ಕನ್ನಡಪ್ರಭ ವಾರ್ತೆ ಹೊಸದುರ್ಗ
ಪಟ್ಟಣದ ಕುಂಚಿಟಿಗ ಮಹಾಸಂಸ್ಥಾನ ಮಠದಲ್ಲಿ ನಡೆದ 23ನೇ ವರ್ಷದ 10ನೇ ತಿಂಗಳ ಸುಜ್ಞಾನ-ಸಂಗಮ ಹಾಗೂ ವಾಲ್ಮೀಕಿ ಜಯಂತಿ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿ ಮಾತನಾಡಿದರು.
ಬಸವಣ್ಣ ದಲಿತೋದ್ಧಾರಕ ಸಮಾನತೆಯ ಹರಿಕಾರ, ಸಹಬಾಳ್ವೆಯ ಪ್ರತೀಕ ಸೌಹಾರ್ದತೆಯ ಸಂಕೇತ ಕಾಯಕವೇ ಕೈಲಾಸ ಎಂಬ ಮಂತ್ರವನ್ನು ನೀಡಿದ ಕಾರುಣಿಕ ಪುರುಷ ಆಚಾರವೇ ಸ್ವರ್ಗ ಅನಾಚಾರವೇ ನರಕ ಎಂಬ ತತ್ವ ಬೋಧಿಸಿದ ತತ್ವಜ್ಞಾನಿ ಮಹಿಳಾ ಸಬಲೀಕರಣದ ಕಾರಣಿಕರ್ತ ಸರ್ವರು ಸಮಾನರು ಎಂದು ಸಾರಿದ ಸಮ ಸಮಾಜದ ಕನಸನ್ನು ನನಸು ಮಾಡಿದ ನುಡಿದಂತೆ ನಡೆದು ತೋರಿದ ಅದ್ಭುತ ದೇವಮಾನವ , ಮಾನವನನ್ನು ಮಹದೇವನನ್ನಾಗಿಸಿದ ಮರಣವನ್ನು ಮಹಾನವಮಿ ಎಂದು ಭೋದಿಸಿದ ಪ್ರಬುದ್ಧ ಚಿಂತಕ ಬಸವಣ್ಣ ಅಂತಹ ಆದರ್ಶ ಪುರುಷರ ದಾರಿಯಲ್ಲಿ ಸಂಚರಿಸುವ ಮೂಲಕ ಬದುಕನ್ನು ಹಸನಾಗಿಸಲು ಸುಜ್ಞಾನ ಸಂಗಮವನ್ನು ಆಯೋಜಿಸುತ್ತಿದ್ದೇವೆ ಎಂದರು.ಸುಜ್ಞಾನ ಸಂಗಮ ಕಾರ್ಯಕ್ರಮಕ್ಕಾಗಿ ಕಾರ್ಯಕ್ರಮವವಲ್ಲ ಮನಸ್ಸು ಮನಸುಗಳನ್ನು ಬೆಸೆಯುವ, ಜಾತಿ ವೈಷ್ಣವ್ಯಗಳನ್ನು ದೂರ ಮಾಡಿ ಜಾತಿ ಶ್ರೇಷ್ಠ ಎಂಬ ಮನಸ್ಥಿತಿಯನ್ನು ಬದಲಾಯಿಸಿ, ಮಾನವ ಶ್ರೇಷ್ಠ ಎಂಬ ತತ್ವವನ್ನು ಸಾರಲು ಕಳೆದ 23 ವರ್ಷಗಳಿಂದ ಈ ಕಾರ್ಯಕ್ರಮವನ್ನು ನಡೆಸಿಕೊಂಡು ಬರುತ್ತಿದ್ದೇವೆ ಇದರ ಲಾಭ ಮಠಕ್ಕಲ್ಲ ಭಕ್ತರಿಗೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಗೂಳಿಹಟ್ಟಿ ಹಾಲ ಸಿದ್ದಪ್ಪ ಮಾತನಾಡಿ ಸುಜ್ಞಾನ ಸಂಗಮ ಕಾರ್ಯಕ್ರಮದ ಮೂಲಕ ಸಮಾಜದಲ್ಲಿ ಮನಸು ಮನಸುಗಳನ್ನು ಬೆಸೆಯುವ ಸೌಹಾರ್ದ ವಾತಾವರಣವನ್ನು ನಿರ್ಮಾಣ ಮಾಡುವ ಅನುಭವ ಮಂಟಪದ ಮಾದರಿಯಲ್ಲಿ ಸರ್ವ ಜನಾಂಗದ ಭಕ್ತರು ಭಾಗವಹಿಸಿ ಸುಜ್ಞಾನವನ್ನು ಸವಿತಿರುವುದು ನಮ್ಮೆಲ್ಲರಿಗೂ ಸಂತೋಷ ತಂದಿದೆ ಶಾಂತವೀರ ಶ್ರೀಗಳು ಕೇವಲ ಬೋಧಕರಲ್ಲ ಕಷ್ಟ ಎಂದು ಬರುವ ಭಕ್ತರ ಕಷ್ಟವನ್ನು ನೀಗಿಸುವ ದೇವರಾಗಿ ಧೈರ್ಯ ತುಂಬುವ ವೀರ ಸನ್ಯಾಸಿಯಾಗಿ ನಮ್ಮ ಸಮಾಜಕ್ಕೆ ಸಿಕ್ಕಿರುವುದು ಸಮಾಜದ ಪುಣ್ಯವೇ ಸರಿ ಗುರುಗಳ ಆಜ್ಞೆಯಂತೆ ನಾವು ಕೂಡ ಜಾತ್ಯತೀತ ಮನೋಭಾವನೆಯನ್ನು ಬೆಳೆಸಿಕೊಂಡು ಸರ್ವ ಜನಾಂಗವನ್ನು ನಮ್ಮವರೆಂದು ಭಾವಿಸಿ ಬದುಕಬೇಕು ಎಂದರು.
ಕಾರ್ಯಕ್ರಮದಲ್ಲಿ ಜಾನಕಲ್ ನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷ ಮಹಾಂತೇಶ್ ದೊಡ್ಡಘಟ್ಟ
ಸಮಾರಂಭದಲ್ಲಿ ಸಂಗಮೇಶ್ವರ ಸಮುದಾಯ ಭವನ ಸಮಿತಿ , ಸಂಗಮೇಶ್ವರ ನೌಕರ ಸಂಘ , ಸಂಗಮೇಶ್ವರ ಯುವ ವೇದಿಕೆ.