ಕನ್ನಡಪ್ರಭ ವಾರ್ತೆ ರಾಯಚೂರು / ಸಿಂಧನೂರು
ರಾಯಚೂರಿನ ಫೆಡರಲ್ ಬ್ಯಾಂಕ್ ಮುಂದೆ ಕರ್ನಾಟಕ ಪ್ರದೇಶ ಬ್ಯಾಂಕ್ ಎಂಪ್ಲಾಯಿಸ್ ಫೇಡರೇಶನ್ನ ಮತು ಯುಎಫ್ಬಿಯು ಸಂಘಟನೆ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರೆ ಸಿಂಧನೂರಿನ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಮುಖ್ಯಶಾಖೆಯ ಮುಂಭಾಗದಲ್ಲಿ ಬ್ಯಾಂಕ್ ಕಾರ್ಮಿಕ ಸಂಘಟನೆಗಳ ಸಂಯುಕ್ತ ವೇದಿಕೆಯು ನೇತೃತ್ವದಲ್ಲಿ ಮುಷ್ಕರ ನಡೆಯಿತು.
ವಾರದಲ್ಲಿ 2 ದಿವಸ ರಜೆ ನೀಡಬೇಕು, 5 ದಿನ ಮಾತ್ರ ಕರ್ತವ್ಯ ದಿನಗಳೆಂದು ಘೋಷಿಸಬೇಕು, ಹಳೆಯ ನಿವೃತ್ತಿ ವೇತನ ಪದ್ಧತಿಯನ್ನು ಅನುಷ್ಠಾನ ಮಾಡಬೇಕು, ಬ್ಯಾಂಕ್ಗಳ ಲಾಭಕ್ಕನುಗುಣವಾಗಿ ಸ್ಫೂರ್ತಿದಾಯಕ ಸಂಯೋಜಿತ ಪ್ರೋತ್ಸಾಹ ಧನವನ್ನು ಆಡಳಿತ ಮಂಡಳಿಯ ನೌಕರರು ಸೇರಿದಂತೆ ಎಲ್ಲಾ ಕಾರ್ಮಿಕರಿಗೆ ಸಮಾನವಾಗಿ ಪರಿಗಣಿಸಬೇಕು ಎಂದು ಒತ್ತಾಯಿಸಿದರು.ಬ್ಯಾಂಕ್ಗಳನ್ನು ವಿಲೀನ ಮಾಡುವ ಪ್ರಕ್ರಿಯೆ ನಿರಂತರವಾಗಿ ಸಾಗಿದ್ದು, ಇದರಿಂದ ಉದ್ಯೋಗ ಕಡಿತವಾಗುತ್ತದೆ. ಲಕ್ಷೋಪಲಕ್ಷ ಜನರಿಗೆ ಉದ್ಯೋಗ ಇಲ್ಲದಂತಾ ಗುತ್ತದೆ. ಹಿಂದೆ ಒಬ್ಬ ಕಾರ್ಮಿಕ 100 ಜನರಿಗೆ ಸೇವೆ ಒದಗಿಸಿದರೆ, ಈಗ ಒಬ್ಬ ವ್ಯಕ್ತಿ 200 ಜನರಿಗೆ ಸೇವೆ ಒದಗಿಸಬೇಕಾಗಿದೆ. ಬ್ಯಾಂಕಿಂಗ್ನ ಕರ್ತವ್ಯ ಅವಧಿಗಿಂತ ಹೆಚ್ಚಿನ ಅವಧಿ ಕೆಲಸ ಮಾಡಿದರೆ ಅದಕ್ಕೆ ಪ್ರತ್ಯೇಕ ಭತ್ಯೆಯನ್ನು ಕೊಡಬೇಕು. ಹೀಗೆ ಹಲವು ಪ್ರಮುಖ ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ ಚಳವಳಿ ನಡೆಸುತ್ತಿ ರುವುದಾಗಿ ಹೇಳಿದರು.
----