ಕನ್ನಡಪ್ರಭ ವಾರ್ತೆ ಶಿಕಾರಿಪುರ
ಸಾಲೂರು ಮಠದ ಸೈನಾ ಭಗತ್ ಮಹಾರಾಜ್ ಸ್ವಾಮೀಜಿ ದಿವ್ಯ ಸಾನಿಧ್ಯ ವಹಿಸಿ ಮಹಾಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಜನಾಂಗದಲ್ಲಿ ಏಕತೆ, ಒಗ್ಗಟ್ಟಿನ ಕೊರತೆ ಇದೆ ಪ್ರತಿಯೊಬ್ಬರೂ ಶಿಕ್ಷಣಕ್ಕೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಬೇಕಾಗಿದೆ. ಇತರೆ ಜನಾಂಗದವರು ಶೈಕ್ಷಣಿಕವಾಗಿ ಪ್ರಗತಿ ಹೊಂದಿರು ವುದನ್ನು ನೋಡಿ ಸಮುದಾಯದ ಪ್ರತಿಯೊಬ್ಬರೂ ಜಾಗೃತರಾಗಬೇಕು ಎಂದ ಅವರು ನೌಕರರು ಸಮಾಜದ ಹಿತಾಸಕ್ತಿಯನ್ನು ಅರಿತು ತೊಡಕುಗಳನ್ನು ತಿದ್ದಿ ಸರಿಪಡಿಸುವ ಜವಾಬ್ದಾರಿಯನ್ನು ನಿರ್ವಹಿಸುವಂತೆ ತಿಳಿಸಿದರು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಸಂಸ್ಥಾಪಕ ಅಧ್ಯಕ್ಷ ಪರಮೇಶ್ ನಾಯ್ಕ ಮಾತನಾಡಿ, ಸೊಸೈಟಿಯಲ್ಲಿ ಎಫ್ಡಿಆರ್ ಡಿ ಪಿಗ್ಮಿ ಹಾಗೂ ಬೇಟಿ, ಬೇಟಾ ಪಡಾವೋ ಘರ್ ಬಡಾವೋ ಈ ರೀತಿಯ ಹಲವು ಯೋಜನೆಗಳು ಇವೆ. ಈ ಯೋಜನೆಯಲ್ಲಿ ಆರ್ಥಿಕ ವಹಿವಾಟು ನಡೆಸಿ , ತಾಲೂಕಿನಲ್ಲಿ ಸಂಘವನ್ನು ಹೆಮ್ಮರವಾಗಿ ಬೆಳೆಸೋಣ ಸಂಘದಿಂದ ಮುಂದಿನ ದಿನಗಳಲ್ಲಿ ಷೇರುದಾರರಿಗೆ ರೂ.2 ಲಕ್ಷದವರೆಗೆ ಸಾಲ ಸೌಲಭ್ಯ ನೀಡಲಾಗುವುದು ಎಂದು ತಿಳಿಸಿದರು .ಉಪನ್ಯಾಸಕ ಡಾ.ಎಚ್ ಓಂಕಾರ್ ನಾಯ್ಕ್ ಮಾತನಾಡಿ, ತಾಲೂಕಿನಲ್ಲಿ ಬಂಜಾರ ಜನಾಂಗ ಜನಸಂಖ್ಯೆಯಲ್ಲಿ ದೊಡ್ಡದಾಗಿದ್ದು, ಜನಾಂಗದ ನೌಕರರ ಸಹಾಯದಿಂದ ನೌಕರರ ಸಂಘ ಪ್ರಾರಂಭಿಸಿ ಆರು ವರ್ಷ ಕಳೆದಿದೆ.2023-24 ನೇ ಸಾಲಿನಲ್ಲಿ ಅಂದಾಜು ರೂ.80 ಲಕ್ಷ ಆರ್ಥಿಕ ವಹಿವಾಟು ನಡೆಸಿ ಜನಾಂಗದ ಗೌರವವನ್ನು ಹೆಚ್ಚಿಸಲಾಗಿದೆ.ನಮ್ಮಿಂದ ಸಂಘ,ಸಂಘದಿಂದ ನಾವು ಈ ಸಹಕಾರಿ ತತ್ವದಡಿ ನಾವೆಲ್ಲರೂ ಸಂಘದಲ್ಲಿ ಬಂಡವಾಳ ತೊಡಗಿಸಿ ಮುಂದಿನ ದಿನಗಳಲ್ಲಿ ಅತ್ಯುತ್ತಮ ಸಾಧನೆ ಮೂಲಕ ಸಂಘ ಗುರುತಿಸಿಕೊಳ್ಳುವಂತೆ ಆಗಲಿ.ಆಡಳಿತ ಮಂಡಳಿ ಸದಸ್ಯರು ನಿಷ್ಠೆ ಪ್ರಾಮಾಣಿಕತೆ ವಿಶ್ವಾಸದಿಂದ ಕರ್ತವ್ಯ ನಿರ್ವಹಿಸಿದಲ್ಲಿ ಸಾಧನೆ ಮಾಡಲು ಸಾದ್ಯ ಎಂದು ತಿಳಿಸಿದರು.
ಪ್ರಾಂಶುಪಾಲ ಠಾಕ್ರ್ಯಾನಾಯ್ಕ ಮಾತನಾಡಿ, ಸಾಧನೆಗೈದ ಜನಾಂಗದ ನೌಕರರನ್ನು ಗುರುತಿಸಿ ಗೌರವಿಸುವಂತಹ ಕೆಲಸ ಮಾಡುತ್ತಿದ್ದಾರೆ ಎಂದು ಪ್ರಶಂಸಿಸಿದರು.