- ದೇಶದೆಲ್ಲೆಡೆ ಶಾಂತಿ ನೆಮ್ಮದಿ ನೆಲಸಲು ಬಸವಾದಿ ಶರಣರ ತತ್ವಗಳು, ಸಂದೇಶಗಳು ಆದರ್ಶ: ದಿನೇಶ ಕೆ. ಶೆಟ್ಟಿ - - -
ಬ್ರಹ್ಮಾಂಡದ ಕತ್ತಲೆಯನ್ನು ಓಡಿಸುವ ಶಕ್ತಿ ಸೂರ್ಯನಿಗಿದೆ. ಅದೇ ರೀತಿ ಈ ಸಮಾಜದಲ್ಲಿನ ಕತ್ತಲು ಎಂಬ ಮೂಢನಂಬಿಕೆ, ಅಜ್ಞಾನ, ಜಾತಿಯತೆ ಎಂಬ ಕತ್ತಲು ಇತ್ತು. ಈ ರೀತಿಯಾದ ಅನೇಕ ಸಮಸ್ಯೆಗಳು ಇದ್ದವು. ಇಂತಹ ಜಗತ್ತಿನ ಸಮಸ್ಯೆ ಎನ್ನುವ ಕತ್ತಲನ್ನು ಹೊಡೆದೋಡಿಸಿ ಇಡೀ ಜಗತ್ತಿಗೆ ಜ್ಞಾನದ ದೀಪವನ್ನು ಹಚ್ಚಿದರು. ಈ ಹಿನ್ನೆಲೆ ಬಸವಣ್ಣ ಅವರಿಗೆ ಬ್ರಿಟಿಷರು ಜಗಜ್ಯೋತಿ ಬಸವೇಶ್ವರ ಎಂದು ಬಿರುದು ನೀಡಿದರು ಎಂದು ವಿರಕ್ತ ಮಠದ ಡಾ.ಬಸವಪ್ರಭು ಸ್ವಾಮೀಜಿ ಹೇಳಿದರು.
ನಗರದ ಪಿ.ಜೆ. ಬಡಾವಣೆಯ ವನಿತಾ ಸಮಾಜದಿಂದ ಅಮೃತಾನಂದಮಯಿ ಶಾಲೆವರೆಗೆ ಭಾನುವಾರ ಬಸವ ಕೇಂದ್ರ, ಶಿವಯೋಗಾಶ್ರಮ ಟ್ರಸ್ಟ್, ಲಿಂಗಾಯತ ತರುಣ ಸಂಘ, ಯೋಗ ಬಳಗದ ಸಹಯೋಗದಲ್ಲಿ 114ನೇ ವರ್ಷದ ಬಸವ ಜಯಂತ್ಯುತ್ಸವ ಅಂಗವಾಗಿ ನಡೆದ 6ನೇ ದಿನದ ಬಸವ ಪ್ರಭಾತ್ ಪೇರಿಯಲ್ಲಿ ಭಾಗವಹಿಸಿ ಶ್ರೀಗಳು ಮಾತನಾಡಿದರು.ಬಸವ ಜಯಂತಿ ಎಂದರೆ ಮನೆಯಲ್ಲಿರುವ ಎತ್ತುಗಳಿಗೆ ಅಲಂಕಾರ ಮಾಡಿ ಪೂಜೆ ಸಲ್ಲಿಸಿ ಸಂಜೆ ಮೆರವಣಿಗೆ ಮಾಡುತ್ತಿದ್ದರು. ಬಸವಣ್ಣ ಎಂದರೆ ಎತ್ತು, ನಂದಿ ವಿಗ್ರಹ ಅಲ್ಲ. ಸಮಾಜದಲ್ಲಿ ಸಂಕಷ್ಟದಲ್ಲಿದ್ದ ಎಲ್ಲರನ್ನೂ ಮೇಲಕ್ಕೆತ್ತಿದ ಮಹಾನ್ ವ್ಯಕ್ತಿ. ಹಿಂದೆ ಮೇಲು ಕೀಳು, ಗರಿಷ್ಠ ಕನಿಷ್ಠ, ಲಿಂಗಬೇಧ, ಅಸ್ಪೃಶ್ಯತೆ, ಜಾತಿಯತೆ ಇತ್ತು. ಈ ರೀತಿಯ ತಾರತಮ್ಯವನ್ನು ಬಸವಣ್ಣನವರು ಯಾರು ಅಂಗದ ಮೇಲೆ ಲಿಂಗವನ್ನು ಧರಿಸುತ್ತಾರೋ, ಧರಿಸಿದ ಮೇಲೆ ಮಾನವರೆಲ್ಲರೂ ಸರಿಸಮಾನರು ಎಂದರು. ಸಮ ಸಮಾಜವನ್ನು ಕಟ್ಟಿದ ದಾರ್ಶನಿಕರೆಂದರೆ ಅದು 12ನೇ ಶತಮಾನದ ಜಗಜ್ಯೋತಿ ಬಸವಣ್ಣನವರು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಉಪನ್ಯಾಸಕಿ ಲತಿಕಾ ದಿನೇಶ ಶೆಟ್ಟಿ, ಕೆ.ಪಿ.ರಾಜೇಶ್ವರಿ, ಪಾಲಿಕೆ ಮಾಜಿ ಸದಸ್ಯ ಎ.ನಾಗರಾಜ, ಕಣಕುಪ್ಪಿ ಮುರುಗೇಶಪ್ಪ, ಹಾಸಬಾವಿ ಕರಿಬಸಪ್ಪ, ಲಂಬಿ ಮುರುಗೇಶ, ವಿಜಯ ಜಾಧವ್, ಕೆ.ಕರಿಬಸಪ್ಪ, ಚನ್ನಬಸವ ಶೀಲವಂತ್, ಮಹಾಲಿಂಗೇಶ, ಯುವರಾಜ್, ಅಕ್ಕಮ್ಮ, ಯೋಗ ಬಳಗದ ಪ್ರಕಾಶ, ಮಹಾಂತೇಶ, ರೇವಣಸಿದ್ದಯ್ಯ ಹಿರೇಮಠ, ಬೇಕರಿ ಕೊಟ್ರೇಶ, ಉತ್ತಂಗಿ ವೀರಣ್ಣ, ಕೆ.ಜೆ.ನಾಗರಾಜ, ಉತ್ತಂಗಿ ಪ್ರಕಾಶ, ಜವಳಿ ಜಯಣ್ಣ, ನಿರಂಜನ, ಶೋಭಾ ಕುರ್ಡೆಕರ್, ಬಕ್ಕೇಶ್ವರ, ವಿರಕ್ತಮಠದ ಶಾಲೆ ಶಿಕ್ಷಕರು, ಮಕ್ಕಳು ಇದ್ದರು.
-19ಕೆಡಿವಿಜಿ36, 37: