಚಾರಣೆ ನಡೆಸಿ ಕ್ರಿಮಿನಲ್ ಸಂಖ್ಯೆ 995/ 2026ರ ಪ್ರಕರಣದ 13 ಹಾಗೂ ಕ್ರಿಮಿನಲ್ ಸಂಖ್ಯೆ 1002/2026 ಪ್ರಕರಣದ 15 ರೈತರಿಗೆ ಜಾಮೀನು ಮಂಜೂರು ಮಾಡಿತು. ಮತ್ತೊಂದೆಡೆ ಜಿಲ್ಲಾ ಸತ್ರ ನ್ಯಾಯಾಲಯ ಸಿಆರ್ 239/2026ರ ಪ್ರಕರಣದ 11 ಆರೋಪಿತ ರೈತರಿಗೆ ನಿರೀಕ್ಷಣಾ ಜಾಮೀನು ನೀಡಿದೆ. ಮೊಕದ್ದಮೆ ಸಂಖ್ಯೆ 240 / 2026ರಲ್ಲಿ ಯಾವುದೇ ಆರೋಪಿಗಳು ಸಿಗದ ಕಾರಣ ಈ ಪ್ರಕರಣವೂ ದೋಷಾರೋಪಣ ಪಟ್ಟಿ ಹಂತದಲ್ಲಿ ಇಡಲಾಗಿದೆ.
ಕಳೆದ ಜುಲೈ 13ರಂದು ಮಂಡಲಹಳ್ಳಿ ಗಲಾಟೆ ಸಂಬಂಧ ಕಂದಾಯ ಇಲಾಖೆ ವಾಹನ ಚಾಲಕ ಮಹಮ್ಮದ್ ಸಮೀರ್ ಹಾಗೂ ರಾಮನಗರ ಗ್ರಾಮಾಂತರ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ಮುರಳಿ ನೀಡಿದ ಪ್ರತ್ಯೇಕ ದೂರಿನ ಮೇರೆಗೆ 11ಕ್ಕೂ ಹೆಚ್ಚು ರೈತರ ಮೇಲೆ ಸರ್ಕಾರಿ ಕರ್ತವ್ಯಕ್ಕೆ ಅಡ್ಡಿ, ಶಾಂತಿ ಭಂಗ, ಕೊಲೆ ಯತ್ನ, ದೈಹಿಕ ಹಲ್ಲೆಯಂತಹ ಆರೋಪದಡಿ ಬಿಡದಿ ಠಾಣೆ ಪೊಲೀಸರು ದೂರು ದಾಖಲಿಸಿಕೊಂಡಿದ್ದರು.ಕಾರು ಚಾಲಕ ನೀಡಿದ ದೂರಿನ ಅನ್ವಯ ಬಿಡದಿ ಟೌನ್ಶಿಪ್ ಯೋಜನೆ ವಿರೋಧಿಸಿ ನಡೆಯುತ್ತಿರುವ ಹೋರಾಟದಲ್ಲಿ ಮುಂಚೂಣಿಯಲ್ಲಿರುವ ಪ್ರಕಾಶ್, ನಾಗರಾಜ್, ಕೃಷ್ಣ, ಟಿ.ಯಶವಂತ್, ರೇವಣ್ಣ, ಜಯಮ್ಮ, ಭಾಗ್ಯ, ಮೋಹನ್, ವರಲಕ್ಷ್ಮಿ, ಹರೀಶ್ ಹಾಗೂ ಇತರರ ವಿರುದ್ಧ BNS 189(2), 126(2), 352, 351(2), 109(1), 115(2), 118(1), 132, 133, 74, 190 ಅಡಿ ಪ್ರಕರಣ ದಾಖಲಿಸಲಾಗಿತ್ತು.
ಬಾಕ್ಸ್.........
ರಾಮನಗರ: ಬಿಡದಿಯ ರಾಜಕೀಯ ಪ್ರೇರಿತ ಸುಳ್ಳು ಎಫ್ಐಆರ್ ಪ್ರಕರಣದಲ್ಲಿ ರಾಮನಗರ ನ್ಯಾಯಾಲಯವು ಸ್ಥಳೀಯ 11 ರೈತರು ಹಾಗೂ ನಿವಾಸಿಗಳಿಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಿರುವುದು ನಮ್ಮ ಕಾನೂನು ಹೋರಾಟಕ್ಕೆ ಸಿಕ್ಕ ದೊಡ್ಡ ಜಯ ಎಂದು ಜೆಡಿಎಸ್ ಯುವ ಘಟಕ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ತಿಳಿಸಿದ್ದಾರೆ.
27ಕೆಆರ್ ಎಂಎನ್ 2.ಜೆಪಿಜಿ