ಗಿರೀಶ್ ಮಾದೇನಹಳ್ಳಿ
ರಾಜಧಾನಿ ಪೊಲೀಸ್ ಆಡಳಿತ ವ್ಯವಸ್ಥೆಯಲ್ಲಿ ದೊಡ್ಡಮಟ್ಟದ ಬದಲಾವಣೆಗೆ ರಾಜ್ಯ ಸರ್ಕಾರ ಯೋಜಿಸಿದ್ದು, ಮಹಾರಾಷ್ಟ್ರದ ಮುಂಬೈ ಮಾದರಿಯಲ್ಲಿ ‘ಬೆಂಗಳೂರು ಕಮೀಷನರೇಟ್’ ವಿಭಜನೆಗೆ ಮಹತ್ವದ ತೀರ್ಮಾನಕ್ಕೆ ಬಂದಿದೆ.
ಈ ಸಂಬಂಧ ಕೆಲವೇ ದಿನಗಳಲ್ಲಿ ಅಂತಿಮ ಆದೇಶ ಹೊರಬೀಳಲಿದ್ದು, ಎರಡು ಅಥವಾ ಮೂರು ಕಮೀಷನರ್ಗಳು ಹಾಗೂ ಸಂಚಾರ ವಿಭಾಗಕ್ಕೆ ಪ್ರತ್ಯೇಕವಾಗಿ ಡಿಜಿಪಿ ಮಟ್ಟದ ಅಧಿಕಾರಿಯನ್ನು ವಿಶೇಷ ಆಯುಕ್ತರಾಗಿ ನೇಮಿಸುವ ಸಾಧ್ಯತೆಗಳಿವೆ.ಜಾಗತಿಕ ಮಟ್ಟದಲ್ಲಿ ನಾಗಲೋಟದಲ್ಲಿ ಬೆಳೆಯುತ್ತಿರುವ ಬೆಂಗಳೂರು ನಗರದ ಸುರಕ್ಷತೆ ಹಾಗೂ ಕಾನೂನು ಮತ್ತು ಸುವ್ಯವಸ್ಥೆ ನಿರ್ವಹಣೆಗೆ ಕಮೀಷನರೇಟ್ ವಿಭಜನೆಗೆ ಅಗತ್ಯವಿದೆ. ಅದೇ ರೀತಿ ಮೂಲಭೂತ ಸಮಸ್ಯೆಯಾಗಿ ಕಾಡುತ್ತಿರುವ ಸಂಚಾರ ಸಮಸ್ಯೆಗೆ ಶಾಶ್ವತ ಪರಿಹಾರಕ್ಕೆ ಹಿರಿಯ ಐಪಿಎಸ್ ಅಧಿಕಾರಿಗೆ ಸ್ವತಂತ್ರ ನಿರ್ವಹಣೆಗೆ ವಹಿಸಲು ಸರ್ಕಾರ ಚಿಂತನೆ ನಡೆಸಿದೆ. ಈ ಸಂಬಂಧ ಮುಖ್ಯಮಂತ್ರಿ ಡಿ.ಕೆ,ಶಿವಕುಮಾರ್ ಅವರ ಅಧ್ಯಕ್ಷತೆಯಲ್ಲಿ ಗೃಹ ಮಂತ್ರಿ ಪ್ರಿಯಾಂಕ್ ಖರ್ಗೆ, ಸರ್ಕಾರದ ಮುಖ್ಯಕಾರ್ಯದರ್ಶಿ ಶಾಲಿನಿ ರಜನೀಶ್, ಗೃಹ ಇಲಾಖೆಯ ಹೆಚ್ಚುವರಿ ಮುಖ್ಯಕಾರ್ಯದರ್ಶಿ ಹಾಗೂ ರಾಜ್ಯ ಪೊಲೀಸ್ ಮಹಾನಿರ್ದೇಶಕ ಡಾ.ಎಂ.ಎ.ಸಲೀಂ ಚಿಂತನ ಮಂಥನ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ರದ್ದುಗೊಳಿಸಿ ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ರಚಿಸಿದ ಆರಂಭದಲ್ಲೇ ಪೊಲೀಸ್ ಕಮೀಷನರೇಟ್ ವಿಭಜನೆಗೂ ಸರ್ಕಾರ ಮಟ್ಟದಲ್ಲಿ ಚರ್ಚೆ ನಡೆದಿತ್ತು. ಇದಕ್ಕೆ ಆಗಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೆಂಪು ನಿಶಾನೆ ತೋರಿದ ಪರಿಣಾಮ ವಿಂಗಡಿಸುವ ಪ್ರಸ್ತಾಪನೆ ತಣ್ಣಾಗಿತ್ತು. ಆದರೆ ಜಿಬಿಎ ರಚನೆಯ ಮೂಲ ಪುರುಷರಾಗಿರುವ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು, ಕಮೀಷನರೇಟ್ ವಿಭಜನೆಗೆ ಒಲವು ತೋರಿದ್ದಾರೆ ಎಂಬ ಮಾತುಗಳು ಕೇಳಿ ಬಂದಿವೆ.
1963ರಲ್ಲಿ ಬೆಂಗಳೂರು ನಗರದ ಕಮೀಷನರೇಟ್ ಅನ್ನು ಸರ್ಕಾರ ಸ್ಥಾಪಿಸಿತ್ತು. ಆನಂತರ ಕಾಲಾನು ಕಾಲಕ್ಕೆ ಕಮೀಷನರೇಟ್ ಆಡಳಿತದಲ್ಲಿ ಬದಲಾವಣೆಗಳಾಗಿವೆ. ಇಲ್ಲಿ ಹೊಸ ಡಿಸಿಪಿ ವಿಭಾಗಗಳು, ಹೆಚ್ಚುವರಿ ಆಯುಕ್ತ, ಜಂಟಿ ಆಯುಕ್ತರ ಹುದ್ದೆಗಳು ಸೃಜನೆಯಾಗಿದ್ದವು. ಆದರೆ ಇಡೀ ಕಮೀಷನರೇಟ್ ಅನ್ನು ವಿಭಜಿಸುವ ತೀರ್ಮಾನಕ್ಕೆ ಸರ್ಕಾರಗಳು ಬಂದಿರಲಿಲ್ಲ. ಈಗ 69 ವರ್ಷಗಳ ಬಳಿಕ ಮೊದಲ ಬಾರಿಗೆ ಕಮೀಷನರೇಟ್ ಹೋಳಾಗುವ ಸಾಧ್ಯತೆಗಳು ಕಂಡು ಬಂದಿದೆ. ಪ್ರಸುತ್ತ ಕಮೀಷನರೇಟ್ ವ್ಯಾಪ್ತಿಯಲ್ಲಿ ಕಾನೂನು ವಿಭಾಗದ 11 ಡಿಸಿಪಿಗಳು ಹಾಗೂ ಸಂಚಾರದ ನಾಲ್ಕು ಡಿಸಿಪಿ ವಲಯಗಳಿವೆ. ಕಮೀಷನರ್ ಹುದ್ದೆಯೂ ಎಡಿಜಿಪಿ ಮಟ್ಟದ ಅಧಿಕಾರಿ ಇದ್ದಾರೆ. ಈಗ ವಿಭಜಿಸಿ ಸೃಜನೆಯಾಗುವ ಕಮೀಷನರೇಟ್ಗಳಿಗೆ ಎಡಿಜಿಪಿ ಅಥವಾ ಐಜಿಪಿ ಮಟ್ಟದ ಅಧಿಕಾರಿಗಳನ್ನು ಆಯುಕ್ತರಾಗಿ ನೇಮಿಸಬೇಕೇ ಎಂಬುದು ತೀರ್ಮಾನವಾಗಿಲ್ಲ. ಆದರೆ ಎಡಿಜಿಪಿ ಮಟ್ಟದ ಅಧಿಕಾರಿಗಳ ಹೆಸರು ಮುನ್ನಲೆಗೆ ಬಂದಿವೆ ಎಂದು ತಿಳಿದು ಬಂದಿದೆ. ಮುಂಬೈ ಮಾದರಿ ಹೇಗೆ?
ಸಂಚಾರಕ್ಕೆ ವಿಶೇಷ ಆಯುಕ್ತ
ಸಂಚಾರಕ್ಕಾಗಿ ಗೃಹ-ಜಿಬಿಎ ಪೈಪೋಟಿ